AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

140 ಜನರ ಅವಿಭಕ್ತ ಕುಟುಂಬದ ಸದಸ್ಯನಿಗೆ ಸೋಂಕು, ಕೊರೊನಾ ಮಹಾಸ್ಫೋಟದ ಭೀತಿ

ಧಾರವಾಡ: ಅದೊಂದು ಆಧುನಿಕ ಬದುಕಿನ ಥಳಕುಬಳಕಿನ ನಡುವೆಯೂ ಜೊತೆಯಲಿ ಜೊತೆ ಜೊತೆಯಲಿ ಅಂತಾ ಕಷ್ಟ ಮತ್ತು ಸುಖಗಳೆರಡರಲ್ಲೂ ಜೊತೆಯಾಗಿಯೇ ಹಂಚಿಕೊಂಡು ಸಾಗುತ್ತುವಂಥ ಅವಿಭಕ್ತ ಕುಟುಂಬ. ಆದ್ರ ಈಗ ಈ ತುಂಬು ಕುಟುಂಬದ ಮೇಲೂ ಕೊರೊನಾ ಹೆಮ್ಮಾರಿಯ ಕೆಟ್ಟ ಕಾಕ ದೃಷ್ಟಿ ಬಿದ್ದಿದೆ. ಪರಿಣಾಮ ಈಗ 80 ಜನರ ಕುಟುಂಬ ಮತ್ತು 60 ಕೆಲಸಗಾರರು ಸೇರಿ 140 ಜನ ಆತಂಕದಲ್ಲಿ ಬದುಕಬೇಕಾಗಿದೆ. 140 ಜನರ ಮೇಲೆ ಜಿಲ್ಲಾಡಳಿತ ನಿಗಾ ಹೌದು, ರಕ್ಕಸ ಕೊರೊನಾ ವೈರಸ್ ಧಾರವಾಡಕ್ಕೆ ಬಿಗ್ ಶಾಕ್ […]

140 ಜನರ ಅವಿಭಕ್ತ ಕುಟುಂಬದ ಸದಸ್ಯನಿಗೆ ಸೋಂಕು, ಕೊರೊನಾ ಮಹಾಸ್ಫೋಟದ ಭೀತಿ
Guru
| Edited By: |

Updated on: Jul 01, 2020 | 12:50 PM

Share

ಧಾರವಾಡ: ಅದೊಂದು ಆಧುನಿಕ ಬದುಕಿನ ಥಳಕುಬಳಕಿನ ನಡುವೆಯೂ ಜೊತೆಯಲಿ ಜೊತೆ ಜೊತೆಯಲಿ ಅಂತಾ ಕಷ್ಟ ಮತ್ತು ಸುಖಗಳೆರಡರಲ್ಲೂ ಜೊತೆಯಾಗಿಯೇ ಹಂಚಿಕೊಂಡು ಸಾಗುತ್ತುವಂಥ ಅವಿಭಕ್ತ ಕುಟುಂಬ. ಆದ್ರ ಈಗ ಈ ತುಂಬು ಕುಟುಂಬದ ಮೇಲೂ ಕೊರೊನಾ ಹೆಮ್ಮಾರಿಯ ಕೆಟ್ಟ ಕಾಕ ದೃಷ್ಟಿ ಬಿದ್ದಿದೆ. ಪರಿಣಾಮ ಈಗ 80 ಜನರ ಕುಟುಂಬ ಮತ್ತು 60 ಕೆಲಸಗಾರರು ಸೇರಿ 140 ಜನ ಆತಂಕದಲ್ಲಿ ಬದುಕಬೇಕಾಗಿದೆ.

140 ಜನರ ಮೇಲೆ ಜಿಲ್ಲಾಡಳಿತ ನಿಗಾ ಹೌದು, ರಕ್ಕಸ ಕೊರೊನಾ ವೈರಸ್ ಧಾರವಾಡಕ್ಕೆ ಬಿಗ್ ಶಾಕ್ ನೀಡಿದೆ. ಧಾರವಾಡ ಜಿಲ್ಲೆಯ ಅವಿಭಕ್ತ ಕುಟುಂಬವೊಂದರ ಸದಸ್ಯನಿಗೆ ಕೊರೊನಾ ಸೋಂಕು ತಗುಲಿದೆ. ಈತನಿಂದ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಭೀತಿ ಎದುರಾಗಿದೆ. ಯಾಕಂದ್ರ ಈ ವ್ಯಕ್ತಿಯ ಕುಟುಂಬ ಗ್ರಾಮದಲ್ಲಿಯೇ ಅತ್ಯಂತ ದೊಡ್ಡ ಕುಟುಂಬ.

ಈ ಕುಟುಂಬದವರು ಸಾಕಷ್ಟು ಪ್ರಮಾಣದಲ್ಲಿ ವಿವಿಧ ವ್ಯಾಪಾರಗಳನ್ನು ಹೊಂದಿದ್ದಾರೆ. ಜೊತೆಗೆ ಕೃಷಿ ಕೆಲಸಕ್ಕೆ ಹತ್ತಾರು ಜನರು ಇವರ ಮನೆಯಲ್ಲಿಯೇ ಇದ್ದಾರೆ.

ಹೀಗಾಗಿ ಮನೆಯ 80 ಜನರು ಮತ್ತು 60 ಜನ ಕೆಲಸಗಾರರು ಸೇರಿ 140 ಜನರ ಮೇಲೆ ಇದೀಗ ಜಿಲ್ಲಾಡಳಿತ ನಿಗಾ ಇಡೋ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಇಡೀ ಗ್ರಾಮವನ್ನ ಸೀಲ್‌ಡೌನ್ ಮಾಡಲಾಗಿದೆ.

ಆತಂಕದಲ್ಲಿ ಅವಿಭಕ್ತ ಕುಟುಂಬ ಇನ್ನೂ ಆತಂಕಕಾರಿ ಅಂದ್ರೆ ಕೊರೊನಾ ಸೋಂಕಿತ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಕಡೆಗಳಲ್ಲಿ ತಿರುಗಾಡಿದ್ದಾನೆ. ಸಾವಿರಾರು ಜನರ ಸಂಪರ್ಕಕ್ಕೆ ಬಂದಿದ್ದಾನೆ.

ಅಲ್ಲದೇ ಅವಿಭಕ್ತ ಕುಟುಂಬ ಆಗಿರೋದ್ರಿಂದ ಎಲ್ಲರೂ ಜೊತೆಯಾಗಿ ಇರೋದು, ಜೊತೆಯಾಗಿ ಊಟ ಮಾಡುತ್ತಾರೆ. ಹೀಗಾಗಿ ಈ ವ್ಯಕ್ತಿಯಿಂದ ಅದೆಷ್ಟು ಜನಕ್ಕೆ ಸೋಂಕು ತಗುಲಿದೆ ಅನ್ನೋ ಆತಂಕ ಮನೆ ಮಾಡಿದೆ.

ಹೀಗಾಗಿ ಈಗಾಗಲೇ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರೋ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದರೆ ಗ್ರಾಮದಲ್ಲಿ ಕೊರೊನಾ ಸ್ಪೋಟವಾಗುತ್ತಾ ಅನ್ನೋ ಭಯ ಜಿಲ್ಲೆಯಲ್ಲಿ ಕಾಡುತ್ತಿದೆ  -ನರಸಿಂಹಮೂರ್ತಿ ಪ್ಯಾಟಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್