ಸ್ವಾಮೀಜಿಗೆ ಬಾಸುಂಡೆ ಬರೋಹಾಗೆ ಥಳಿಸಿದ್ರಾ ಪೇದೆ?

ಕಲಬುರಗಿ: ರಾಜ್ಯದಲ್ಲಿ ಸ್ವಾಮೀಜಿಗಳ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ ಇಲ್ಲಿ ಸ್ವಾಮೀಜಿ ಮೇಲೆ ಕಾನ್ಸ್‌ಟೇಬಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಸಂಜೆ ಅಫಜಲಪುರ ತಾಲೂಕಿನ ಅರ್ಜುನಗಿ ಚೆಕ್‌ಪೋಸ್ಟ್‌ ಬಳಿ ರೇವೂರು ಬಿಯ ಶಿವಾನಂದ ಶಿವಾಚಾರ್ಯ ಶ್ರೀ ಮೇಲೆ ರೇವೂರು ಠಾಣೆ ಪಿಸಿ ಶರಣಗೌಡ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿನ ಹಳ್ಳಿಗೆ ಹೋಗಿಬಂದಿದ್ದಕ್ಕೆ ಥಳಿಸಿದ್ದಾರಂತೆ. ಸ್ವಾಮೀಜಿಗೆ ಮೈತುಂಬ ಬಾಸುಂಡೆ ಬಂದಿದ್ದು, ಗಾಯಾಳು ಸ್ವಾಮೀಜಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಸ್ವಾಮೀಜಿಗೆ ಬಾಸುಂಡೆ ಬರೋಹಾಗೆ ಥಳಿಸಿದ್ರಾ ಪೇದೆ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: May 26, 2020 | 11:14 AM

ಕಲಬುರಗಿ: ರಾಜ್ಯದಲ್ಲಿ ಸ್ವಾಮೀಜಿಗಳ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ದಾಖಲಾಗುತ್ತಿವೆ. ಆದರೆ ಇಲ್ಲಿ ಸ್ವಾಮೀಜಿ ಮೇಲೆ ಕಾನ್ಸ್‌ಟೇಬಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿನ್ನೆ ಸಂಜೆ ಅಫಜಲಪುರ ತಾಲೂಕಿನ ಅರ್ಜುನಗಿ ಚೆಕ್‌ಪೋಸ್ಟ್‌ ಬಳಿ ರೇವೂರು ಬಿಯ ಶಿವಾನಂದ ಶಿವಾಚಾರ್ಯ ಶ್ರೀ ಮೇಲೆ ರೇವೂರು ಠಾಣೆ ಪಿಸಿ ಶರಣಗೌಡ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿನ ಹಳ್ಳಿಗೆ ಹೋಗಿಬಂದಿದ್ದಕ್ಕೆ ಥಳಿಸಿದ್ದಾರಂತೆ. ಸ್ವಾಮೀಜಿಗೆ ಮೈತುಂಬ ಬಾಸುಂಡೆ ಬಂದಿದ್ದು, ಗಾಯಾಳು ಸ್ವಾಮೀಜಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 7:12 am, Tue, 26 May 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us