AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನವಾಸಿ ನೆಲದಲ್ಲಿ ಕದಂಬೋತ್ಸವ: ವೀಕೆಂಡ್ ಮೂಡ್​​ನಲ್ಲಿದ್ದೋರಿಗೆ ರಸದೌತಣ

ಉತ್ತರ ಕನ್ನಡ: ಹಾಕ್ರೋ ಸ್ಟೆಪ್ಪು.. ಮಾಡ್ರೋ ಡ್ಯಾನ್ಸ್.. ಫುಲ್ ಎಂಜಾಯ್​​ಮೆಂಟ್​​​.. ಸ್ಟೇಜ್ ಮೇಲೆ ಸಂಗೀತ ರಸದೌಣ.. ಡಿಜೆ ಸದ್ದಿನ ಅಬ್ಬರ.. ಸಾಂಪ್ರದಾಯಿಕ ಶೈಲಿ ನೃತ್ಯಗಳ ಖದರ್.. ಎಲ್ಲೆಲ್ಲೂ ಕನ್ನಡದ ಕಂಪು.. ವಾದ್ಯಗೋಷ್ಟಿಗಳ ಇಂಪು.. ಅಂದ್ಹಾಗೆ ಈ ಸಂಭ್ರಮ.. ಸಡಗರ ಧರೆಗಿಳಿದಿದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ. ಶಿರಸಿ ನೆಲದಲ್ಲಿ ಕದಂಬೋತ್ಸವ ಕಾರ್ಯಕ್ರಮ ಕನ್ನಡದ ಕಂಪನ್ನ ಎಲ್ಲೆಲ್ಲೂ ಹರಡಿತ್ತು. ಎರಡು ದಿನಗಳ ಕಾಲ ನಡೆದ ಕದಂಬೋತ್ಸವದಲ್ಲಿ ಜನರು ಮಿಂದೆದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನ ರಂಜಿಸ್ತು. ಅದ್ರಲ್ಲೂ, […]

ಬನವಾಸಿ ನೆಲದಲ್ಲಿ ಕದಂಬೋತ್ಸವ: ವೀಕೆಂಡ್ ಮೂಡ್​​ನಲ್ಲಿದ್ದೋರಿಗೆ ರಸದೌತಣ
Follow us
ಸಾಧು ಶ್ರೀನಾಥ್​
|

Updated on: Feb 10, 2020 | 9:06 AM

ಉತ್ತರ ಕನ್ನಡ: ಹಾಕ್ರೋ ಸ್ಟೆಪ್ಪು.. ಮಾಡ್ರೋ ಡ್ಯಾನ್ಸ್.. ಫುಲ್ ಎಂಜಾಯ್​​ಮೆಂಟ್​​​.. ಸ್ಟೇಜ್ ಮೇಲೆ ಸಂಗೀತ ರಸದೌಣ.. ಡಿಜೆ ಸದ್ದಿನ ಅಬ್ಬರ.. ಸಾಂಪ್ರದಾಯಿಕ ಶೈಲಿ ನೃತ್ಯಗಳ ಖದರ್.. ಎಲ್ಲೆಲ್ಲೂ ಕನ್ನಡದ ಕಂಪು.. ವಾದ್ಯಗೋಷ್ಟಿಗಳ ಇಂಪು..

ಅಂದ್ಹಾಗೆ ಈ ಸಂಭ್ರಮ.. ಸಡಗರ ಧರೆಗಿಳಿದಿದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ. ಶಿರಸಿ ನೆಲದಲ್ಲಿ ಕದಂಬೋತ್ಸವ ಕಾರ್ಯಕ್ರಮ ಕನ್ನಡದ ಕಂಪನ್ನ ಎಲ್ಲೆಲ್ಲೂ ಹರಡಿತ್ತು. ಎರಡು ದಿನಗಳ ಕಾಲ ನಡೆದ ಕದಂಬೋತ್ಸವದಲ್ಲಿ ಜನರು ಮಿಂದೆದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನ ರಂಜಿಸ್ತು. ಅದ್ರಲ್ಲೂ, ಮುಂಬೈನ ಪ್ರಸಿದ್ಧ ಎಂಜೆ 5 ನೃತ್ಯ ತಂಡ ಪ್ರದರ್ಶಿಸಿದ ಡ್ಯಾನ್ಸ್ ವೇದಿಕೆ ಮೇಲೆ ಮೋಡಿ ಮಾಡ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಣಿದು ಕುಪ್ಪಳಿಸಿದ ಜನ: ಇನ್ನು, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ತಂಡವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಕಂಡು ಎಲ್ರೂ ಕುಣಿದು ಕುಪ್ಪಳಿಸಿದ್ರು. ಮನೋರಂಜನೆಯ ರಸಗವಳ ಸವಿದ್ರು.

ಇನ್ನು, ಕದಂಬೋತ್ಸವ ಅಂಗವಾಗಿ ವಿವಿಧ ಗೋಷ್ಠಿಗಳನ್ನ ಆಯೊಜಿಸಿದ್ರು. ಪ್ರತಿ ಗೋಷ್ಠಿಯಲ್ಲಿ ಹವಲು ವಿಚಾರಧಾರೆಗಳ ಹೂರಣ ಹಂಚಿಕೊಂಡ್ರು. ಇನ್ನೊಂದೆಡೆ ಶ್ವಾನಪ್ರದರ್ಶನ ಕೂಡ ಕದಂಬೋತ್ಸಕ್ಕೆ ಆಗಮಿಸಿದ್ದವರನ್ನ ಸಾಕಷ್ಟು ಆಕರ್ಷಿಸ್ತು. ವಿವಿಧ ತಳಿಯ ಶ್ವಾನಗಳನ್ನ ಕಂಡು ಸಾರ್ವಜನಿಕರು ಸಖತ್ ಖುಷಿ ಪಟ್ರು. ಜಿಲ್ಲಾಡಳಿತದ ಕಾರ್ಯಕ್ಕೆ ಸಚಿವ ಶಿವರಾಜ್ ಹೆಬ್ಬಾರ್ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಒಟ್ನಲ್ಲಿ, ಕಳೆದ ಬಾರಿ ಕದಂಬೋತ್ಸವಕ್ಕೆ ಮಂಗನ ಕಾಯಿಲೆ ಕರಿನೆರಳು ಆವರಿಸಿದ್ರಿಂದ ರದ್ದು ಮಾಡಲಾಗಿತ್ತು. ಆದ್ರೆ, ಈ ವರ್ಷ ಬನವಾಸಿ ನೆಲದಲ್ಲಿ ನಡೆದ ಕದಂಬೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ವೀಕೆಂಡ್ ಮೂಡ್​​ನಲ್ಲಿದ್ದೋರು ಫುಲ್ ಎಂಜಾಯ್ ಮಾಡಿದ್ರು.

ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ