AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್​

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಶಿರಸಿಯ ಗಣೇಶ ನಗರದ ಅಂಗನವಾಡಿ ಆವರಣದಲ್ಲಿ 55 ವರ್ಷದ ಗೌರಿ ನಾಯ್ಕ್​ ಅವರು ಬಾವಿ ತೋಡುತ್ತಿದ್ದು, ಇದೀಗ ಅಧಿಕಾರಿಗಳು ಬಾವಿ ಮೇಲೆ ಮರದ ಹಲಗೆಗಳನ್ನು ಅಡ್ಡ ಹಾಕಿದ್ದಾರೆ. ಇದರಿಂದ ಗೌರಿ ನಾಯ್ಕ್​ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್​
ಗೌರಿ ನಾಯ್ಕ್​
TV9 Web
| Edited By: |

Updated on: Feb 20, 2024 | 6:16 PM

Share

ಉತ್ತರ ಕನ್ನಡ (ಫೆಬ್ರವರಿ.20): ಅಂಗನವಾಡಿ ಮಕ್ಕಳಿಗೆ ಕುಡಿಯಲು ನೀರಿಗಾಗಿ ಉತ್ತರ ಕನ್ನಡ (Uttara Kannada)ಜಿಲ್ಲೆಯ ಜಿಲ್ಲೆಯ ಶಿರಸಿಯ ಗಣೇಶ್‌ನಗರದಲ್ಲಿ ಗೌರಿ ನಾಯ್ಕ್ (gauri naik)ಎನ್ನುವರು ಜನವರಿ 30ರಿಂದ ಬಾವಿ ತೋಡುತ್ತಿರುವುದನ್ನು ನಿಲ್ಲಿಸುವಂತೆ ಅಧಿಕಾರಿಗಳು ಸಚಿವ ಮಂಕಾಳು ವೈದ್ಯ ಮನವಿ ಮಾಡಿದ್ದಾರೆ. ಆದರೂ ಬಿಡದ ಗೌರಿ ನಾಯ್ಕ್ , ನಾನು ಜೀವ ಬಿಟ್ಟೆನೂ. ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ತಮ್ಮ ಕೆಲಸ ಮುಂದುವರಿಸಿದ್ದಾರೆ. ಇನ್ನು ನಿನ್ನೆ(ಫೆ.19) ಅಧಿಕಾರಿಗಳು ಬಂದು ಬಾವಿ ಮೇಲೆ ಮರದ ಹಲಗೆ ಅಡ್ಡ ಇಟ್ಟಿದ್ದು, ಇದಕ್ಕೆ ಗೌರಿ ನಾಯ್ಕ್​ ಆಕ್ರೋಶಗೊಂಡಿದ್ದಾರೆ. ಅಲ್ಲದೇ ನಾನು ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳು ಹಗಲೆ ಇಟ್ಟು ಹೋಗಿರುವ ಬಗ್ಗೆ ಇಂದು(ಫೆ.20) ಮಾಧ್ಯಮಗಳ ಜೊತೆ ಮಾತನಾಡಿದ ಗೌರಿ ನಾಯ್ಕ್, ಕಳೆದ 20 ದಿನಗಳಿಂದ 30 ಅಡಿ ಬಾವಿ ತೆಗೆದಿದ್ದೇನೆ. ನಿನ್ನೆ(ಫೆ.19) ಸಾಯಂಕಾಲ 6 ಗಂಟೆ ವರೆಗೂ ಬಾವಿ ತೆಗೆದಿದ್ದೇನೆ. ನಿನ್ನೆ ನಾನು ಮನೆಗೆ ಹೋದ ಬಳಿಕ ಅಧಿಕಾರಿಗಳು ಬಂದು ಹಲಗೆಯಿಂದ ಬಾವಿ ಮುಚ್ಚಿದ್ದಾರೆ. ಇನ್ನೂ ನಾಲ್ಕೈದು ದಿನಗಳಲ್ಲಿ ನೀರು ಬರುತಿತ್ತು. ನಾನು ಸಮಾಜಕ್ಕೆ ನನ್ನಿಂದ ಸೇವೆ ಸಿಗಲಿ ಎಂಬ ಉದ್ದೆಶಕ್ಕೆ ಮಾಡುತ್ತಿದ್ದೇನೆ. ನಾನು ಯಾರಿಂದಲೂ ಹಣ ಕೇಳಿಲ್ಲ, ಸನ್ಮಾನ ಕೇಳಿಲ್ಲ. ನನ್ನ ಆತ್ಮ ತೃಪ್ತಿಗಾಗಿ ಮನೆಯಲ್ಲಿ‌ ಮಕ್ಕಳ ಕಡೆಯಿಂದ ಬೈಸ್ಕೊಂಡು ಬಾವಿ ತೆಗೆಯುತ್ತಿದ್ದೇನೆ. ನಾನು ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ತಮ್ಮ ನಿರ್ಧಾರ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಾವಿ ತೋಡಲು ಗೌರಿ ನಾಯ್ಕ್​ಗೆ ಅಡ್ಡಿ: ಸ್ಪಷ್ಟನೆ ನೀಡಿದ ಉತ್ತರ ಕನ್ನಡ ಸಿಇಒ

ನೀವು ಪ್ರಚಾರಕ್ಕಾಗಿ ಇದನ್ನು ಮಾಡುತ್ತಿದ್ದಿರಿ. ಬಾವಿ ತೆಗೆಯುದನ್ನ ಇಲ್ಲಿಗೆ ನಿಲ್ಲಿಸಿ. ನಾವು ನಮ್ಮ ಇಲಾಖೆಯಿಂದ ಬಾವಿ ತೆಗೆದು ನೀರು ಕೊಡುತ್ತೆವೆ ಎಂದು ಅಧಿಕಾರಿ ಒಬ್ಬರು ನಂಗೆ ಕರೆ ಮಾಡಿ ಹೇಳಿದ್ರು. ನಾನು ಇವರಿಂದ ಏನು ಕೇಳುತ್ತಿದ್ದೆನೆ. ನಿಸ್ವಾರ್ಥ ಸೇವೆಗೂ ನನಗೆ ಅವಕಾಶ ಕೊಡುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ ಗೌರಿ ನಾಯ್ಕ್​, ನಾನು ಯಾವುದೇ ಕಾರಣಕ್ಕೂ ನನ್ನ ಶ್ರಮ ವ್ಯರ್ಥ ಆಗಲು ಬಿಡುವುದಿಲ್ಲ. ನನ್ನ ಕೆಲಸಕ್ಕೆ ಬೇಂಕತಲೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ಹೊರಹಾಕಿದರು.

ಸಚಿವ ಮಂಕಾಳು ವೈದ್ಯ ಬಂದು ನಂಗೆ ಶಾಲು ಹಾರ ಹಾಕಿದ್ರು. ಇದೆಲ್ಲ ನಂಗೆ ಬೇಡ ಬಾವಿ ತೆಗೆಯಲು ಬಿಡಿ ಅಂತಾ ಹೇಳಿದೆ. ಅಜ್ಜಿ ನಿಮಗೆ ಕಷ್ಟ ಆಗುತ್ತೆ ಬೇಡ ಇಲ್ಲಿಗೆ ನಿಲ್ಲಿಸಿ ಅಂದ್ರು. ನನಗೆ ಯಾವುದೇ ಕಷ್ಟ ಆಗುವುದಿಲ್ಲ, ಅವಕಾಶ ಕೊಡಿ. ನೀರು ಬಂದ ಬಳಿಕ ನಿಮಗೆ ಬಾವಿ ಕೊಡುತ್ತೇನೆ. ನೀವು ಎನ್ ಮಾಡುವುದು ಇದೇ ಅದನ್ನ ಮಾಡಿಕೊಳ್ಳಿ. ಆದ್ರೆ ನೀರು ಬರುವವರೆಗೂ ನಂಗೆ ಬಿಟ್ಟ ಬಿಡಿ ಎಂದು ಹೇಳಿದ್ದೆ. ಆದ್ರೆ ನಿನ್ನೆ ಒಮ್ಮಿಂದ ಒಮ್ಮೆಲೆ ಬಂದು ಅಧಿಕಾರಿಗಳು ಹಲಗೆಯಿಂದ ಮುಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?