AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಿಷ್ಟ ರೀತಿಯಲ್ಲಿ ತಯಾರಾಗಿದೆ ಸೋಲಾರ್ ಬ್ಯಾಟರಿ ಚಾಲಿತ ಬೈಕ್; ಸದ್ದು ಮಾಡದೇ ಸುದ್ದಿಯಾದ ಟು ವೀಲರ್ ಹೇಗಿದೆ ಗೊತ್ತಾ?

ಈ ಬೈಕ್​ನ ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಮೂರು ಮೂವೆಬಲ್ ಸೋಲಾರ್ ಪ್ಯಾನೇಲ್, ಚಾರ್ಜರ್ ಇಡೋದಕ್ಕೆ ಅಂತ ವಾಟರ್ ಪ್ರೂಫ್ ಬಾಕ್ಸ್ ಬೈಕ್‌ನಲ್ಲಿದೆ. 3 ಗಂಟೆಗಳ ಕಾಲ ಜಾರ್ಜ್ ಮಾಡಿದ 1 ಬ್ಯಾಟರಿ 70 ಕಿ.ಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.

ವಿಶಿಷ್ಟ ರೀತಿಯಲ್ಲಿ ತಯಾರಾಗಿದೆ ಸೋಲಾರ್ ಬ್ಯಾಟರಿ ಚಾಲಿತ ಬೈಕ್; ಸದ್ದು ಮಾಡದೇ ಸುದ್ದಿಯಾದ ಟು ವೀಲರ್ ಹೇಗಿದೆ ಗೊತ್ತಾ?
ಸುರತ್ಕಲ್ ಎನ್‌ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಅಭಿವೃದ್ಧಿ ಪಡಿಸಲಾದ ಈ ವಿನೂತನ ಬೈಕ್‌
TV9 Web
| Edited By: |

Updated on: Nov 24, 2021 | 8:46 AM

Share

ಉಡುಪಿ: ಅದು ಸದ್ದೇ ಮಾಡದ ಸ್ಪೆಷಲ್ ಬೈಕ್. ಹೊಗೆಯಂತು ಉಗುಳೋದೆ ಇಲ್ಲ. ಡೀಸೆಲ್‌, ಪೆಟ್ರೋಲ್ (Petrol) ಇದಕ್ಕೆ ಬೇಡವೇ ಬೇಡ. ಹೀಗೊಂದು ವಿನೂತನ ಬೈಕ್ ಕಳೆದೆರಡು ತಿಂಗಳಿನಿಂದ ಕುದುರೆ ಮುಖದ ದಟ್ಟ ಕಾನನದ ಮಧ್ಯೆ ಓಡಾಡುತ್ತಿದೆ. ಸದ್ದು ಮಾಡದೇ ಸುದ್ದಿಯಾದ ಬೈಕ್ (Bike) ಹೇಗಿದೆ ಗೊತ್ತಾ? ಇದು ವಿಧ್ ಯುಗ್ 4.0 ಇ ಬೈಕ್. ಸುರತ್ಕಲ್ ಎನ್‌ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಅಭಿವೃದ್ಧಿ ಪಡಿಸಲಾದ ಈ ವಿನೂತನ ಬೈಕ್‌ಗೆ ಪೆಟ್ರೋಲ್, ಡೀಸೆಲ್‌ ಅಗತ್ಯವಿಲ್ಲ. ಏಕೆಂದರೆ ಇದು ಸೋಲಾರ್ ಶಕ್ತಿಯಿಂದ ಓಡಾಡುವ ಡಿಫರೆಂಟ್ ಟು ವೀಲರ್. ಸೌರಶಕ್ತಿಯ ಬ್ಯಾಟರಿ ಬಳಸಲ್ಪಡುದ್ದರಿಂದ ಸ್ಕ್ರೋಕ್ ಇಂಜಿನ್ ಇದಕ್ಕಿಲ್ಲ. ಹೀಗಾಗಿ ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುವ ಸದ್ದು ಬರುವುದಿಲ್ಲ. ಕಾಡುಗಳ್ಳರಿಗೆ ಬೈಕ್ ಬಂದಿದ್ದೇ ಗೊತ್ತಾಗುವುದಿಲ್ಲ. ಅಷ್ಟು ವಿಶಿಷ್ಟ ರೀತಿಯಲ್ಲಿ ಸೋಲಾರ್ ಬ್ಯಾಟರಿ ಚಾಲಿತ ಬೈಕ್ ತಯಾರಿಸಲಾಗಿದೆ.

ಈ ಬೈಕ್​ನ ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಮೂರು ಮೂವೆಬಲ್ ಸೋಲಾರ್ ಪ್ಯಾನೇಲ್, ಚಾರ್ಜರ್ ಇಡೋದಕ್ಕೆ ಅಂತ ವಾಟರ್ ಪ್ರೂಫ್ ಬಾಕ್ಸ್ ಬೈಕ್‌ನಲ್ಲಿದೆ. 3 ಗಂಟೆಗಳ ಕಾಲ ಜಾರ್ಜ್ ಮಾಡಿದ 1 ಬ್ಯಾಟರಿ 70 ಕಿ.ಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ. ಇನ್ನೂ ಇದನ್ನು ತಯಾರಿಸಲು 1.50 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಸಂಶೋಧನಾ ವಿಭಾಗ ಮುಖ್ಯಸ್ಥ ಪ್ರೋ ಪೃಥ್ವಿ ರಾಜ್ ಹೇಳಿದ್ದಾರೆ.

ಸದ್ಯ ಕುದುರೆಮುಖದಲ್ಲಿ ಈ ಬೈಕ್ ಅನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ವಿಶೇಷ ಬೈಕ್‌ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒದಗಿಸುವ ಬಗ್ಗೆಯೂ ಯೋಚನೆ ಇದೆ ಎಂದು ಸಂಶೋಧನಾ ವಿಭಾಗ ಮುಖ್ಯಸ್ಥ ಪ್ರೋ ಪೃಥ್ವಿ ರಾಜ್ ತಿಳಿಸಿದ್ದಾರೆ.

solar bike

ಸೋಲಾರ್ ಬ್ಯಾಟರಿ ಚಾಲಿತ ಬೈಕ್

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್​ನಲ್ಲಂತೆ ರೀಲ್ ಲೈಫ್​ನಲ್ಲೂ ಓಡಿಸಿದ್ದು ಥರಾವರಿ ಬೈಕ್​​ಗಳು

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್