AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP ಸೇರಿದ ನಾವ್ 17 ಮಂದಿ ಮುತ್ತುಗಳು ಇದ್ದಂತೆ: ‘ವಿಜಯನಗರ ಸಾಮ್ರಾಟ್’ ಆನಂದ್ ಸಿಂಗ್

ಬಳ್ಳಾರಿ: ನಾವು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೆವು. ಬಿಜೆಪಿ ಸೇರಿದ ನಾವು 17 ಜನರೂ ಮುತ್ತುಗಳು ಇದ್ದಂತೆ. ಎಲ್ಲಾ ಸಚಿವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಆ ರೀತಿಯಾಗಿ ನೋಡುವುದಾದ್ರೆ ನಾನು ಹಿಂದೆ ಇದ್ದೇನೆ ಎಂದು ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ನಾನು ಕೂಡ ರಾಜ್ಯಾದ್ಯಂತ ಸುತ್ತಿ ಕೆಲಸ ಮಾಡುತ್ತೇನೆ. ವಿಜಯನಗರ ಜಿಲ್ಲೆ ಮಾಡುವುದಾಗಿ ಶಪಥ ಮಾಡಿದ್ದೆ. ಇದು ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಜನರ ಬೇಡಿಕೆಯಾಗಿತ್ತು. ಯಾರೂ ವೈಯಕ್ತಿಕ ತೆಗೆದುಕೊಳ್ಳಬಾರದು. […]

BJP ಸೇರಿದ ನಾವ್ 17 ಮಂದಿ ಮುತ್ತುಗಳು ಇದ್ದಂತೆ: ‘ವಿಜಯನಗರ ಸಾಮ್ರಾಟ್’ ಆನಂದ್ ಸಿಂಗ್
KUSHAL V
| Updated By: ಸಾಧು ಶ್ರೀನಾಥ್​|

Updated on:Nov 19, 2020 | 6:01 PM

Share

ಬಳ್ಳಾರಿ: ನಾವು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೆವು. ಬಿಜೆಪಿ ಸೇರಿದ ನಾವು 17 ಜನರೂ ಮುತ್ತುಗಳು ಇದ್ದಂತೆ. ಎಲ್ಲಾ ಸಚಿವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಆ ರೀತಿಯಾಗಿ ನೋಡುವುದಾದ್ರೆ ನಾನು ಹಿಂದೆ ಇದ್ದೇನೆ ಎಂದು ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ನಾನು ಕೂಡ ರಾಜ್ಯಾದ್ಯಂತ ಸುತ್ತಿ ಕೆಲಸ ಮಾಡುತ್ತೇನೆ. ವಿಜಯನಗರ ಜಿಲ್ಲೆ ಮಾಡುವುದಾಗಿ ಶಪಥ ಮಾಡಿದ್ದೆ. ಇದು ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಜನರ ಬೇಡಿಕೆಯಾಗಿತ್ತು. ಯಾರೂ ವೈಯಕ್ತಿಕ ತೆಗೆದುಕೊಳ್ಳಬಾರದು. ನಾನೊಬ್ಬನೇ ಜಿಲ್ಲೆ ಮಾಡುವಷ್ಟೂ ದೊಡ್ಡವನಲ್ಲ. ಜನರ ಹೋರಾಟ ಮತ್ತು ಪಂಪಾ ವಿರೂಪಾಕ್ಷನ ಆಶೀರ್ವಾದದಿಂದಲೇ ಜಿಲ್ಲೆ ಆಗಿದೆ. ಇದು ನಿಜಕ್ಕೂ ಚಮತ್ಕಾರವೇ ಸರಿ. ಯಡಿಯೂರಪ್ಪ ಸಂಪುಟದ ಎಲ್ಲ ಸಚಿವರೂ ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು. ಇದೀಗ, ಜನರ ಹೋರಾಟ, ದೇವರ ಆಶೀರ್ವಾದದಿಂದ ಜಿಲ್ಲೆ ಆಗಿದೆ ಎಂದು ಆನಂದ್ ಸಿಂಗ್ ಹೇಳಿದರು. ‘ಎಲ್ಲರೂ ರಾಹುಕಾಲ, ಗುಳಿಕಕಾಲ ಅಂತಾ ಟೈಂ ನೋಡ್ತಿದ್ರು’ ಈ ನಡುವೆ, ನಾವೆಲ್ಲರೂ ರಾಜೀನಾಮೆ ನೀಡಿ ಬಾಂಬೆಗೆ ಹೋಗಿದ್ದೆವು. ಆನಂದ್ ಸಿಂಗ್ ರಾಜೀನಾಮೆ ನೀಡಿ ಹೊಸಪೇಟೆಯಲ್ಲಿದ್ದರು. ವಿಜಯನಗರ ಜಿಲ್ಲೆಗಾಗಿ ಅವರು ರಾಜೀನಾಮೆ ನೀಡಿದ್ದರು ಎಂದು ಹೊಸಪೇಟೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಎಲ್ಲರೂ ರಾಹುಕಾಲ, ಗುಳಿಕಕಾಲ ಅಂತಾ ಟೈಂ ನೋಡ್ತಿದ್ರು. ಆದರೆ, ನಮ್ಮ ವಿಜಯನಗರ ಸಾಮ್ರಾಟ್ ಆನಂದ್ ಸಿಂಗ್ ಏನೂ ನೋಡಿಲ್ಲ. ನೇರವಾಗಿ ಹೋಗಿ ರಾಜೀನಾಮೆ ನೀಡಿ, ಹೊರಗೆ ಬಂದಿದ್ದರು ಎಂದು ಹೇಳಿದರು.

Published On - 5:04 pm, Thu, 19 November 20

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು