AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲೇ ಇದೆ ರಾಮಾಯಣದ ಕರ್ತೃ ವಾಲ್ಮೀಕಿ ಹುಟ್ಟಿ ಬೆಳೆದು ಮೋಕ್ಷ ಪಡೆದ ಸ್ಥಳ; ಯಾವುದು ಗೊತ್ತಾ?

ಅಯೋದ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ರಾಮಾಯಣದ ಜೊತೆ ಸಂಬಂಧ ಹೊಂದಿರುವ ಕರ್ನಾಟಕದ ಅನೇಕ ಸ್ಥಳಗಳ ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಈ ನಡುವೆ, ಅಯೋದ್ಯೆಯ ಶ್ರೀರಾಮ ಚರಿತೆಯನ್ನು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ ಹುಟ್ಟಿ ಬೆಳೆದು, ತಮ್ಮ ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೊಕ್ಷ ಪಡೆದ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕದಲ್ಲೇ ಇದೆ ರಾಮಾಯಣದ ಕರ್ತೃ ವಾಲ್ಮೀಕಿ ಹುಟ್ಟಿ ಬೆಳೆದು ಮೋಕ್ಷ ಪಡೆದ ಸ್ಥಳ; ಯಾವುದು ಗೊತ್ತಾ?
ಶ್ರೀರಾಮ ಚರಿತೆ ಬರೆದ ವಾಲ್ಮೀಕಿ ಹುಟ್ಟಿ ಬೆಳೆದು ಮೋಕ್ಷ ಪಡೆದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jan 08, 2024 | 6:10 PM

Share

ಚಿಕ್ಕಬಳ್ಳಾಪುರ, ಜ.7: ಅಯೋದ್ಯೆಯಲ್ಲಿ (Ayodhya) ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಶ್ರೀರಾಮ ಚರಿತೆಯನ್ನು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಮಹರ್ಷಿ (Valmiki Maharshi) ಪ್ರತಿಮೆಯೂ ಅನಾವರಣ ಮಾಡಲಾಗುತ್ತಿದೆ. ಈ ನಡುವೆ, ವಾಲ್ಮೀಕಿ ಹುಟ್ಟಿ ಬೆಳೆದು, ತಮ್ಮ ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೊಕ್ಷ ಪಡೆದ ಸ್ಥಳ ಕರ್ನಾಟಕದಲ್ಲೇ ಇದೆ ಎಂಬ ಹೆಮ್ಮೆಯ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಬಾಲ್ಯ, ಯೌವನ, ಸಂಸಾರ ಸೇರಿದಂತೆ ನಾರದರಿಂದ ಮೊಕ್ಷ ಪಡೆದು ಜ್ಞಾನಿಯಾದರಂತೆ. ಹೌದು, ತಲಕಾಯಲಬೆಟ್ಟ ಗ್ರಾಮದ ಬಳಿ ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟು ಇಲ್ಲಿರುವ ಗುಹೆಯಲ್ಲಿ ಜಪ ತಪ ಜ್ಞಾನ ಸಂಪಾದಿಸಿದರಂತೆ. ಇದರ ಕುರುಹುಗಾಗಿ ಬೆಟ್ಟದಲ್ಲಿ ಗುಹೆ, ಶಿವಲಿಂಗ ಇದ್ದು, ಹೊರಗೆ ವಾಲ್ಮೀಕಿ ಮಹರ್ಷಿಯ ದೇವಸ್ಥಾನ ಪ್ರತಿಮೆ ಇದೆ.

ಇದನ್ನೂ ಓದಿ: ಹೊನ್ನಾವರಕ್ಕೂ ಬಂದಿದ್ದರು ರಾಮ-ಸೀತಾ; ಇಲ್ಲಿನ ರಾಮತೀರ್ಥದಲ್ಲಿದೆ ಅನೇಕ ಔಷಧಿ ಗುಣ

ಅಯೋಧ್ಯೆಯಲ್ಲಿ ರಾಮಾಯಣ ಮಹಾಕಾವ್ಯದ ಕತೃ ಮಹರ್ಷಿ ವಾಲ್ಮಕಿ ಪ್ರತಿಮೆಯನ್ನು ಶ್ರೀರಾಮರ ಪ್ರತಿಮೆ ಉದ್ಘಾಟನೆ ದಿನವೇ ಅನಾರಣ ಮಾಡುವುದನ್ನು ಕೇಳಿ ಗ್ರಾಮಸ್ಥರು ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ಅಯೋದ್ಯೆಯ ಶ್ರೀರಾಮನ ಕಥೆಯನ್ನು ಪ್ರಪಂಚಕ್ಕೆ ಸಾರಿದ್ದ ವಾಲ್ಮೀಕಿ ಮಹರ್ಷಿಯ ಗೌರವಾರ್ಥ, ಅಯೋದ್ಯೆಯಲ್ಲಿ ಸ್ಥಾನ ಕೊಟ್ಟಿರುವುದಕ್ಕೆ ತಲಕಾಯಲಬೆಟ್ಟ ಗ್ರಾಮಸ್ಥರ ಸಂತೋಷಕ್ಕೆ ಕಾರಣವಾಗಿದೆ. ಆದರೆ ಮಹಾನ್ ಮಹರ್ಷಿಯ ಜನ್ಮ ಸ್ಥಳ ಎನ್ನಲಾದ ಹಾಗೂ ಅವರು ತಪಸ್ಸು ಮಾಡಿದ್ದ ಗುಹೆ ಎನ್ನಲಾದ ಸ್ಥಳ ಅಭಿವೃದ್ಧಿಯಿಂದ ವಂಚಿತವಾಗಿರುವುದು ವಿಪರ್ಯಾಸವೇ ಸರಿ.

ಶ್ರೀರಾಮನ ಮತ್ತಷ್ಟು ವಿಚಾರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sun, 7 January 24

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು