AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು. 1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ […]

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 01, 2020 | 1:23 PM

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು.

1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಮತ್ತೊಮ್ಮೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಬೆಳಗ್ಗೆ 8ರಿಂದ ಆರಂಭಗೊಳ್ಳುವ ಪಾರ್ಕ್ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಕವಾಯತ್ತು ಅಥವಾ ಶೋಗಳನ್ನು ನಡೆಸುವುದಿಲ್ಲ. ಕೇವಲ ರೋಲರ್​ ಕೋಸ್ಟರ್​ ಹಾಗೂ ಇತರೆ ಆಟಗಳು ಮಾತ್ರ ಲಭ್ಯವಿರುತ್ತೆ.

ಜೊತೆಗೆ, ಪಾರ್ಕ್​ನ ಆಡಳಿತ ಮಂಡಳಿ ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಡಿಸ್ನಿಲ್ಯಾಂಡ್​ಗೆ ಭೇಟಿ ಕೊಡುವ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಲೇಬೇಕು. ಪಾರ್ಕ್ ​ ಪ್ರವೇಶಿಸುವ ಮುನ್ನ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸ್​​ ಮಾಡಲಾಗುವುದು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಸೂಚಿಸಲಾಗುವುದು. ಇದಲ್ಲದೆ, ಇವೆಲ್ಲಾ ಮಾಹಿತಿಯನ್ನು ಟಿಕೆಟ್​ನ ಹಿಂದೆ ಸಹ ನಮೂದಿಸಲಾಗುವುದು ಎಂದು ಪಾರ್ಕ್​ನ ಆಡಳಿತ ಮಂಡಳಿ ತಿಳಿಸಿದೆ.

Published On - 1:10 pm, Wed, 1 July 20

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ