AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿಯಲ್ಲಿ 50 ಸಾವಿರದತ್ತ ಕೊರೊನಾ ಹೆಜ್ಜೆ! ಸಾವಿರದತ್ತ ಸಾವಿನ ಸಂಖ್ಯೆ

ಬೆಂಗಳೂರು: ರಾಜಧಾನಿಯನ್ನೇ ಟಾರ್ಗೆಟ್‌ ಮಾಡಿರೋ ಕೊರೊನಾ, ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರನ್ನು ಕೊಟ್ಟು ಮುನ್ನುಗ್ಗುತ್ತಿದೆ. ಸೋಂಕಿಗೆ ಬಲಿಯಾದವರಲ್ಲಿ ಬೆಂಗಳೂರಿಗರೇ ಹೆಚ್ಚಿದ್ದು, ಎಲ್ಲರ ನಿದ್ದೆಗೆಡಿಸಿದೆ. ಅದರಲ್ಲೂ ಇನ್ನೆರಡ್ಮೂರು ದಿನ ನಗರದಲ್ಲಿ ಸೋಂಕಿತರ ಸಂಖ್ಯೆ ಅರ್ಥ ಶತಕ ಆಗಲಿದೆ. ಸಾವಿರದತ್ತ ಸಾವಿನ ಸಂಖ್ಯೆ.. ಐವತ್ತು ಸಾವಿರದತ್ತ ಸೋಂಕಿತರ ಸಂಖ್ಯೆ.. ನಿತ್ಯವೂ ಎರಡು ಸಾವಿರದ ನಂಬರ್‌ಅನ್ನೇ ಗಟ್ಟಿಮಾಡಿಕೊಂಡಿರೋ ಕೊರೊನಾ ಬೆಂಗಳೂರನ್ನೇ ಥರಥರ ನಡುಗಿಸಿಬಿಟ್ಟಿದೆ. ಸೋಂಕಿನ ಈ ಸರಣಿ ಏಟಿನಿಂದಾಗಿ ಬೆಂಗಳೂರಿನ ಯಾವೊಂದು ಆಸ್ಪತ್ರೆಯೂ ಖಾಲಿ ಉಳಿದಿಲ್ಲ. ನಿನ್ನ ಕೂಡಾ ಬೆಂಗಳೂರಿಗೆ […]

ರಾಜಧಾನಿಯಲ್ಲಿ 50 ಸಾವಿರದತ್ತ ಕೊರೊನಾ ಹೆಜ್ಜೆ! ಸಾವಿರದತ್ತ ಸಾವಿನ ಸಂಖ್ಯೆ
ಆಯೇಷಾ ಬಾನು
| Edited By: |

Updated on:Jul 26, 2020 | 3:44 PM

Share

ಬೆಂಗಳೂರು: ರಾಜಧಾನಿಯನ್ನೇ ಟಾರ್ಗೆಟ್‌ ಮಾಡಿರೋ ಕೊರೊನಾ, ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರನ್ನು ಕೊಟ್ಟು ಮುನ್ನುಗ್ಗುತ್ತಿದೆ. ಸೋಂಕಿಗೆ ಬಲಿಯಾದವರಲ್ಲಿ ಬೆಂಗಳೂರಿಗರೇ ಹೆಚ್ಚಿದ್ದು, ಎಲ್ಲರ ನಿದ್ದೆಗೆಡಿಸಿದೆ. ಅದರಲ್ಲೂ ಇನ್ನೆರಡ್ಮೂರು ದಿನ ನಗರದಲ್ಲಿ ಸೋಂಕಿತರ ಸಂಖ್ಯೆ ಅರ್ಥ ಶತಕ ಆಗಲಿದೆ.

ಸಾವಿರದತ್ತ ಸಾವಿನ ಸಂಖ್ಯೆ.. ಐವತ್ತು ಸಾವಿರದತ್ತ ಸೋಂಕಿತರ ಸಂಖ್ಯೆ.. ನಿತ್ಯವೂ ಎರಡು ಸಾವಿರದ ನಂಬರ್‌ಅನ್ನೇ ಗಟ್ಟಿಮಾಡಿಕೊಂಡಿರೋ ಕೊರೊನಾ ಬೆಂಗಳೂರನ್ನೇ ಥರಥರ ನಡುಗಿಸಿಬಿಟ್ಟಿದೆ. ಸೋಂಕಿನ ಈ ಸರಣಿ ಏಟಿನಿಂದಾಗಿ ಬೆಂಗಳೂರಿನ ಯಾವೊಂದು ಆಸ್ಪತ್ರೆಯೂ ಖಾಲಿ ಉಳಿದಿಲ್ಲ. ನಿನ್ನ ಕೂಡಾ ಬೆಂಗಳೂರಿಗೆ ಬಿಗ್‌ ಶಾಕ್‌ ಕೊಟ್ಟಿದೆ.

ರಾಜಧಾನಿಯಲ್ಲೇ ಇದ್ದಾರೆ 43 ಸಾವಿರ ಸೋಂಕಿತರು! ಬೆಂಗಳೂರಿನಲ್ಲಿ ಶರವೇಗದಲ್ಲಿ ಓಡ್ತಿರೋ ಕೊರೊನಾ ನಿನ್ನೆ ಕೂಡಾ 2 ಸಾವಿರದ ಸಂಖ್ಯೆಯಿಂದಲೇ ದಾಳಿ ಮಾಡಿದೆ. ರಾಜಧಾನಿಯ ಗಲ್ಲಿಗಲ್ಲಿಯನ್ನೂ ಹೊಕ್ಕು 2036 ಜನರನ್ನ ಸೋಂಕಿತರನ್ನಾಗಿ ಮಾಡಿದೆ. ಸೋಂಕಿನ ಈ ಏಟಿನಿಂದಲೇ ಸಿಲಿಕಾನ್‌ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ 43,503 ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ನಿನ್ನೆ 29 ಬಲಿ ಪಡೆದ ಸೋಂಕು! ಇನ್ನು ರಾಜ್ಯದಲ್ಲಿ ನಿನ್ನೆ 72 ಜನ ಕೊರೊನಾಗೆ ಬಲಿಯಾಗಿದ್ರೆ, ಬೆಂಗಳೂರಿನಲ್ಲೇ 29 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಗರದಲ್ಲೇ ಸೋಂಕಿತರ ಸಾವಿನ ಸಂಖ್ಯೆ 862 ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಕೊರೊನಾ ಡೈರಿ! ಬೆಂಗಳೂರಿನಲ್ಲಿ ನಿನ್ನೆ 2,036 ಜನರಿಗೆ ಸೋಂಕು ತಗುಲಿದೆ. ಹಾಗೇ ನಗರದಲ್ಲಿ 686 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಸೋಂಕಿತರು ಡಿಸ್ಚಾರ್ಜ್‌ ಆಗಿದ್ದು, 31,882 ಸೋಂಕಿತರು ಆಸ್ಪತ್ರೆಯಲ್ಲಿ, ಕೊವಿಡ್‌ ಕೇರ್‌ ಸೆಂಟರ್‌ನಲ್ಲಿ, ಹೋಂ ಐಸೋಲೇಷನ್‌ನಲ್ಲಿ ಟ್ರೀಟ್‌ಮೆಂಟ್‌ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಬರೋಬ್ಬರಿ 611 ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಇವೆರೆಲ್ಲಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈರಿ ಅರ್ಧಕ್ಕಿಂತಲೂ ಹೆಚ್ಚು ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ.

ರಾಜಧಾನಿಯಲ್ಲಿ 50 ಸಾವಿರದತ್ತ ಕೊರೊನಾ ಹೆಜ್ಜೆ! ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದತ್ತ ಸಾಗಿದ್ರೆ, ಇದರಲ್ಲಿ ಅರ್ಧದಷ್ಟು ಜನ ಬೆಂಗಳೂರಿನವರೇ ಇದ್ದಾರೆ. ಈಗ ರಾಜಧಾನಿಯಲ್ಲಿ 43,503 ಜನ ಸೋಂಕಿತರಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಈ ಸಂಖ್ಯೆ 50 ಸಾವಿರದ ಗಡಿದಾಟಲಿದೆ.

ಒಟ್ನಲ್ಲಿ ರಾಜಧಾನಿಯಲ್ಲಿ ನಿತ್ಯ ಎರಡು ಸಾವಿರ ಜನರನ್ನ ಸೋಂಕಿತರನ್ನಾಗಿ ಮಾಡ್ತಿರೋ ಕೊರೊನಾ, ನಿನ್ನೆ ಕೂಡಾ ಅಂಥಾ ಹೊಡೆತವನ್ನೇ ಕೊಟ್ಟಿದೆ. ಇದೇ ನಂಬರ್ ಇನ್ನೂ ಮೂರು ದಿನ ಬಂದ್ರೆ ಸಿಲಿಕಾನ್‌ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಲಿದೆ.

Published On - 6:51 am, Sun, 26 July 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ