ಕಲಾವಿದನ ಕೈಚಳಕ: ಮರಳಿನ ಮೇಲೆ ಅರಳಿತು ರಾಮ ಮಂದಿರ, ಎಲ್ಲಿ?

ಧಾರವಾಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮ್ಮದೇ ರೀತಿಯಲ್ಲಿ ಭಗವಂತನಿಗೆ ಕಾಣಿಕೆ ಅರ್ಪಿಸುತ್ತಿದ್ದಾರೆ.   ಅಂತೆಯೇ, ಧಾರವಾಡದ ಕಲಾವಿದ ಮಂಜುನಾಥ್ ಸಹ  ಒಬ್ಬರು. ನಗರದ ಕೆಲಗೇರಿ ಬಡಾವಣೆಯ ನಿವಾಸಿಯಾಗಿರುವ ಮಂಜುನಾಥ್ ಹಿರೇಮಠ ರಾಮ ಮಂದಿರದ ವಿನ್ಯಾಸವನ್ನು ಮರಳಿನಲ್ಲಿ ಸುಂದರವಾಗಿ ಬಿಡಿಸಿದ್ದಾರೆ. ನಗರದ ದೊಡ್ಡ ನಾಯಕನ ಬಡಾವಣೆಯಲ್ಲಿ ಬಿಡಿಸಿರುವ ಈ ಮರಳು ಶಿಲ್ಪಕ್ಕೆ ಒಂದು ಟಿಪ್ಪರ್ ಲಾರಿಯಷ್ಟು ಮರಳನ್ನು ಬಳಸಲಾಗಿದೆ. ಬೆಳಗ್ಗೆ 5:30ಕ್ಕೆ ಕಲಾಕೃತಿಯನ್ನು ಬಿಡಿಸುವ ಕೆಲಸ ಆರಂಭಿಸಿದ ಮಂಜುನಾಥ್​ ರಾತ್ರಿ […]

ಕಲಾವಿದನ ಕೈಚಳಕ: ಮರಳಿನ ಮೇಲೆ ಅರಳಿತು ರಾಮ ಮಂದಿರ, ಎಲ್ಲಿ?
Edited By:

Updated on: Aug 04, 2020 | 3:20 PM

ಧಾರವಾಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮ್ಮದೇ ರೀತಿಯಲ್ಲಿ ಭಗವಂತನಿಗೆ ಕಾಣಿಕೆ ಅರ್ಪಿಸುತ್ತಿದ್ದಾರೆ.

 

ಅಂತೆಯೇ, ಧಾರವಾಡದ ಕಲಾವಿದ ಮಂಜುನಾಥ್ ಸಹ  ಒಬ್ಬರು. ನಗರದ ಕೆಲಗೇರಿ ಬಡಾವಣೆಯ ನಿವಾಸಿಯಾಗಿರುವ ಮಂಜುನಾಥ್ ಹಿರೇಮಠ ರಾಮ ಮಂದಿರದ ವಿನ್ಯಾಸವನ್ನು ಮರಳಿನಲ್ಲಿ ಸುಂದರವಾಗಿ ಬಿಡಿಸಿದ್ದಾರೆ.

ನಗರದ ದೊಡ್ಡ ನಾಯಕನ ಬಡಾವಣೆಯಲ್ಲಿ ಬಿಡಿಸಿರುವ ಈ ಮರಳು ಶಿಲ್ಪಕ್ಕೆ ಒಂದು ಟಿಪ್ಪರ್ ಲಾರಿಯಷ್ಟು ಮರಳನ್ನು ಬಳಸಲಾಗಿದೆ. ಬೆಳಗ್ಗೆ 5:30ಕ್ಕೆ ಕಲಾಕೃತಿಯನ್ನು ಬಿಡಿಸುವ ಕೆಲಸ ಆರಂಭಿಸಿದ ಮಂಜುನಾಥ್​ ರಾತ್ರಿ 10:30ಕ್ಕೆ ಮುಗಿಸಿದ್ದಾರೆ. ಮರಳು ಶಿಲ್ಪವು ಸುಮಾರು 6 ಅಡಿ ಎತ್ತರವಿದ್ದು 10 ಅಡಿ ಅಗಲವಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us