AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್

ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಲ್ಲೂ ಅಶ್ವಿನ್ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್​ಗೆ ವಿದಾಯ ಹೇಳುವಾಗ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್
ಹೌದು, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗುವ ಮುನ್ನ ಅಶ್ವಿನ್ ಕೌಂಟಿ ಪಂದ್ಯವನ್ನಾಡಿದ್ದರು. ಸೋಮರ್‌ಸೆಟ್ ವಿರುದ್ದದ ಪಂದ್ಯದಲ್ಲಿ ಅಶ್ವಿನ್ ಸರ್ರೆ ಪರ ಕಣಕ್ಕಿಳಿದಿದ್ದರು. ಡ್ರಾನಲ್ಲಿ ಅಂತ್ಯಗೊಂಡಿದ್ದ ಈ ಪಂದ್ಯದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 34 ವಿಕೆಟ್​ಗಳು ಬಿದ್ದಿದ್ದವು. ಇದರಲ್ಲಿ ಕೇವಲ ಸ್ಪಿನ್ನರ್‌ಗಳು 32 ವಿಕೆಟ್ ಪಡೆದಿರುವುದು ವಿಶೇಷ.
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 03, 2021 | 11:04 PM

Share

ಹಿಂದಿ ಭಾಷೆಯ ಮೇಲೆ ಅಪಾರ ಒಲವಿಟ್ಟುಕೊಂಡು ಅದನ್ನು ಮಾತಾಡಲು ಕಲಿತಿರುವ ಮತ್ತು ಭಾರತೀಯ ಕ್ರಿಕೆಟರ್​ಗಳನ್ನು ನಿರಂತರವಾಗಿ ಪ್ರಶಂಸಿಸುವ ಇಂಗ್ಲೆಂಡ್​ನ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್​ ಆಗಿ ಕೆಲಸ ಮಾಡುತ್ತಿರುವ ಕೆವಿನ್ ಪೀಟರ್ಸನ್ ಪ್ರಚಂಡ ಆಫ್-ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಪ್ರಸಕ್ತ ಸರಣಿಯಲ್ಲಿ ನೀಡುತ್ತಿರುವ ಪ್ರದರ್ಶನಗಳನ್ನು ಕೊಂಡಾಡಿ ಅವರು ಭಾರತದ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ತಮ್ಮ ವೃತ್ತಿಬದುಕಿನ ಉತ್ಕೃಷ್ಟ ಫಾರ್ಮನಲ್ಲಿರುವ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಅಲ್ಲದೆ ಬ್ಯಾಟಿಂಗ್​ನಲ್ಲೂ ಮಿಂಚುತ್ತಿದ್ದಾರೆ. ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್​ನಲ್ಲಿ ಅವರು ದೀರ್ಘಾವೃತ್ತಿಯ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದ 4 ನೇ ಭಾರತೀಯನೆನಿಸಿಕೊಂಡರು. ಈ ಸಾಧನೆಯನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಅತಿ ವೇಗದಲ್ಲಿ ಮಾಡಿದ ಬೌಲರ್ ಎನಿಸಿಕೊಂಡರು.

ಬೆಟ್​ವೇ ಇನ್​ಸೈಡರ್ ಹೆಸರಿನ ಕ್ರೀಡಾ ವೆಬ್​ಸೈಟ್​ಗೆ ಬರೆದಿರುವ ಬ್ಲಾಗ್​ನಲ್ಲಿ ಪೀಟರ್ಸನ್, ಅಶ್ವಿನ್ ಅವರಷ್ಟು ಉತ್ತಮವಾಗಿ ಪಿಚ್​ ಕಂಡೀಶನ್​ಗಳನ್ನು ಬಳಸಿಕೊಳ್ಳುವ ಬೌಲರ್ ಮತ್ತೊಬ್ಬನಿಲ್ಲ ಎಂದು ಹೇಳಿದ್ದಾರೆ.

‘ಎರಡನೇ ಅತಿವೇಗದಲ್ಲಿ 400 ವಿಕೆಟ್​ಗಳನ್ನು ಪಡೆಯುವ ಸಾಧನೆಯನ್ನು ಅಶ್ವಿನ್ ಮಾಡಿರುವುದು ಸಾಮಾನ್ಯ ಮಾತಲ್ಲ. ಸ್ವದೇಶದಲ್ಲಿ ಆಡುತ್ತಿರಲಿ ಅಥವಾ ವಿದೇಶದಲ್ಲಿ; ಪಿಚ್​ ಕಂಡೀಶನ್​ಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವ ಅವರು ನಿಸ್ಸಂದೇಹವಾಗಿ ಚಾಣಾಕ್ಷ ಬೌಲರ್. ಅವರ ಬೌಲಿಂಗ್​ಲ್ಲಿರುವ ವೈವಿಧ್ಯತೆ ಮತ್ತು ನಿಯಂತ್ರಣ ಅಪ್ರತಿಮವಾದದ್ದು’ ಎಂದು ಪೀಟರ್ಸನ್ ಬ್ಲಾಗ್​ನಲ್ಲಿ ಹೇಳಿದ್ದಾರೆ.

Kevin Pietersen

ಕೆವಿನ್ ಪೀಟರ್ಸನ್

‘ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಲ್ಲೂ ಅವರು ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್​ಗೆ ವಿದಾಯ ಹೇಳುವಾಗ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ’ ಎಂದು ಪೀಟರ್ಸನ್ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಅವರು ಇದುವರೆಗೆ ಮುಗಿದಿರುವ 3 ಪಂದ್ಯಗಳಲ್ಲಿ 15.71 ಸರಾಸರಿಯಲ್ಲಿ 24 ವಿಕೆಟ್​ ಪಡೆದಿದ್ದಾರೆ. ಕಳೆದ ತಿಂಗಳು ಐಸಿಸಿಯ ಮಾಸಿಕ ಕ್ರಿಕೆಟರ್ ಗೌರವಕ್ಕೆ ಪಾತ್ರರಾದ ಅವರು ಪ್ರಸಕ್ತ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಐಸಿಸಿ ಬೌಲರ್​ಗಳ ಟೆಸ್ಟ್​ ರ‍್ಯಾಕಿಂಗ್​ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸದರಿ ಸರಣಿಯ ಕೊನೆ ಮತ್ತು ನಾಲ್ಕನೆ ಟೆಸ್ಟ್​ ಗುರುವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ಭಾರತ 2-1 ಅಂತರದ ಮುನ್ನಡೆ ಸಾಧಿಸಿದ್ದು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮತ್ತೊಮ್ಮೆ ಇಂಗ್ಲೆಂಡ್ ಆಟಗಾರರನ್ನು ಗೋಳು ಹೊಯ್ದಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ನ್ಯೂಜಿಲೆಂಡ್​ನಲ್ಲಿ ನಾವು ಮೂರೇ ದಿನಗಳಲ್ಲಿ ಟೆಸ್ಟ್​ ಸೋತಾಗ ಪಿಚ್​ಗಳ ಬಗ್ಗೆ ಯಾರೂ ಮಾತಾಡಲಿಲ್ಲ: ವಿರಾಟ್ ಕೊಹ್ಲಿ

Published On - 10:54 pm, Wed, 3 March 21

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?