AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆರಾಯನ ಆರ್ಭಟದ ನಡುವೆಯೂ ಚಿಣ್ಣರ ಮೋಜು ಮಸ್ತಿ, ಯುವಕರ Stunts!

[lazy-load-videos-and-sticky-control id=”69BueS3J-fY”] ಬೆಂಗಳೂರು: ಮಳೆರಾಯನ ಅವಾಂತರಕ್ಕೆ ರಾಜ್ಯದ ಹಲವು ಭಾಗಗಳು ನಲುಗಿ ಹೋಗಿದೆ. ಆದರೆ, ಈ ನಡುವೆ ಕೆಲವು ಯುವಕರು ಹಾಗೂ ಚಿಣ್ಣರು ಮಳೆಯಲ್ಲಿ ಮೋಜು ಮಸ್ತಿ ಮಾಡಲು ಸಹ ಮುಂದಾಗಿದ್ದಾರೆ. ನೇತ್ರಾವತಿ‌ ನದಿಯಲ್ಲಿ ಯುವಕರ ಮೋಜು ಮಸ್ತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ‌ ನದಿಯ ಹರಿವು ಕೊಂಚ ಕಡಿಮೆಯಾಗಿದೆ. ಆದ್ದರಿಂದ ಬಂಟ್ವಾಳದ ಕೆಲ ಯುವಕರು ಸಂದರ್ಭ ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಕೊಂಡರು. ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಜಲ‌ ಸಾಹಸಕ್ಕೆ […]

ಮಳೆರಾಯನ ಆರ್ಭಟದ ನಡುವೆಯೂ ಚಿಣ್ಣರ ಮೋಜು ಮಸ್ತಿ, ಯುವಕರ Stunts!
KUSHAL V
| Edited By: ಸಾಧು ಶ್ರೀನಾಥ್​|

Updated on:Aug 09, 2020 | 2:35 PM

Share

[lazy-load-videos-and-sticky-control id=”69BueS3J-fY”]

ಬೆಂಗಳೂರು: ಮಳೆರಾಯನ ಅವಾಂತರಕ್ಕೆ ರಾಜ್ಯದ ಹಲವು ಭಾಗಗಳು ನಲುಗಿ ಹೋಗಿದೆ. ಆದರೆ, ಈ ನಡುವೆ ಕೆಲವು ಯುವಕರು ಹಾಗೂ ಚಿಣ್ಣರು ಮಳೆಯಲ್ಲಿ ಮೋಜು ಮಸ್ತಿ ಮಾಡಲು ಸಹ ಮುಂದಾಗಿದ್ದಾರೆ. ನೇತ್ರಾವತಿ‌ ನದಿಯಲ್ಲಿ ಯುವಕರ ಮೋಜು ಮಸ್ತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ‌ ನದಿಯ ಹರಿವು ಕೊಂಚ ಕಡಿಮೆಯಾಗಿದೆ. ಆದ್ದರಿಂದ ಬಂಟ್ವಾಳದ ಕೆಲ ಯುವಕರು ಸಂದರ್ಭ ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಕೊಂಡರು.

ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಜಲ‌ ಸಾಹಸಕ್ಕೆ ಮುಂದಾದರು. ಜಿಲ್ಲೆಯಲ್ಲಿ ಇಂದು ಕೂಡಾ ರೆಡ್ ಅಲರ್ಟ್ ಇದ್ದು ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಆದರೂ ಹದಿಹರೆಯದ ಬಿಸಿರಕ್ತದ ಯುವಕರು ಮಾತ್ರ ನೀರಗೆ ಡೈವ್​ ಹೊಡೆಯುತ್ತಾ ಮಜಾ ಮಾಡಿದರು.

ಬಾಲಿವುಡ್​ ಹಾಡಿಗೆ ನದಿಗೆ ಡೈವ್​ ಹೊಡೆದ ಯುವಕ ಇನ್ನು ಇತ್ತ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲೂ ಯುವಕನೊಬ್ಬನ ಹುಚ್ಚು ಸಾಹಸ ಬೆಳಕಿಗೆ ಬಂದಿದೆ. ಘಟಪ್ರಭಾ ನದಿ ಪ್ರವಾಹದಲ್ಲೂ ಯುವಕ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾನೆ. ಬಾಲಿವುಡ್​ನ ಹಿಂದಿ ಹಾಡಿಗೆ ನದಿಗೆ ಡೈವ್​ ಹೊಡೆದ ಯುವಕ ತನ್ನ ಕಪಿಚೇಷ್ಟೆಯ ವಿಡಿಯೋ ಬೇರೆ ತೆಗೆದಿದ್ದಾನೆ. ಇದೀಗ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.

ಸ್ಲೋ‌ಮೋಷನ್ ವಿಡಿಯೊ ತೆಗೆದಿರುವ ಯುವಕ ಜಿಲ್ಲೆಯ ಮುಧೋಳ -ಯಾದವಾಡ ಘಟಪ್ರಭಾ ಸೇತುವೆ ಮೇಲಿಂದ ಜಂಪ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಯುವಕನ ವಿಡಿಯೋ ವೈರಲ್​ ಆಗ್ತಿದ್ದಂತೆ ಪೊಲೀಸರು ಅವನನ್ನ ಹಿಡಿಯಲು ಮುಂದಾಗಿದ್ದಾರಂತೆ.

ಹೆದ್ದಾರಿ ಬಂದ್​, ಚಿಣ್ಣರ ಮೋಜು ಮಸ್ತಿ ಶುರು ಇನ್ನು ಮೈಸೂರಿನ ಊಟಿ ಹೆದ್ದಾರಿಯಲ್ಲಿ ಮಕ್ಕಳ ಮೋಜಿನಾಟ ನೋಡಲು ಬಲು ಚಂದವಾಗಿತ್ತು. ಪ್ರವಾಹದಿಂದ ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ನೀರು ಹರಿದು ಬಂದು ಹೆದ್ದಾರಿ ಜಲಾವೃತಗೊಂಡಿದೆ. ಹೀಗಾಗಿ, ಆಡಳಿತದಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಯಾವುದೇ ಆತಂಕ ಇಲ್ಲದೆ ಪುಟಾಣಿಗಳು ಬಿಂದಾಸ್​ ಆಗಿ, ನೀರಿನಲ್ಲಿ ಆಟವಾಡುತ್ತಾ ಸಂಭ್ರಮಿಸಿದರು.

https://www.facebook.com/Tv9Kannada/posts/1410794279122798

Published On - 2:28 pm, Sun, 9 August 20

Follow Us
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು