AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು. 1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ […]

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು
KUSHAL V
| Edited By: |

Updated on:Jul 01, 2020 | 1:23 PM

Share

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು.

1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಮತ್ತೊಮ್ಮೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಬೆಳಗ್ಗೆ 8ರಿಂದ ಆರಂಭಗೊಳ್ಳುವ ಪಾರ್ಕ್ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಕವಾಯತ್ತು ಅಥವಾ ಶೋಗಳನ್ನು ನಡೆಸುವುದಿಲ್ಲ. ಕೇವಲ ರೋಲರ್​ ಕೋಸ್ಟರ್​ ಹಾಗೂ ಇತರೆ ಆಟಗಳು ಮಾತ್ರ ಲಭ್ಯವಿರುತ್ತೆ.

ಜೊತೆಗೆ, ಪಾರ್ಕ್​ನ ಆಡಳಿತ ಮಂಡಳಿ ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಡಿಸ್ನಿಲ್ಯಾಂಡ್​ಗೆ ಭೇಟಿ ಕೊಡುವ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಲೇಬೇಕು. ಪಾರ್ಕ್ ​ ಪ್ರವೇಶಿಸುವ ಮುನ್ನ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸ್​​ ಮಾಡಲಾಗುವುದು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಸೂಚಿಸಲಾಗುವುದು. ಇದಲ್ಲದೆ, ಇವೆಲ್ಲಾ ಮಾಹಿತಿಯನ್ನು ಟಿಕೆಟ್​ನ ಹಿಂದೆ ಸಹ ನಮೂದಿಸಲಾಗುವುದು ಎಂದು ಪಾರ್ಕ್​ನ ಆಡಳಿತ ಮಂಡಳಿ ತಿಳಿಸಿದೆ.

Published On - 1:10 pm, Wed, 1 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್