ಮದುವೆಗೆ ಯುವತಿ ನಿರಾಕರಿಸಿದ್ದಕ್ಕೆ ಆಕೆಯ ತಂದೆ ಮೇಲೆ ಹಲ್ಲೆ ಮಾಡಿದ ಯುವಕ

ಮಧುವನಹಳ್ಳಿಯ ಯುವತಿಯ ಮನೆಗೆ ನುಗ್ಗಿದ ಆನಂದ್ ಎಂಬಾತನಿಂದ ಹಲ್ಲೆ ನಡೆದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಹಲ್ಲೆಯಿಂದ ಯುವತಿ ತಂದೆ ಶಿವಮಲ್ಲ ಶೆಟ್ಟಿಗೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ.

ಮದುವೆಗೆ ಯುವತಿ ನಿರಾಕರಿಸಿದ್ದಕ್ಕೆ ಆಕೆಯ ತಂದೆ ಮೇಲೆ ಹಲ್ಲೆ ಮಾಡಿದ ಯುವಕ
ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ
sandhya thejappa Edited By: ಸಾಧು ಶ್ರೀನಾಥ್​

Updated on: Dec 12, 2020 | 3:19 PM

ಚಾಮರಾಜನಗರ: ಮದುವೆ ಆಗಲು ಯುವತಿ ಒಪ್ಪದ ಕಾರಣದಿಂದ ಯುವತಿಯ ತಂದೆ ಮೇಲೆ ಮಚ್ಚಿನಿಂದ ಯುವಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ ಗ್ರಾಮದಲ್ಲಿ ನಡೆದಿದೆ.

ಮಧುವನಹಳ್ಳಿಯ ಯುವತಿಯ ಮನೆಗೆ ನುಗ್ಗಿದ ಆನಂದ್ ಎಂಬಾತನಿಂದ ಹಲ್ಲೆ ನಡೆದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಹಲ್ಲೆಯಿಂದ ಯುವತಿ ತಂದೆ ಶಿವಮಲ್ಲ ಶೆಟ್ಟಿಗೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಮಹದೇಶ್ವರ ಬೆಟ್ಟದ ಪ್ರಾಧಿಕಾರದಲ್ಲಿ ವಾಹನ ಚಾಲಕರಾಗಿರುವ ಶಿವಮಲ್ಲ ಶೆಟ್ಟಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

 

ಚುನಾವಣಾ ಆಯೋಗಕ್ಕೆ ಡೋಂಟ್​ ಕೇರ್! ಗ್ರಾ. ಪಂ. ಸದಸ್ಯ ಸ್ಥಾನ ಹರಾಜು, ಪ್ರಜಾಪ್ರಭುತ್ವದ ಮಾನವೂ ಹರಾಜು

 

sandhya thejappa
Follow Us