AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಸಾವಿಗೆ ಇದೇ ಕಾರಣ!

ಬೆಂಗಳೂರು: ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರಲ್ಲಿ ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚು ಸಾವನ್ನಪ್ಪಿದ್ದಾರೆ. ಶೇಕಡಾ 80 ರಷ್ಟು ಸೋಂಕಿತರು ಸತ್ತಿರೋದು ಉಸಿರಾಟದ ಸಮಸ್ಯೆಯಿಂದ ಎಂದು ವೈದ್ಯರು ಉಸಿರಾಟದ ಸಮಸ್ಯೆ ಇರೋರಿಗೆ ಎಚ್ಚರಿಕೆ ನೀಡಿದ್ದಾರೆ. ಹೌದು ಕೊರೊನಾ ರೋಗಿಗಳಿಗೆ ಹೆಚ್ಚಾಗಿ ಬಾಧಿಸುತ್ತಿರೋದು ಉಸಿರಾಟದ ಸಮಸ್ಯೆ. ರಾಜ್ಯದಲ್ಲಿ ಸಾಯುತ್ತಿರೋ ಬಹುತೇಕ ಜನರು ಉಸಿರಾಟದ ಸಮಸ್ಯೆಗೊಳಗಾದವರೇ ಹೆಚ್ಚು. ಪ್ರತೀ ದಿನ ಸಾವನ್ನಪ್ಪುತ್ತಿರೋ ರೋಗಿಗಳ ಪೈಕಿ ಶೇ.80 ರಷ್ಟು ಉಸಿರಾಟದ ಸಮಸ್ಯೆಯಿಂದಲೇ ಜೀವ ಬಿಡ್ತಿದ್ದಾರೆ. ಹೀಗಾಗಿ ಆಸ್ತಮಾ, ವೀಸಿಂಗ್ ಸಮಸ್ಯೆ ಇರೋ ಜನರು ಕೊರೊನಾದಿಂದ ಎಚ್ಚರದಿಂದ […]

ಕೊರೊನಾ ಸೋಂಕಿತರಲ್ಲಿ ಶೇ. 80ರಷ್ಟು ಮಂದಿ ಸಾವಿಗೆ ಇದೇ ಕಾರಣ!
Guru
| Edited By: |

Updated on: Aug 11, 2020 | 10:03 AM

Share

ಬೆಂಗಳೂರು: ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿರುವವರಲ್ಲಿ ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚು ಸಾವನ್ನಪ್ಪಿದ್ದಾರೆ. ಶೇಕಡಾ 80 ರಷ್ಟು ಸೋಂಕಿತರು ಸತ್ತಿರೋದು ಉಸಿರಾಟದ ಸಮಸ್ಯೆಯಿಂದ ಎಂದು ವೈದ್ಯರು ಉಸಿರಾಟದ ಸಮಸ್ಯೆ ಇರೋರಿಗೆ ಎಚ್ಚರಿಕೆ ನೀಡಿದ್ದಾರೆ.

ಹೌದು ಕೊರೊನಾ ರೋಗಿಗಳಿಗೆ ಹೆಚ್ಚಾಗಿ ಬಾಧಿಸುತ್ತಿರೋದು ಉಸಿರಾಟದ ಸಮಸ್ಯೆ. ರಾಜ್ಯದಲ್ಲಿ ಸಾಯುತ್ತಿರೋ ಬಹುತೇಕ ಜನರು ಉಸಿರಾಟದ ಸಮಸ್ಯೆಗೊಳಗಾದವರೇ ಹೆಚ್ಚು. ಪ್ರತೀ ದಿನ ಸಾವನ್ನಪ್ಪುತ್ತಿರೋ ರೋಗಿಗಳ ಪೈಕಿ ಶೇ.80 ರಷ್ಟು ಉಸಿರಾಟದ ಸಮಸ್ಯೆಯಿಂದಲೇ ಜೀವ ಬಿಡ್ತಿದ್ದಾರೆ.

ಹೀಗಾಗಿ ಆಸ್ತಮಾ, ವೀಸಿಂಗ್ ಸಮಸ್ಯೆ ಇರೋ ಜನರು ಕೊರೊನಾದಿಂದ ಎಚ್ಚರದಿಂದ ಇರಬೇಕು. ಮಳೆಗಾಲ ಶುರುವಾಗಿದೆ, ವಾತವರಣದಲ್ಲಿ ಶೀತಾಂಶ ಹೆಚ್ಚಾಗಿದೆ. ಇದರಿಂದ ಆಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಿದೆ. ಇಂಥಹ ರೋಗಿಗಳಿಗೆ ಕೊರೊನಾ ಕೂಡ ಅಟ್ಯಾಕ್ ಮಾಡಿ ಜೀವಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಆಸ್ತಮಾ ಇರೋರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ.

ಬೇರೆ ಬೇರೆ ಖಾಯಿಲೆಗಳಿಗಿಂತ, ಉಸಿರಾಟದ ತೊಂದರೆ ಇಂದ ಬಲಿಯಾಗ್ತಿರೋರೆ ಹೆಚ್ಚು. ಉಸಿರಾಟದ ಸಮಸ್ಯೆ ಇರುವವರು ಎಚ್ಚೆತ್ತುಕೊಳ್ಳಲೇಬೇಕು. ಕಳೆದ ಹತ್ತು ದಿನಗಳಲ್ಲಿ ಬರೋಬ್ಬರಿ 998 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ ಸುಮಾರು 800 ಮಂದಿ ಉಸಿರಾಟದ ತೊಂದರೆಯಿಂದಲೇ ಬಲಿಯಾಗಿದ್ದಾರೆ.

ಈ ಮೊದಲೇ ಆಸ್ತಮ, ಕ್ಷಯ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಹೀಗಾಗಿ ಇಂಥವರು ಇನ್ನೂ ಮೂರ್ನಾಲ್ಕು ತಿಂಗಳು ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ಹಿರಿಯ ವೈದ್ಯರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ