ಹೊಳೆನರಸೀಪುರದಲ್ಲಿ ದೂರು ದಾಖಲಿಸಿದ ಸಂತ್ರಸ್ತೆಯನ್ನು ರೇವಣ್ಣನ ಬೆಂಗಳೂರು ಮನೆಗೆ ಕರೆತಂದ ಎಸ್ಐಟಿ ಅಧಿಕಾರಿಗಳು
ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗೇ, ಸ್ಥಳದ ಮಹಜರ್ ನಡೆಸಲು ಅವರನ್ನು ಅಧಿಕಾರಿಗಳು ಇಲ್ಲಿಗೆ ಕರೆತಂದಿರುತ್ತಾರೆ. ಶನಿವಾರದಂದು ಬಂಧನಕ್ಕೊಳಗಾಗಿರುವ ರೇವಣ್ಣರನ್ನು 4-ದಿನ ಎಸ್ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಕ್ಸ್ ಟೇಪುಗಳ ಇನ್ನೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿಮಾಡಲಾಗಿದೆ.
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಹೊಳೆನರಸೀಪುರದ ಪೊಲೀಸ್ ಠಾಣೆಯಲ್ಲಿ ದೂರರು ದಾಖಲಿಸಿರುವ ಸಂತ್ರಸ್ತೆಯೊಬ್ಬರನ್ನು (victim) ಇಂದು ನಗರದ ಬಸವನಗುಡಿಯಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ (HD Revanna ) ಮನೆಗೆ ಕರೆತರಲಾಯಿತು. ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಪೊಲೀಸ್ ವಾಹನದಲ್ಲಿ ಸ್ಥಳದ ಮಹಜರ್ ಗಾಗಿ ಕರೆತಂದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಧಿಕಾರಿಗಳಲ್ಲಿ ಹೆಚ್ಚಿನವರು ಮಹಿಳಾ ಸಿಬ್ಬಂದಿಯಾಗಿದ್ದಾರೆ. ಸಂತ್ರಸ್ತೆಯನ್ನು ಕೊನೆಯಲ್ಲಿ ಜೀಪ್ ನಿಂದ ಕೆಳಗಿಳಿಸಿ ಮನೆಯೊಳಗೆ ಕರೆದೊಯ್ಯಲಾಗುತ್ತದೆ. ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗೇ, ಸ್ಥಳದ ಮಹಜರ್ ನಡೆಸಲು ಅವರನ್ನು ಅಧಿಕಾರಿಗಳು ಇಲ್ಲಿಗೆ ಕರೆತಂದಿರುತ್ತಾರೆ. ಶನಿವಾರದಂದು ಬಂಧನಕ್ಕೊಳಗಾಗಿರುವ ರೇವಣ್ಣರನ್ನು 4-ದಿನ ಎಸ್ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಕ್ಸ್ ಟೇಪುಗಳ ಇನ್ನೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಪ್ರಕರಣ, ಇದು ರಾಜಕೀಯ ಷಡ್ಯಂತ್ರ, ಬಂಧನ ಬಳಿಕ ಹೆಚ್ಡಿ ರೇವಣ್ಣ ಫಸ್ಟ್ ರಿಯಾಕ್ಷನ್
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್ಬಾಸ್ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್

