ಮೈಸೂರು: ಪಡಿತರ ಅಕ್ಕಿ ಮಾರಾಟ, ಅಂಗಡಿ ಮಾಲೀಕ ಬಂಧನ

ಸಾಧು ಶ್ರೀನಾಥ್​

|

Updated on:May 17, 2020 | 12:38 PM

ಮೈಸೂರು: ಲಾಕ್‌ಡೌನ್ ಮಧ್ಯೆ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಪಡಿತರ ವಶಕ್ಕೆ ಪಡೆದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಆರೋಪ ಕೇಳಿ ಬಂದ ನಂತರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಇನ್ಸ್​ಪೆಕ್ಟರ್​ ರವಿಕುಮಾರ್ ನೇತೃತ್ವದ ತಂಡ 5 ಟನ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಹಾಗೂ ಸಿನಿಮಾ ರಸ್ತೆಯಲ್ಲಿರುವ ಯೂರೂಬ್ ಪ್ರಾವಿಷನ್ ಸ್ಟೋರ್ ಮಾಲೀಕ ಸಿದ್ದಿಕ್​ನನ್ನು ಬಂಧಿಸಿದ್ದಾರೆ. ನಂಜನಗೂಡು ಟೌನ್ […]

ಮೈಸೂರು: ಪಡಿತರ ಅಕ್ಕಿ ಮಾರಾಟ, ಅಂಗಡಿ ಮಾಲೀಕ ಬಂಧನ

ಮೈಸೂರು: ಲಾಕ್‌ಡೌನ್ ಮಧ್ಯೆ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಪಡಿತರ ವಶಕ್ಕೆ ಪಡೆದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಆರೋಪ ಕೇಳಿ ಬಂದ ನಂತರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಇನ್ಸ್​ಪೆಕ್ಟರ್​ ರವಿಕುಮಾರ್ ನೇತೃತ್ವದ ತಂಡ 5 ಟನ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಹಾಗೂ ಸಿನಿಮಾ ರಸ್ತೆಯಲ್ಲಿರುವ ಯೂರೂಬ್ ಪ್ರಾವಿಷನ್ ಸ್ಟೋರ್ ಮಾಲೀಕ ಸಿದ್ದಿಕ್​ನನ್ನು ಬಂಧಿಸಿದ್ದಾರೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada