ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜೈಲರ್ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್‌ನ ಸಹಾಯಕ ಜೈಲರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೈದಿ ರೇವಣ್ಣಸಿದ್ದಯ್ಯ ಎಂಬುವವರನ್ನು ಆಸ್ಪತ್ರೆಗೆ ಕಳಿಸಲು ಜೈಲರ್ ಬಸವರಾಜ್ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ರೇವಣ್ಣಸಿದ್ದಯ್ಯ ಪುತ್ರ ಆದರ್ಶಸ್ವಾಮಿ 90 ಸಾವಿರ ರೂ. ಲಂಚವನ್ನು ಬಸವರಾಜ್​ಗೆ ನೀಡುವ ವೇಳೆ ಎಸಿಬಿ ದಾಳಿ ನಡೆಸಿದೆ.

ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜೈಲರ್ ಎಸಿಬಿ ಬಲೆಗೆ
ಸಹಾಯಕ ಜೈಲರ್ ಬಸವರಾಜ್ ಹೊಸಗೌಡ
ಆಯೇಷಾ ಬಾನು

Updated on: Jan 26, 2021 | 9:59 AM

ಬೀದರ್: ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್‌ನ ಸಹಾಯಕ ಜೈಲರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸಹಾಯಕ ಜೈಲರ್ ಬಸವರಾಜ್ ಹೊಸಗೌಡ ಲಂಚ ಸ್ವೀಕರಿಸುತ್ತಿದ್ದವರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಎಸ್‌ಪಿ, ಡಿವೈಎಸ್‌ಪಿ ನೇತೃತ್ವದ ತಂಡ ಭರ್ಜರಿ ಭೇಟೆಯಾಡಿದೆ.

ಲಂಚ ಸ್ವೀಕರಿಸುತ್ತಿದ್ದ ಬಸವರಾಜ್ ಹೊಸಗೌಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಕೈದಿ ರೇವಣ್ಣಸಿದ್ದಯ್ಯ ಎಂಬುವವರನ್ನು ಆಸ್ಪತ್ರೆಗೆ ಕಳಿಸಲು ಜೈಲರ್ ಬಸವರಾಜ್ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ರೇವಣ್ಣಸಿದ್ದಯ್ಯ ಪುತ್ರ ಆದರ್ಶಸ್ವಾಮಿ 90 ಸಾವಿರ ರೂ. ಲಂಚವನ್ನು ಬಸವರಾಜ್​ಗೆ ನೀಡುವ ವೇಳೆ ಎಸಿಬಿ ದಾಳಿ ನಡೆಸಿದೆ. ಲಂಚ ಪಡೆಯುತ್ತಿದ್ದ ಜೈಲರ್ ಬಸವರಾಜ್ ಹೊಸಗೌಡ ಬಲೆಗೆ ಬಿದ್ದಿದ್ದಾರೆ.

ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್​ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು

Loading...
Unable to load recommendations.
Follow Us