AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayapura DDPI: ಕುರ್ಚಿ ಕಿತ್ತಾಟದಲ್ಲಿ ನಿರತರಾದ ಹಿರಿಯ ಅಧಿಕಾರಿಗಳು, ನಿಂತ ನೀರಾದ ಶಿಕ್ಷಣ ಇಲಾಖೆ ಕೆಲಸಕಾರ್ಯಗಳು!

ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಇಲಾಖೆಯ ಆಧಿಕಾರಿಗಳು ಸಿಬ್ಬಂದಿ ಕುರ್ಚಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಲಾಖೆಯ ಕೆಲಸ ಕಾರ್ಯಗಳು ನಿಂತನೀರಾಗಿದೆ.

Vijayapura DDPI: ಕುರ್ಚಿ ಕಿತ್ತಾಟದಲ್ಲಿ ನಿರತರಾದ ಹಿರಿಯ ಅಧಿಕಾರಿಗಳು, ನಿಂತ ನೀರಾದ ಶಿಕ್ಷಣ ಇಲಾಖೆ ಕೆಲಸಕಾರ್ಯಗಳು!
ಹಿರಿಯ ಅಧಿಕಾರಿಗಳ ಕುರ್ಚಿ ಕಿತ್ತಾಟ: ನಿಂತ ನೀರಾದ ಶಿಕ್ಷಣ ಇಲಾಖೆ ಕೆಲಸಗಳು!
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Feb 10, 2024 | 12:27 PM

Share

ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ( education department) ಉಪ ನಿರ್ದೇಶಕರ ಹುದ್ದೆಗೆ (Vijayapura DDPI ) ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ (fight) ನಡೆದಿದೆ. ಎನ್ ಎಚ್ ನಾಗೂರು ಹಾಗೂ ಉಮಾದೇವಿ ಸೊನ್ನವರ ಮಧ್ಯೆ ಡಿಡಿಪಿಐ ಕುರ್ಚಿಗಾಗಿ ಈ ಜಗ್ಗಾಟ ನಡೆದಿದೆ. 2009-10, 2011-12ನೇ ಸಾಲಿನಲ್ಲಿ ಸರ್ಕಾರದ ಐಇಡಿಎಸ್ಎಸ್ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಈ ಅಧಿಕಾರಿಗಳು ಅಸ್ತಿತ್ವದಲ್ಲೇ ಇಲ್ಲದ 18 ಸರ್ಕಾರೇತರ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಹಾಗೂ ಅನುದಾನ ಬಿಡುಗಡೆ ಮಾಡಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪವಿದೆ.

ಅದರಂತೆ, ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಬಸವನಬಾಗೇವಾಡಿ ಹಿಂದಿನ ಬಿಇಒ ಆಗಿದ್ದ ಎನ್ ಎಚ್ ನಾಗೂರ, ಇಂಡಿ ಬಿಇಒ ಆಗಿದ್ದ ಹಾಲಿ ವಿಜಯಪುರ ಡೈಟ್ ಹಿರಿಯ ಉಪನ್ಯಾಸಕ ಎ ಎಚ್ ಹತ್ತಳ್ಳಿ, ಸಿಂದಗಿ ಬಿಇಒ ಆಗಿದ್ದ ವಿಜಯಪುರ ಡೈಟ್ ಹಾಲಿ ಉಪನ್ಯಾಸಕ ಎಸ್ ಎ ಮುಜಾವರ ಎಂಬ ಮೂವರು ಆಧಿಕಾರಿಗಳನ್ನು ಕಳೆದ ಜನವರಿ 30 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಇಲಾಖೆ ಹಿರಿಯ ಅಧಿಕಾರಿಗಳ ಶಿಫಾರಸು ಆಧರಿಸಿ ಅಮಾನತ್ತು ಮಾಡಿ ಆದೇಶ ಜಾರಿ ಮಾಡಿದ್ದರು.

ಬಳಿಕ ಫೆಬ್ರವರಿ 2 ರಂದು ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೈಟ್ ಪ್ರಾಚಾರ್ಯೆ ಉಮಾದೇವಿ ಸೊನ್ನವರ ಅವರನ್ನು ಪ್ರಭಾರಿ ಉಪ ನಿರ್ದೇಶಕರಾಗಿ ನಿಯೋಜಿಸಿ ಆದೇಶ ಮಾಡಿದ್ದರು. ಇಷ್ಟರ ಮದ್ಯೆ ತಮ್ಮ ಅಮಾನತ್ತು ಆದೇಶ ಪ್ರಶ್ನೆ ಮಾಡಿ ಎನ್ ಎಚ್ ನಾಗೂರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠದ ಮೋರೆ ಹೋಗಿದ್ದರು. ಕೆಎಟಿ ಕಲಬುರಗಿ ಪೀಠ ಎನ್ ಎಚ್ ನಾಗೂರು ಅಮಾನತ್ತು ಆದೇಶಕ್ಕೆ ಕಳೆದ ಫೆಬ್ರವರಿ 7 ರಂದು ತಡೆಯಾಜ್ಞೆ ನೀಡಿದೆ. ಅಮಾನತ್ತಿಗೆ ತಡೆಯಾಜ್ಞೆ ಕೆಎಟಿಯಿಂದ ಸಿಕ್ಕ ಕಾರಣ ಇಂದು ಎನ್ ಎಚ್ ನಾಗೂರು ನಾನೇ ಆಧಿಕೃತ ಡಿಡಿಪಿಐ ಎಂದು ಕಚೇರಿಗೆ ಆಗಮಿಸಿ ಡಿಡಿಪಿಐ ಕುರ್ಚಿಯಲ್ಲಿ ಅಸೀನರಾಗಿದ್ದಾರೆ.

Also Read: ಮೈಸೂರು ನಗರಸಭೆ ಕಮಿಷನರ್ ಖುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ; ಠಾಣೆ ಮೆಟ್ಟಿಲೇರಿದ ಗಲಾಟೆ

ಇತ್ತ ಉಮಾದೇವಿ ಅವರೂ ಕಚೇರಿಗೆ ಆಗಮಿಸಿ ಕುಳಿತಿದ್ದಾರೆ. ಇಲಾಖೆಯ ಆಧಿಕಾರಿಗಳು ನನ್ನ ಬಳಿಯೇ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಉಭಯ ಆಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೊಂದಲಕ್ಕೆ ಈಡಾಗಿದ್ದಾರೆ. ನಾವು ಯಾರ ಬಳಿ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಈ ಕುರಿತು ಎನ್ ಎಚ್ ನಾಗೂರು ನಾನೇ ಅಧಿಕೃತ ಡಿಡಿಪಿಐ ಎಂದಿದ್ದಾರೆ. ನಾನು ಅಮಾನತ್ತು ಅದೇಶಕ್ಕೆ ತಡೆ ತಂದಿದ್ದೇನೆ. ನಾನು ಮೊದಲಿದ್ದ ಜಾಗದಲ್ಲೇ ಮುಂದುವರೆಯುತ್ತೇನೆ. ಸರ್ಕಾರ ನನಗೆ ಬದಲಿ ಸ್ಥಾನ ಬದಲಿ ಸ್ಥಳ ನಿಯೋಜನೆ ಮಾಡಿದರೆ ನಾನು ಹೋಗುತ್ತೇನೆ. ಈಗಾ ನಾನು ನನ್ನ ಅಮಾನತ್ತು ಆದೇಶಕ್ಕೆ ಕೆಎಟಿ ಕಲಬುರಗಿ ಪೀಠದಿಂದ ತಡೆ ತಂದಿದ್ದೇನೆ, ನಾನೇ ಆಧಿಕೃತ ಡಿಡಿಪಿಐ ಎಂದಿದ್ಧಾರೆ.

ಇತ್ತ ಪ್ರಭಾರಿ ಡಿಡಿಪಿಐ ಉಮಾದೇವಿ ಅವರು ಜಿಪಂ ಸಿಇಓ ಅವರ ಆದೇಶದಂತೆ ನಾನು ಡಿಡಿಪಿಐ ಆಗಿ ಸೇವೆ ಹಾಜರಾಗಿದ್ದೇನೆ. ಇಲ್ಲಿಂದ ಜಿಪಂ ಸಿಇಓ ಅವರು ಬಿಡುಗಡೆ ಮಾಡಿದರೆ ನಾನೂ ಹೋಗುತ್ತೇನೆ. ಅಲ್ಲಿಯವರೆಗೆ ನಾನೇ ಡಿಡಿಪಿಐ ಎಂದಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಆಧಿಕಾರಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ