ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ಗೆ ಕರೆ, ಕರ್ನಾಟಕ ಬಂದ್?

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ವತಿಯಿಂದ ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ ಮಾಡುವಂತೆ ಅಖಿಲ‌ ಭಾರತ ಕಿಸಾನ್ ಸಮಿತಿ ಕರೆ ನೀಡಿದೆ. ಕುರುಬೂರು ಶಾಂತಕುಮಾರ್ ಹೇಳಿಕೆ ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿಯ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಸೆಪ್ಟೆಂಬರ್ 25 ರಂದು ದೇಶವ್ಯಾಪಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಈ ಮಧ್ಯೆ, ಬಂದ್ ಆಚರಿಸುವ ಬಗ್ಗೆ ನಾವು ಚರ್ಚೆ ಮಾಡಿ, ನಿರ್ಧಾರ […]

ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ಗೆ ಕರೆ, ಕರ್ನಾಟಕ ಬಂದ್?
ಪ್ರಾತಿನಿಧಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Sep 21, 2020 | 5:12 PM

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ವತಿಯಿಂದ ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಸೆಪ್ಟೆಂಬರ್ 25ರಂದು ಭಾರತ್‌ ಬಂದ್‌ ಮಾಡುವಂತೆ ಅಖಿಲ‌ ಭಾರತ ಕಿಸಾನ್ ಸಮಿತಿ ಕರೆ ನೀಡಿದೆ.

ಕುರುಬೂರು ಶಾಂತಕುಮಾರ್ ಹೇಳಿಕೆ
ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿಯ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಸೆಪ್ಟೆಂಬರ್ 25 ರಂದು ದೇಶವ್ಯಾಪಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಈ ಮಧ್ಯೆ, ಬಂದ್ ಆಚರಿಸುವ ಬಗ್ಗೆ ನಾವು ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ತೇವೆ ಎಂದು ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆ:  
ಕರ್ನಾಟಕ ಬಂದ್​ ಬಗ್ಗೆ ರಾತ್ರಿ 8 ಗಂಟೆಗೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಹೇಳಿದ್ದಾರೆ. ಕರ್ನಾಟಕ ಬಂದ್​ಗೆ ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮುಂಬೈ ಕರ್ನಾಟಕ ಸಂಘಟನೆ ಮತ್ತು ಬೆಂಗಳೂರು ಮೂಲದ ಸಂಘಟನೆಗಳ ಬೆಂಬಲ ಪಡೆಯುತ್ತೇವೆ ಎಂದೂ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಇದೇ ವೇಳೆ ಹೇಳಿದ್ದಾರೆ.

Published On - 4:29 pm, Mon, 21 September 20