AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್​ ಕಂಡುಹಿಡಿಯುವಲ್ಲಿ ಯಶಸ್ವಿ

ರಾಮ್ ದಾಸ್ ಕಂಡು ಹಿಡಿದ ಈ ಆ್ಯಪ್ ಹೆಸರು ‘ವಿ ಟ್ರ್ಯಾಕ್'. ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಈ ಆ್ಯಪ್​ನ ಸಹಾಯದಿಂದ ನೀವು ವಾಸವಿರುವ ತಾಲೂಕಿನ ಪಿನ್ ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ, ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್​ನಲ್ಲಿ ನೋಟಿಫಿಕೇಶನ್ ಬರುವುದರ ಜತೆಗೆ ಅದನ್ನು ಓದುವವರೆಗೆ ಅಲಾರ್ಮ್ ಸದ್ದು ನಿಲ್ಲುವುದಿಲ್ಲ.

ಕೊವಿಡ್​ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್​ ಕಂಡುಹಿಡಿಯುವಲ್ಲಿ ಯಶಸ್ವಿ
ರಾಮ್ ದಾಸ್
TV9 Web
| Edited By: |

Updated on: Jul 09, 2021 | 8:37 AM

Share

ಉಡುಪಿ: ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದಕ್ಕೆ ಕಾರಣ ವ್ಯಾಕ್ಸಿನ್​ನ ಮಹತ್ವದ ಬಗ್ಗೆ ಇದೀಗ ಪ್ರತಿಯೊಬ್ಬರಿಗೂ ಅರಿವಾಗಿದೆ. ಹೀಗಾಗಿ ಕೊವಿನ್ ಆ್ಯಪ್ ಮೂಲಕ ಲಸಿಕೆಯ ಲಭ್ಯತೆಯನ್ನು ತಿಳಿಯಲು ಹಾಗೂ ಕಾಯ್ದಿರಿಸಲು ಹೆಚ್ಚು ಜನರು ಪ್ರಯತ್ನಿಸುತ್ತಿದ್ದಾರೆ. ಆದರೆ ಹಲವರು ಕೊರೊನಾ ಲಸಿಕೆ ತೆಗೆದುಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಹೀಗೆ ಲಸಿಕೆ ತನ್ನ ಪೋಷಕರಿಗೆ ಕೊಡಿಸುವಲ್ಲಿ ಪರದಾಡಿದ ಓರ್ವ ಯುವಕ ಆ್ಯಪ್ ಒಂದನ್ನು ಹುಟ್ಟು ಹಾಕಿ ಲಸಿಕೆ ದಾರಿಯನ್ನು ಸುಗಮಗೊಳಿಸಿದ್ದಾರೆ. ಹಾಗಾದರೆ ಆ ಆ್ಯಪ್ ಯಾವುದು? ಅದು ಲಸಿಕೆ ಪಡೆಯಲು ಹೇಗೆ ಕೆಲಸ ಮಾಡುತ್ತದೆ ಎಂದು ಹುಬ್ಬೆರಿಸುವವರಿಗೆ ಉತ್ತರ ಇಲ್ಲಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮ ನಿವಾಸಿಯಾದ ರಾಮ್ ದಾಸ್ ನಾಯಕ್ ಲಸಿಕೆ ಪಡೆಯಲು ಹೊಸ ಆ್ಯಪ್​ ಕಂಡುಹಿಡಿದ ಯುವಕ. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಈತ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಊರಿಗೆ ಮರಳಿದ ರಾಮ್ ದಾಸ್ ಹಾಗೂ ಈತನ ಭಾವ ಕಾರ್ತಿಕ್ ಕಳೆದ ತಿಂಗಳ ಮೇ 3ರಂದು ತನ್ನ ತಂದೆಗೆ ವ್ಯಾಕ್ಸಿನ್ ಕೊಡಿಸಲು ವ್ಯಾಕ್ಸಿನ್ ಲಭ್ಯವಿರುವ ಕೇಂದ್ರ ಹುಡುಕಾಡಿ ಸುಸ್ತಾಗಿದ್ದಾರೆ. ಕೊನೆಗೆ ಈ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿಯೇ ದೂರ ಮಾಡೋಣ ಎಂದು ನಿರ್ಧರಿಸಿದ ಇವರು, ಕೇವಲ15ದಿನಗಳಲ್ಲಿ ಒಂದು ಹೊಸ ಆ್ಯಪ್ ಸಿದ್ಧಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಆ್ಯಪ್ ಮೂಲಕವೇ ಲಸಿಕೆ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ಪೋಷಕರಿಗೆ ಲಸಿಕೆ ನೀಡಿದ್ದಾರೆ.

ರಾಮ್ ದಾಸ್ ಕಂಡು ಹಿಡಿದ ಈ ಆ್ಯಪ್ ಹೆಸರು ‘ವಿ ಟ್ರ್ಯಾಕ್’. ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಈ ಆ್ಯಪ್​ನ ಸಹಾಯದಿಂದ ನೀವು ವಾಸವಿರುವ ತಾಲೂಕಿನ ಪಿನ್ ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ, ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್​ನಲ್ಲಿ ನೋಟಿಫಿಕೇಶನ್ ಬರುವುದರ ಜತೆಗೆ ಅದನ್ನು ಓದುವವರೆಗೆ ಅಲಾರ್ಮ್ ಸದ್ದು ನಿಲ್ಲುವುದಿಲ್ಲ. ಇನ್ನು ಈ ಆ್ಯಪ್ ಮೂಲಕ ಲಸಿಕೆ ಬುಕ್ ಮಾಡುವ ಆಯ್ಕೆ ಮಾಡಿದರೆ ನೇರವಾಗಿ ಕೊವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಆಗುತ್ತದೆ. ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸದ್ಯ 1ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್​ಲೋಡ್ ಮಾಡಿದ್ದಾರೆ. ಈ ಌಪ್ ಸಂಪೂರ್ಣವಾಗಿ ಸಿದ್ಧವಾಗಿದ್ದು, ಕೆಲವೊಂದು ತಾಂತ್ರಿಕ ದೋಷಗಳಿದೆ. ಹೀಗಾಗಿ ಅವುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಆ್ಯಪ್​ ಕಂಡುಹಿಡಿದ ರಾಮ್ ದಾಸ್ ತಿಳಿಸಿದ್ದಾರೆ.

ಈ ಆ್ಯಪ್​ ಮೂಲಕ ಸಮಾಜ ಕಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಆ್ಯಪ್​ ಅನ್ನು ಮತ್ತಷ್ಟು ಅಪ್​ಡೇಟ್ ಮಾಡಲಾಗುತ್ತಿದೆ. ಈ ಆ್ಯಪ್ ಮೂಲಕ ವಯಸ್ಸು, ವ್ಯಾಕ್ಸಿನ್ ಆಯ್ಕೆಯೂ ಮಾಡಬಹುದು ಎಂದು ರಾಮ್​ದಾಸ್ ತಿಳಿಸಿದ್ದಾರೆ. ತಾಂತ್ರಿಕವಾಗಿ ಌಪ್ ಸಿದ್ಧವಾದ ಬಳಿಕ ಇದನ್ನು ಪರಿಚಯಿಸಿದರೆ ವ್ಯಾಕ್ಸಿನ್ ಪಡೆಯಲು ಸರತಿ ಸಾಲು ನಿಲ್ಲುವ ಇನ್ನಷ್ಟು ಮಂದಿಗೆ ಸಹಾಯವಾಗಲಿದೆ. ಜತೆಗೆ ಪ್ರತಿಯೊಬ್ಬರಿಗೂ ಸಕಾಲದಲ್ಲಿ ವ್ಯಾಕ್ಸಿನ್ ದೊರಕಿದಂತಾಗುತ್ತದೆ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ: ಸನೋಫಿ-ಜಿಎಸ್​ಕೆ ಕೊರೊನಾ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ನಡೆಸಲು ಡಿಸಿಜಿಐ ಅನುಮೋದನೆ

CoWin: ಕೊವಿಡ್ ಲಸಿಕೆ ಬುಕಿಂಗ್ ಪೋರ್ಟಲ್​ ಕೊವಿನ್​ನಲ್ಲಿ ಏನಿದೆ?

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು