ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ವಿಜಯಪುರ (Vijayapura) ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವು
Edited By:

Updated on: Jun 18, 2024 | 5:36 PM

ವಿಜಯಪುರ, ಜೂ.18: ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ ವಿಜಯಪುರ (Vijayapura) ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ನಡೆದಿದೆ. ರೋಹಿತ್ ಅನಿಲ್ ಚವ್ಹಾಣ್(8) ಹಾಗೂ ವಿಜಯ ಪಿಂಟು ಚವ್ಹಾಣ್(16) ಮೃತರು. ಕೆರೆಯಲ್ಲಿ ಮೀನು ಹಿಡಿಲು ತೆರಳಿದ್ದಾಗ ವಿದ್ಯುತ್ ತಂತಿ ತುಂಡಾಗಿ ಕೆರೆಗೆ ಬಿದ್ದಿದ್ದನ್ನ ಗಮನಿಸದೆ ಇಬ್ಬರು ಬಾಲಕರು ಕೆರೆಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

2 ಬೈಕ್​​ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

ಚಿತ್ರದುರ್ಗ: ಚಿತ್ರದುರ್ಗದ ಜೈಲ್ ರಸ್ತೆಯಲ್ಲಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದರೆ,  ಇಬ್ಬರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈವರೆಗೆ ಮೃತ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಈ ಕುರಿತು ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಲಾರಿ ಡಿಕ್ಕಿ: ಕೂಡಲಸಂಗಮಕ್ಕೆ ತೆರಳುತ್ತಿದ್ದ ಬಾಲಕರಿಬ್ಬರ ದುರ್ಮರಣ

ಅಂಗಡಿಗಳ ಸೆಟರ್ಸ್ ಕೀಲಿ ಮುರಿದು ಸರಣಿ ಕಳ್ಳತನ

ಬಾಗಲಕೋಟೆ: ಇಳಕಳ್​ ನಗರದ ಬಸವೇಶ್ವರ ಸರ್ಕಲ್​​ ಬಳಿ ನಾಲ್ಕು ಅಂಗಡಿ ಹಾಗೂ N.H. ಸರ್ವಿಸ್​ ರಸ್ತೆಯ ಹನುಮಸಾಗರ ರಸ್ತೆಯಲ್ಲಿ ಮುಂಜಾನೆ 6 ರಿಂದ 7 ಅಂಗಡಿಗಳ ಕೀ ಮುರಿದು ಸರಣಿ ಕಳ್ಳತನ ಮಾಡಲಾಗಿದೆ. ಮುಖ ಕಾಣದಂತೆ ಕ್ಯಾಪ್​ ಧರಿಸಿ ಕಬ್ಬಿಣದ ರಾಡ್​ನಿಂದ ಅಂಗಡಿಗಳ ಕೀ ಮುರಿದು ಮೊಬೈಲ್, 35 ಸಾವಿರ ಕಳ್ಳತನ ಎಸಗಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಳ್ಳತನ‌ವಾದ ಅಂಗಡಿಗಳಿಗೆ ಇಳಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ