AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ-ಪ್ರೇಮ ಎಂದು ನಂಬಿಸಿ ಲಿವಿಂಗ್ ಟುಗೆದರ್‌ನಲ್ಲಿದ್ದು ಮದುವೆಯಾಗಲು ನಿರಾಕರಿಸಿದ ಯುವಕ.. ಪೊಲೀಸ್ ಮೊರೆ ಹೋದ ಯುವತಿ

ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಪ್ರಿಯಕರ ಕೈಕೊಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಬಳ್ಳಾರಿ ಮೂಲದ ಯುವತಿಗೆ ಕಾರಟಗಿ ತಾಲೂಕಿನ ಗುಂಡೂರು ನಿವಾಸಿ ವಿರೂಪಾಕ್ಷ ಎಂಬ ಯುವಕ ಪ್ರೀತಿ ಹೆಸರಲ್ಲಿ ವಂಚಿಸಿದ್ದಾನೆ.

ಪ್ರೀತಿ-ಪ್ರೇಮ ಎಂದು ನಂಬಿಸಿ ಲಿವಿಂಗ್ ಟುಗೆದರ್‌ನಲ್ಲಿದ್ದು ಮದುವೆಯಾಗಲು ನಿರಾಕರಿಸಿದ ಯುವಕ.. ಪೊಲೀಸ್ ಮೊರೆ ಹೋದ ಯುವತಿ
ವಿರೂಪಾಕ್ಷ
ಆಯೇಷಾ ಬಾನು
| Edited By: |

Updated on: Mar 12, 2021 | 11:30 AM

Share

ಕೊಪ್ಪಳ: ಇತ್ತೀಚೆಗೆ ಪ್ರೀತಿ-ಪ್ರೇಮದ ಹೆಸರಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲೊಂದು ಲವ್, ಸೆಕ್ಸ್, ದೋಖಾ ಕೇಸ್ ಪತ್ತೆಯಾಗಿದೆ. ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಪ್ರಿಯಕರ ಕೈಕೊಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಬಳ್ಳಾರಿ ಮೂಲದ ಯುವತಿಗೆ ಕಾರಟಗಿ ತಾಲೂಕಿನ ಗುಂಡೂರು ನಿವಾಸಿ ವಿರೂಪಾಕ್ಷ ಎಂಬ ಯುವಕ ಪ್ರೀತಿ ಹೆಸರಲ್ಲಿ ವಂಚಿಸಿದ್ದಾನೆ.

2018ರಲ್ಲಿ ಇವರಿಬ್ಬರೂ ಗಂಗಾವತಿಯ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಹುಟ್ಟಿತ್ತು. ಈ‌ ಮೊದಲು ಯುವತಿಗೆ ಬಾಲ್ಯ ವಿವಾಹ ಆಗಿತ್ತು. ಬಾಲ್ಯ ವಿವಾಹವನ್ನು ಧಿಕ್ಕರಿಸಿ ವಿರೂಪಾಕ್ಷ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಈ ಜೋಡಿ ಕಳೆದ 4 ವರ್ಷಗಳಿಂದ ಪ್ರೀತಿಯಲಿದ್ದು ಯುವತಿ ಜೊತೆ ವಿರೂಪಾಕ್ಷ ಲಿವಿಂಗ್ ಟುಗೆದರ್‌ನಲ್ಲಿದ್ದ.

ಮದುವೆ ಆಗುವುದಾಗಿ ಯುವತಿಯನ್ನು ನಂಬಿಸಿದ್ದ ಹಾಗೂ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಇದೀಗ ಜಾತಿ ಹಿನ್ನೆಲೆಯಲ್ಲಿ ಮದುವೆ ನಿರಾಕರಿಸಿದ್ದಾನಂತೆ. ಬೇರೆ ಯುವತಿಯೊಂದಿಗೆ ಮದುವೆ ಆಗಲು ವಿರೂಪಾಕ್ಷ ಮುಂದಾಗಿದ್ದಾನೆ. ಹೀಗಾಗಿ ವಿರೂಪಾಕ್ಷನ ಜೊತೆ ಮದುವೆ ಮಾಡಿಸಿಕೊಡಿ ಎಂದು ಸಂತ್ರಸ್ತೆ ಕಣ್ಣೀರು ಹಾಕಿದ್ದಾರೆ. ನ್ಯಾಯಕ್ಕಾಗಿ ಗಂಗಾವತಿ ನಗರ ಠಾಣೆ ಮೆಟ್ಟಿಲೇರಿದ್ದಾರೆ. ಈಕೆ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಇದನ್ನೂ ಓದಿ: ಎಂಗೇಜ್ಮೆಂಟ್ ಮಾಡಿಕೊಂಡು ಗೋವಾ ಟ್ರಿಪ್ ಬಳಿಕ ಮದುವೆ ಬೇಡವೆಂದ ಯುವಕ.. ಕಾನೂನು ಹೋರಾಟಕ್ಕೆ ನಿಂತ ಯುವತಿ