AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು. 1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ […]

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು
KUSHAL V
| Edited By: |

Updated on:Jul 01, 2020 | 1:23 PM

Share

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು.

1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಮತ್ತೊಮ್ಮೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಬೆಳಗ್ಗೆ 8ರಿಂದ ಆರಂಭಗೊಳ್ಳುವ ಪಾರ್ಕ್ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಕವಾಯತ್ತು ಅಥವಾ ಶೋಗಳನ್ನು ನಡೆಸುವುದಿಲ್ಲ. ಕೇವಲ ರೋಲರ್​ ಕೋಸ್ಟರ್​ ಹಾಗೂ ಇತರೆ ಆಟಗಳು ಮಾತ್ರ ಲಭ್ಯವಿರುತ್ತೆ.

ಜೊತೆಗೆ, ಪಾರ್ಕ್​ನ ಆಡಳಿತ ಮಂಡಳಿ ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಡಿಸ್ನಿಲ್ಯಾಂಡ್​ಗೆ ಭೇಟಿ ಕೊಡುವ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಲೇಬೇಕು. ಪಾರ್ಕ್ ​ ಪ್ರವೇಶಿಸುವ ಮುನ್ನ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸ್​​ ಮಾಡಲಾಗುವುದು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಸೂಚಿಸಲಾಗುವುದು. ಇದಲ್ಲದೆ, ಇವೆಲ್ಲಾ ಮಾಹಿತಿಯನ್ನು ಟಿಕೆಟ್​ನ ಹಿಂದೆ ಸಹ ನಮೂದಿಸಲಾಗುವುದು ಎಂದು ಪಾರ್ಕ್​ನ ಆಡಳಿತ ಮಂಡಳಿ ತಿಳಿಸಿದೆ.

Published On - 1:10 pm, Wed, 1 July 20

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ