ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜೈಲರ್ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್‌ನ ಸಹಾಯಕ ಜೈಲರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೈದಿ ರೇವಣ್ಣಸಿದ್ದಯ್ಯ ಎಂಬುವವರನ್ನು ಆಸ್ಪತ್ರೆಗೆ ಕಳಿಸಲು ಜೈಲರ್ ಬಸವರಾಜ್ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ರೇವಣ್ಣಸಿದ್ದಯ್ಯ ಪುತ್ರ ಆದರ್ಶಸ್ವಾಮಿ 90 ಸಾವಿರ ರೂ. ಲಂಚವನ್ನು ಬಸವರಾಜ್​ಗೆ ನೀಡುವ ವೇಳೆ ಎಸಿಬಿ ದಾಳಿ ನಡೆಸಿದೆ.

ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜೈಲರ್ ಎಸಿಬಿ ಬಲೆಗೆ
ಸಹಾಯಕ ಜೈಲರ್ ಬಸವರಾಜ್ ಹೊಸಗೌಡ
ಆಯೇಷಾ ಬಾನು

Updated on: Jan 26, 2021 | 9:59 AM

ಬೀದರ್: ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್‌ನ ಸಹಾಯಕ ಜೈಲರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸಹಾಯಕ ಜೈಲರ್ ಬಸವರಾಜ್ ಹೊಸಗೌಡ ಲಂಚ ಸ್ವೀಕರಿಸುತ್ತಿದ್ದವರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಎಸ್‌ಪಿ, ಡಿವೈಎಸ್‌ಪಿ ನೇತೃತ್ವದ ತಂಡ ಭರ್ಜರಿ ಭೇಟೆಯಾಡಿದೆ.

ಲಂಚ ಸ್ವೀಕರಿಸುತ್ತಿದ್ದ ಬಸವರಾಜ್ ಹೊಸಗೌಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಕೈದಿ ರೇವಣ್ಣಸಿದ್ದಯ್ಯ ಎಂಬುವವರನ್ನು ಆಸ್ಪತ್ರೆಗೆ ಕಳಿಸಲು ಜೈಲರ್ ಬಸವರಾಜ್ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ರೇವಣ್ಣಸಿದ್ದಯ್ಯ ಪುತ್ರ ಆದರ್ಶಸ್ವಾಮಿ 90 ಸಾವಿರ ರೂ. ಲಂಚವನ್ನು ಬಸವರಾಜ್​ಗೆ ನೀಡುವ ವೇಳೆ ಎಸಿಬಿ ದಾಳಿ ನಡೆಸಿದೆ. ಲಂಚ ಪಡೆಯುತ್ತಿದ್ದ ಜೈಲರ್ ಬಸವರಾಜ್ ಹೊಸಗೌಡ ಬಲೆಗೆ ಬಿದ್ದಿದ್ದಾರೆ.

ಲಂಚ ಆರೋಪ: ಶೃಂಗೇರಿ ಸಬ್ ರಿಜಿಸ್ಟ್ರಾರ್​ನಿಂದ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲು

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us