AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾಯ್ತು ಬಬಲಾದಿ ಸದಾಶಿವಮುತ್ಯಾರ ಮಠದ ಕಾಲಜ್ಞಾನ ಭವಿಷ್ಯ; 9 ತಿಂಗಳ ಹಿಂದಿನ ವಿಡಿಯೋ ಈಗ ವೈರಲ್​

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಜಾತ್ರೆಯಲ್ಲಿ ಕಾಲಜ್ಞಾನವನ್ನು ಓದಲಾಗುತ್ತದೆ.

ನಿಜವಾಯ್ತು ಬಬಲಾದಿ ಸದಾಶಿವಮುತ್ಯಾರ ಮಠದ ಕಾಲಜ್ಞಾನ ಭವಿಷ್ಯ; 9 ತಿಂಗಳ ಹಿಂದಿನ ವಿಡಿಯೋ ಈಗ ವೈರಲ್​
ಬಬಲಾದಿ ಮಠದ ಪೀಠಾಧಿಪತಿ‌ ಸಿದ್ದರಾಮಯ್ಯ ಹೋಳಿಮಠ
TV9 Web
| Edited By: |

Updated on:Nov 29, 2021 | 4:49 PM

Share

ವಿಜಯಪುರ: ತಿರುಪತಿಯಲ್ಲಿ ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಮುಂಚೆಯೇ ಬಬಲಾದಿ ಸದಾಶಿವಮುತ್ಯಾರ ಮಠದ (Babaladi Sadashiv Mutya mutt) ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಬಬಲಾದಿ ಮಠದ ಪೀಠಾಧಿಪತಿ‌ ಸಿದ್ದರಾಮಯ್ಯ ಹೋಳಿಮಠ ನುಡಿದ ಕಾಲಜ್ಞಾನ ಈಗ ನಿಜವಾಗಿದೆ. ಕಳೆದ ಶಿವರಾತ್ರಿ ಜಾತ್ರೆ ವೇಳೆ ಆಂಧ್ರ-ತೆಲಗು ರಾಜ್ಯಕ್ಕೆ ಕೇಡು ಎಂದು ಮೊದಲೇ ಸ್ವಾಮೀಜಿ ಕಾಲಜ್ಞಾನ ಭವಿಷ್ಯ ಹೇಳಿದ್ದರು. ಆಂಧ್ರ ಪ್ರದೇಶಕ್ಕೆ, ತೆಲಗು ಮಾತನಾಡುವ ರಾಜ್ಯಕ್ಕೆ ಜಲ‌ಕಂಟಕ ಇದೆ ಎಂದು ತಿಳಿಸಿದ್ದರು. ಸಾಮಾಜಿಕ ತಾಲ‌ತಾಣದಲ್ಲಿ ಸ್ವಾಮೀಜಿ ನುಡಿದಿರುವ ಕಾಲಜ್ಞಾನ ಈಗ ವೈರಲ್ ಆಗಿದೆ.

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಜಾತ್ರೆಯಲ್ಲಿ ಕಾಲಜ್ಞಾನವನ್ನು ಓದಲಾಗುತ್ತದೆ.

ಪುನೀತ್ ಸಾವಿನ ಬಗ್ಗೆಯೂ ಮುಂಚೆಯೇ ಭವಿಷ್ಯ ನುಡಿದಿತ್ತಾ ಬಬಲಾದಿ ಮಠ? ಓರ್ವ ಗಣ್ಯ ವ್ಯಕ್ತಿಯ ಏರಿಳಿತವಾಗುತ್ತದೆ ಎಂದು ಸ್ವಾಮೀಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದರಂತೆ ನಟ ಪುನೀತ್ ರಾಜ್ ಕುಮಾರ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆಯೂ ಈಗ ಮಾತುಗಳು ಕೇಳಿಬರುತ್ತಿದೆ. ಇನ್ನು ಸಿಎಂ ಬದಲಾವಣೆ ಬಗ್ಗೆ, ರಾಜಕೀಯ ವ್ಯಕ್ತಿಯ ಏರಿಳಿತ ಎಂದು ಸ್ವಾಮೀಜಿ ಹೇಳಿದ್ದರು. ಅದರಂತೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ, ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಬಬಲಾದಿ ಕಾಲಜ್ಞಾನದಲ್ಲಿ ಉಲ್ಲೇಖವಾಗಿತ್ತು. ಆ ಪ್ರಕಾರ ರಾಜಕೀಯದಲ್ಲಿ ಒಂದೇ ಪಕ್ಷದ ನಾಯಕರಗಳ ನಡುವೆ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಸ್ವಾಮೀಜಿ ಸಿದ್ದರಾಮಯ್ಯ ಹೋಳಿಮಠ ನುಡಿದಿದ್ದರು. ಈ ಭವಿಷ್ಯ ಕೂಡ ನಿಜವಾಗಿದೆ. ಅಲ್ಲದೇ ಅಮೇರಿಕಾ, ಇರಾನ್-ಇರಾಕ್ ದೇಶಗಳಿಗೆ ಕೇಡು ಎಂದು ಬಬಲಾದಿ ಶ್ರೀಗಳು ಹೇಳಿದ್ದರು. ಈಗಾಗಲೇ ತಾಲಿಬಾನ್ ಅಘ್ಪಾನಿಸ್ತಾನ್​ ಮತ್ತು ಅಮೇರಿಕಾಕ್ಕೆ ಸಂಚಲನ ಉಂಟುಮಾಡಿದೆ.  ಬಬಲಾದಿಯ ಕಾಲಜ್ಞಾನ ಎಂದೂ ಸುಳ್ಳಾಗಲ್ಲಾ ಎಂದು ಭಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ಕಾನೂನುಬಾಹಿರವಾಗಿ ಸರ್ಕಾರದಿಂದ ಅನುದಾನ ಪಡೆದಿದ್ದಾರೆ; ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ

Published On - 10:45 am, Fri, 26 November 21

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ