AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

140 ಜನರ ಅವಿಭಕ್ತ ಕುಟುಂಬದ ಸದಸ್ಯನಿಗೆ ಸೋಂಕು, ಕೊರೊನಾ ಮಹಾಸ್ಫೋಟದ ಭೀತಿ

ಧಾರವಾಡ: ಅದೊಂದು ಆಧುನಿಕ ಬದುಕಿನ ಥಳಕುಬಳಕಿನ ನಡುವೆಯೂ ಜೊತೆಯಲಿ ಜೊತೆ ಜೊತೆಯಲಿ ಅಂತಾ ಕಷ್ಟ ಮತ್ತು ಸುಖಗಳೆರಡರಲ್ಲೂ ಜೊತೆಯಾಗಿಯೇ ಹಂಚಿಕೊಂಡು ಸಾಗುತ್ತುವಂಥ ಅವಿಭಕ್ತ ಕುಟುಂಬ. ಆದ್ರ ಈಗ ಈ ತುಂಬು ಕುಟುಂಬದ ಮೇಲೂ ಕೊರೊನಾ ಹೆಮ್ಮಾರಿಯ ಕೆಟ್ಟ ಕಾಕ ದೃಷ್ಟಿ ಬಿದ್ದಿದೆ. ಪರಿಣಾಮ ಈಗ 80 ಜನರ ಕುಟುಂಬ ಮತ್ತು 60 ಕೆಲಸಗಾರರು ಸೇರಿ 140 ಜನ ಆತಂಕದಲ್ಲಿ ಬದುಕಬೇಕಾಗಿದೆ. 140 ಜನರ ಮೇಲೆ ಜಿಲ್ಲಾಡಳಿತ ನಿಗಾ ಹೌದು, ರಕ್ಕಸ ಕೊರೊನಾ ವೈರಸ್ ಧಾರವಾಡಕ್ಕೆ ಬಿಗ್ ಶಾಕ್ […]

140 ಜನರ ಅವಿಭಕ್ತ ಕುಟುಂಬದ ಸದಸ್ಯನಿಗೆ ಸೋಂಕು, ಕೊರೊನಾ ಮಹಾಸ್ಫೋಟದ ಭೀತಿ
Guru
| Edited By: |

Updated on: Jul 01, 2020 | 12:50 PM

Share

ಧಾರವಾಡ: ಅದೊಂದು ಆಧುನಿಕ ಬದುಕಿನ ಥಳಕುಬಳಕಿನ ನಡುವೆಯೂ ಜೊತೆಯಲಿ ಜೊತೆ ಜೊತೆಯಲಿ ಅಂತಾ ಕಷ್ಟ ಮತ್ತು ಸುಖಗಳೆರಡರಲ್ಲೂ ಜೊತೆಯಾಗಿಯೇ ಹಂಚಿಕೊಂಡು ಸಾಗುತ್ತುವಂಥ ಅವಿಭಕ್ತ ಕುಟುಂಬ. ಆದ್ರ ಈಗ ಈ ತುಂಬು ಕುಟುಂಬದ ಮೇಲೂ ಕೊರೊನಾ ಹೆಮ್ಮಾರಿಯ ಕೆಟ್ಟ ಕಾಕ ದೃಷ್ಟಿ ಬಿದ್ದಿದೆ. ಪರಿಣಾಮ ಈಗ 80 ಜನರ ಕುಟುಂಬ ಮತ್ತು 60 ಕೆಲಸಗಾರರು ಸೇರಿ 140 ಜನ ಆತಂಕದಲ್ಲಿ ಬದುಕಬೇಕಾಗಿದೆ.

140 ಜನರ ಮೇಲೆ ಜಿಲ್ಲಾಡಳಿತ ನಿಗಾ ಹೌದು, ರಕ್ಕಸ ಕೊರೊನಾ ವೈರಸ್ ಧಾರವಾಡಕ್ಕೆ ಬಿಗ್ ಶಾಕ್ ನೀಡಿದೆ. ಧಾರವಾಡ ಜಿಲ್ಲೆಯ ಅವಿಭಕ್ತ ಕುಟುಂಬವೊಂದರ ಸದಸ್ಯನಿಗೆ ಕೊರೊನಾ ಸೋಂಕು ತಗುಲಿದೆ. ಈತನಿಂದ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಭೀತಿ ಎದುರಾಗಿದೆ. ಯಾಕಂದ್ರ ಈ ವ್ಯಕ್ತಿಯ ಕುಟುಂಬ ಗ್ರಾಮದಲ್ಲಿಯೇ ಅತ್ಯಂತ ದೊಡ್ಡ ಕುಟುಂಬ.

ಈ ಕುಟುಂಬದವರು ಸಾಕಷ್ಟು ಪ್ರಮಾಣದಲ್ಲಿ ವಿವಿಧ ವ್ಯಾಪಾರಗಳನ್ನು ಹೊಂದಿದ್ದಾರೆ. ಜೊತೆಗೆ ಕೃಷಿ ಕೆಲಸಕ್ಕೆ ಹತ್ತಾರು ಜನರು ಇವರ ಮನೆಯಲ್ಲಿಯೇ ಇದ್ದಾರೆ.

ಹೀಗಾಗಿ ಮನೆಯ 80 ಜನರು ಮತ್ತು 60 ಜನ ಕೆಲಸಗಾರರು ಸೇರಿ 140 ಜನರ ಮೇಲೆ ಇದೀಗ ಜಿಲ್ಲಾಡಳಿತ ನಿಗಾ ಇಡೋ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಇಡೀ ಗ್ರಾಮವನ್ನ ಸೀಲ್‌ಡೌನ್ ಮಾಡಲಾಗಿದೆ.

ಆತಂಕದಲ್ಲಿ ಅವಿಭಕ್ತ ಕುಟುಂಬ ಇನ್ನೂ ಆತಂಕಕಾರಿ ಅಂದ್ರೆ ಕೊರೊನಾ ಸೋಂಕಿತ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಕಡೆಗಳಲ್ಲಿ ತಿರುಗಾಡಿದ್ದಾನೆ. ಸಾವಿರಾರು ಜನರ ಸಂಪರ್ಕಕ್ಕೆ ಬಂದಿದ್ದಾನೆ.

ಅಲ್ಲದೇ ಅವಿಭಕ್ತ ಕುಟುಂಬ ಆಗಿರೋದ್ರಿಂದ ಎಲ್ಲರೂ ಜೊತೆಯಾಗಿ ಇರೋದು, ಜೊತೆಯಾಗಿ ಊಟ ಮಾಡುತ್ತಾರೆ. ಹೀಗಾಗಿ ಈ ವ್ಯಕ್ತಿಯಿಂದ ಅದೆಷ್ಟು ಜನಕ್ಕೆ ಸೋಂಕು ತಗುಲಿದೆ ಅನ್ನೋ ಆತಂಕ ಮನೆ ಮಾಡಿದೆ.

ಹೀಗಾಗಿ ಈಗಾಗಲೇ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರೋ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದರೆ ಗ್ರಾಮದಲ್ಲಿ ಕೊರೊನಾ ಸ್ಪೋಟವಾಗುತ್ತಾ ಅನ್ನೋ ಭಯ ಜಿಲ್ಲೆಯಲ್ಲಿ ಕಾಡುತ್ತಿದೆ  -ನರಸಿಂಹಮೂರ್ತಿ ಪ್ಯಾಟಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ