AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನರಾರಂಭ

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಎಲ್ಲೆಂದರಲ್ಲಿ ಗುಡ್ಡಕುಸಿತ ಮುಂದುವರಿದಿದೆ. ಅಂಕೋಲಾದ ಶಿರೂರು, ಕುಮಟಾದ ಬರ್ಗಿ, ಕುಮಟಾ-ಸಿದ್ದಾಪುರ ಮಾರ್ಗದಲ್ಲೂ ಗುಡ್ಡ ಕುಸಿದಿತ್ತು. ಸದ್ಯ ತೆರವು ಕಾರ್ಯಾಚರಣೆ ನಡೆದಿದ್ದು ಕುಮಟಾ-ಸಿದ್ದಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.

ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನರಾರಂಭ
ಕುಮಟಾ-ಸಿದ್ದಾಪುರ ಮಾರ್ಗದಲ್ಲಿ ಗುಡ್ಡ ಕುಸಿತ (ಹಳೆ ಚಿತ್ರ)
ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು|

Updated on: Jul 21, 2024 | 8:28 AM

Share

ಕಾರವಾರ, ಜುಲೈ.21: ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭವಾಗಿದೆ. ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣನ್ನು ಸಿಬ್ಬಂದಿ ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ತಾಲ್ಲೂಕಾಡಳಿತ ಮುಕ್ತಗೊಳಿಸಿಕೊಟ್ಟಿದೆ.

ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಸಮೀಪ ಗುಡ್ಡ ಕುಸಿದಿತ್ತು. ಕುಮಟಾ-ಸಿದ್ದಾಪುರ ರಸ್ತೆಯ ಭಯಾನಕ ಭೂಕುಸಿತ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಮೇಲೆ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಮರ, ಮಣ್ಣು ಬಿದ್ದಿತ್ತು. ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿದ ಹಿನ್ನೆಲೆ ಕುಮಟಾ-ಸಿದ್ದಾಪುರ ರಸ್ತೆ ಎರಡು ದಿನ ಬಂದ್ ಮಾಡಲಾಗಿತ್ತು. ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭವಾಗಿದೆ.

ಗಂಗಾವಳಿ ನದಿಗೆ ಬಿದ್ದಿದ್ದ LPG ಟ್ಯಾಂಕರ್ ಹೊರಕ್ಕೆ; ಆತಂಕ ದೂರ

ಕಳೆದ ಒಂದು ವಾರದಿಂದ ಸುರಿಯುತ್ತಿರೋ ಧಾರಕಾರ ಮಳೆಯಿಂದ ಇಡೀ ಉತ್ತರ ಕನ್ನಡವೇ ಅಲ್ಲೋಲ, ಕಲ್ಲೋಲವೇ ಆಗೋಗಿದೆ. ಅದ್ರಲ್ಲೂ ಅಂಕೋಲಾದ ಶಿರೂರು ಗುಡ್ಡ ಕುಸಿತ ಬೆಚ್ಚಿಬೀಳುವಂತೆ ಮಾಡಿತ್ತು. ಗುಡ್ಡ ಕುಸಿತದಲ್ಲಿ 10 ಮಂದಿ ಬಲಿಯಾಗಿದ್ರು. ರಸ್ತೆ ಬದಿ ನಿಂತಿದ್ದ ಲಾರಿ, LPG ಟ್ಯಾಂಕರ್​ ಲಾರಿ ನೋಡ ನೋಡ್ತಿದ್ದಂತೆಯೇ ನದಿಯ ಪಾಲಾಗಿತ್ತು. ಆದ್ರೆ ಕಳೆದ ನಾಲ್ಕು ದಿನಗಳಿಂದಲೂ ನದಿಯಲ್ಲೇ ಎಲ್​ಪಿಜಿ ಟ್ಯಾಂಕರ್ ತೆಲುತ್ತಲೇ ಇತ್ತು. ಇದು ಗ್ರಾಮಸ್ಥರಿಗರ ಆತಂಕ ತಂದೊಡ್ಡಿತ್ತು. ಇದೀಗ ಸತತ 3 ದಿನಗಳಿಂದ ಪರಿಶ್ರಮದ ಮೂಲಕ ಬರೋಬ್ಬರಿ 1,800 ಕೆಜಿ LPG ಗ್ಯಾಸ್​​ನ್ನ ನೀರಿಗೆ ಬಿಡಲಾಗಿದೆ. ಎಲ್​ಪಿಜಿ ಗ್ಯಾಸ್ ನೀರಿಗೆ ಬಿಟ್ಟು ಟ್ಯಾಂಕರ್​ನನ್ನ ಹೊರತೆಗೆಯಲಾಗಿದೆ. ಇಷ್ಟು ದಿನ 12ಕ್ಕೂ ಹೆಚ್ಚು ಗ್ರಾಮಗಳು ಆತಂತದಲ್ಲಿದ್ವು. ಇದೀಗ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರು: ಮಳೆಗಾಲಕ್ಕೆ ಸಜ್ಜಾದ ಬಿಬಿಎಂಪಿ, ಸಹಾಯವಾಣಿ ತೆರೆದು ಸಕಲ ಸಿದ್ಧತೆ

ಶಿರೂರು ಗುಡ್ಡ ಕುಸಿತದಿಂದ ಬೀದಿಗೆ ಬಂದ 38ಕ್ಕೂ ಹೆಚ್ಚು ಕುಟುಂಬ!

ಶಾಲೆಯೇ ಗಂಜಿಕೇಂದ್ರವಾಗಿದೆ. ಮನೆಯನ್ನು ತೊರೆದು ಗಂಜಿಕೇಂದ್ರದಲ್ಲಿ ಆಶ್ರಯ ಪಡೆಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರಿಗೆ ಮನೆಯೇ ಇಲ್ಲದಾಗಿದ್ರೆ. ಇನ್ನು ಕೆಲವರ ಮನೆ ಭಾಗಶಃ ನಾಶವಾಗಿದೆ. ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ಬರೋಬ್ಬರಿ 38ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಉಟ್ಟ ಬಟ್ಟೆಯಲ್ಲೇ ಗಂಜಿಕೇಂದ್ರಕ್ಕೆ ಬಂದಿದ್ದಾರೆ. ಉಳುವರೆ ಗ್ರಾಮಸ್ಥರು ಕಣ್ಣೀರು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ.

5 ದಿನದಿಂದ ಚಾತಕ ಪಕ್ಷಿಯಂತೆ ಮಾಲೀಕರಿಗೆ ಶ್ವಾನ ಹುಡುಕಾಟ!

ಶಿರೂರು ಗುಡ್ಡ ಕುಸಿತ ಹತ್ತಾರು ಕರುಣಾಜನಕ ಕಥೆಗಳನ್ನೇ ಹೇಳ್ತಿದೆ. ಉಳುವರೆ ಗ್ರಾಮದಲ್ಲಿ 6 ಮನೆಗಳೇ ಕೊಚ್ಚಿಹೋಗಿದ್ವು. ಇದ್ರಲ್ಲಿ ಹಲವರು ಬಲಿಯಾಗಿದ್ರು. ಇದೀಗ ಮನೆ ಮಾಲೀಕರು ಇಲ್ಲದಿದ್ರಿಂದ ಮಾಲೀಕರಿಗಾಗಿ ಶ್ವಾನ ಹುಡುಕಾಡ್ತಿರೋ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುತ್ತೆ. ಕೊಚ್ಚಿ ಹೋಗಿರೋ ಮನೆಯ ಸ್ಥಳದಲ್ಲೇ ತನ್ನ ಮೂಕರೋಧನೆಯನ್ನ ಹೊರಹಾಕ್ತಿದೆ. ತನ್ನವರಿಗೆ ಮಳೆ, ಗಾಳಿ, ಚಳಿ ಎನ್ನದೇ ಬರುವಿಕೆಗಾಗಿ ಕಾಯುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ