AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟೌನ್​ನಲ್ಲಿ ಮದುವೆ ಗುಸುಗುಸು: ಮೌನ ಮುರಿದ ಆಲಿಯಾ ಭಟ್ ಮದುವೆ ಬಗ್ಗೆ ಹೇಳಿದ್ದೇನು?

ಬಾಲಿವುಡ್​ನಲ್ಲಿ ಸಿನಿಮಾಗಳಿಗಿಂತಾ ಹೆಚ್ಚಾಗಿ ಮದುವೆ ವಿಚಾರ ಸುದ್ದಿಯಾಗ್ತಿದೆ. ಅದ್ರಲ್ಲೂ ಆಲಿಯಾ ಭಟ್​ ಮದುವೆ ವಿಚಾರ ಸದಾ ಸದ್ದು ಮಾಡ್ತಲೇ ಇರುತ್ತೆ. ಈಗ ಮತ್ತೇ ಆಲಿಯಾ ಮದುವೆ ಚರ್ಚೆ ಆಗೋಕೆ ಆಲಿಯಾನೆ ಕಾರಣ. ಆಲಿಯಾ ತಮ್ಮ ಮದುವೆ ಬಗ್ಗೆ ಏನ್​ ಹೇಳಿದ್ದಾರೆ ಅನ್ನೋದನ್ನ ಇಲ್ಲಿ ಓದಿ.

ಬಿಟೌನ್​ನಲ್ಲಿ ಮದುವೆ ಗುಸುಗುಸು: ಮೌನ ಮುರಿದ ಆಲಿಯಾ ಭಟ್ ಮದುವೆ ಬಗ್ಗೆ ಹೇಳಿದ್ದೇನು?
ಆಯೇಷಾ ಬಾನು
|

Updated on:Dec 24, 2020 | 7:09 AM

Share

ಲಾಕ್​ಡೌನ್ ಬಳಿಕಾ ಆಲಿಯಾ ಭಟ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ಒಂದು ಶೆಡ್ಯೂಲ್ ಮುಗಿಸಿ ಬಂದಿದ್ದಾರೆ. ಆದ್ರೆ, ಈ ಸುದ್ದಿಯ ಬದಲು ಆಲಿಯಾ ಮದುವೆ ಸುದ್ದಿ ಬಿಟೌನ್​ನಲ್ಲಿ ಜೋರಾಗಿದೆ. ಪದೇಪದೆ ಆಲಿಯಾ ಮದುವೆ ಬಗ್ಗೆ ಜನ ಮಾತಾಡೋಕೆ ಕಾರಣ, ಆಲಿಯಾ ಮತ್ತು ರಣ್​ಬೀರ್ ಕಪೂರ್​ ನಡುವೆ ಇರೋ ಲವ್ವಿ-ಡವ್ವಿ.

ಶೂಟಿಂಗ್ ಮುಗಿಸಿ ಮರಳಿದ ಆಲಿಯಾ, ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಮದುವೆ ಯಾವಾಗ ಅನ್ನೋದನ್ನ ಹೇಳೋ ಬದಲಿಗೆ, ಮದುವೆ ಯಾಕಾಗಬೇಕು ಅಂದಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ಆಲಿಯಾ ಭಟ್, ನನಗಿನ್ನೂ 25 ವರ್ಷ ವಯಸ್ಸು ಈಗಲೇ ಯಾಕೆ ಮದುವೆ ಆಗಬೇಕು. ಯಾಕೆ ಎಲ್ಲರೂ ನನ್ನ ಮದುವೆ ಬಗ್ಗೆ ಮಾತಾಡುತ್ತಾರೆ. ಅದಕ್ಕಿನ್ನೂ ಸಮಯ ಇದೆ ಅಂತಾ ಉತ್ತರಿಸಿದ್ದಾರೆ.

ಮದುವೆ ಬಗ್ಗೆ ಮಾತ್ನಾಡಿರೋ ಆಲಿಯಾ ಟ್ರೋಲ್​ಗೂ ತುತ್ತಾಗಿದ್ದಾರೆ. ಆಲಿಯಾ ತನಗೆ 25 ವರ್ಷ ವಯಸ್ಸು ಅಂತ ಹೇಳಿಕೊಂಡಿದ್ದಾರೆ. ಆಕೆಯ ವಯಸ್ಸು 27 ಆದ್ರೆ 25 ಅಂತ ಹೇಳಿಕೊಂಡಿದ್ದು, ನಿಜವಾದ ವಯಸ್ಸನ್ನ ಮುಚ್ಚಿಟ್ಟಿದ್ದಾರೆ ಅಂತ ನೆಟ್ಟಿಗರು ಆಲಿಯಾಗೆ ತಿವಿಯುತ್ತಿದ್ದಾರೆ.

ಮತ್ತೊಂದು ಕಡೆ ಆಲಿಯಾ ಭಟ್, ರಣ್​ಬೀರ್ ಜೊತೆಗೆ ಲಿವ್​ಇನ್ ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಹೀಗಾಗಿಯೇ ಮದುವೆ ಬಗ್ಗೆ ಮಾತನಾಡುತ್ತಿಲ್ಲ ಅನ್ನೋ ಗುಸುಗುಸು ಬಿಟೌನ್​ನಲ್ಲಿ ಹರಡಿದೆ.

Published On - 7:08 am, Thu, 24 December 20

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ