AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ, ದಂಡ ಪಾವತಿಸದಿದ್ದರೆ ವಾಹನ ಜಪ್ತಿಗೆ ನಿರ್ಧಾರ..

ಟ್ರಾಫಿಕ್ ನಿಯಮಗಳನ್ನು ನಿಲ್ಲಂಘಿಸಿದ್ರೆ ಭಾರಿ ದಂಡ ಕಟ್ಟಬೇಕಾಗುತ್ತೆ. ಆದರೆ ಕೆಲ ಮಂದಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ ಇದೆ. 2017ರಿಂದ 2020ರವರೆಗೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಟ್ರಾಫಿಕ್ ಫೈನ್​ ಇದು.

ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ, ದಂಡ ಪಾವತಿಸದಿದ್ದರೆ ವಾಹನ ಜಪ್ತಿಗೆ ನಿರ್ಧಾರ..
ಆಯೇಷಾ ಬಾನು
|

Updated on: Dec 04, 2020 | 9:17 AM

Share

ಬೆಂಗಳೂರು: ರಾಜಧಾನಿ ಬೆಂಗಳೂರು ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿದೆ. ಪೆಟ್ರೋಲ್​ಗೆ ದುಡ್ಡಿಲ್ಲಾ ಅಂದ್ರೂ ಇಲ್ಲಿನ ಜನಗಳ ಬಳಿ ಗಾಡಿಗಳು ಮಾತ್ರ ಇದ್ದೇ ಇರ್ತಾವೆ. ಅದರಲ್ಲೂ ಈ ಟೀನೇಜ್ ಹುಡುಗರಂತೋ ಲೈಸೆನ್ಸ್ ಇಲ್ಲ, ದುಬಾರಿ ದಂಡ ಇರೋದು ಗೊತ್ತಿದ್ರೂ ಶೋಕಿ ಮಾಡೋದನ್ನ ಕಮ್ಮಿ ಮಾಡಲ್ಲ. ರೂಲ್ಸ್ ಬ್ರೇಕ್ ಮಾಡೋ ಸವಾರರಿಗೆ ಬುದ್ಧಿ ಕಲಿಸೋಕೆ ಸರ್ಕಾರ ನಾನಾ ಪ್ಲಾನ್ಸ್​ಗಳನ್ನು ಮಾಡುದ್ರೂ ಪ್ರಯೋಜನವಾಗ್ತಿಲ್ಲ.

ಟ್ರಾಫಿಕ್ ನಿಯಮಗಳನ್ನು ನಿಲ್ಲಂಘಿಸಿದ್ರೆ ಭಾರಿ ದಂಡ ಕಟ್ಟಬೇಕಾಗುತ್ತೆ. ಆದರೆ ಕೆಲ ಮಂದಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ ಇದೆ. 2017ರಿಂದ 2020ರವರೆಗೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಟ್ರಾಫಿಕ್ ಫೈನ್​ ಇದು.

ದ್ವಿಚಕ್ರ ವಾಹನಗಳ ಕೇಸ್ ಉಲ್ಲಂಘನೆಯಿಂದ 258 ಕೋಟಿ 27 ಲಕ್ಷದ 77 ಸಾವಿರದ 700 ರೂ ಬಾಕಿ ಉಳಿದಿದೆ. ಆಟೋಗಳಿಂದ 10 ಕೋಟಿ 47 ಲಕ್ಷ 48 ಸಾವಿರದ ಇನ್ನೂರು ರೂ ಹಾಗೂ ಕಾರುಗಳಿಂದ 41 ಕೋಟಿ 5 ಲಕ್ಷದ 23ಸಾವಿರದ 500 ರೂ ದಂಡದ ಮೊತ್ತ ಬಾಕಿ ಇದೆ. ಗೂಡ್ಸ್ ವೆಹಿಕಲ್ಸ್, ಕ್ಯಾಬ್, ಮಿನಿಲಾರಿ, ಮೊಪೆಡ್​ಗಳಿಂದ ಕೋಟಿಗಟ್ಟಲೇ ದಂಡದ ಮೊತ್ತ ಬರಬೇಕಿದೆ. ಹೀಗಾಗಿ ಫೈನ್ ಕಲೆಕ್ಟ್ ಮಾಡೋದಕ್ಕೆ ಆಯಾ ಸಂಚಾರಿ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ವಾಹನದ ನಂಬರ್ ಹಾಗೂ ಮಾಲೀಕರ ವಿಳಾಸ ನೀಡಿ ಫೈನ್ ಕಲೆಕ್ಟ್ ಮಾಡಲು ಸೂಚನೆ ನೀಡಲಾಗಿದೆ.

ಫೈನ್ ಕಟ್ಟಿಲ್ಲ ಅಂದ್ರೆ ವಾಹನಗಳು ಸೀಜ್: ದಂಡ ಕಟ್ಟದ ವಾಹನಗಳು ಪಾರ್ಕಿಂಗ್ ಲಾಟ್​ನಲ್ಲಿ ಪಾರ್ಕ್ ಮಾಡಿದ್ರೆ ಅಲ್ಲೇ ಸೀಜ್ ಮಾಡಲು ಸೂಚಿಸಲಾಗಿದೆ. ಹೀಗಾಗಿ ಫೀಲ್ಡಿಗಿಳಿದ ಪೊಲೀಸರು ವಾಹನಗಳ ವೀಲ್ ಲಾಕ್ ಮಾಡಿ ವಶಕ್ಕೆ ಪಡೆಯುತ್ತಿದ್ದಾರೆ. ಮೊದಲಿಗೆ ಫೈನ್ ಕಟ್ಟುವಂತೆ ಮೊಬೈಲ್​ಗೆ ಒಂದು ಬಾರಿ ಮೆಸೇಜ್ ಕಳಿಸಲಾಗತ್ತೆ. ನಂತರ ಮನೆ ಬಳಿ ತೆರಳಿ ನೋಟಿಸ್ ಕೊಟ್ಟು ಫೈನ್ ಪಾವತಿಸಲು ಸೂಚಿಸಲಾಗತ್ತೆ. ಒಂದು ಬಾರಿ ಮೆಸೇಜ್, ಎರಡು ಬಾರಿಯ ನೋಟಿಸ್ ಗೆ ಫೈನ್ ಕಟ್ಟದಿದ್ರೆ ಸಿಕ್ಕಲ್ಲಿ ವಾಹನ ಸೀಜ್ ಮಾಡಲಾಗುತ್ತೆ. ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆ, ಬೆಂಗಳೂರು1 ಹಾಗೂ ನೋಟಿಸ್ ನೀಡಲು ಬಂದತಹ ವೇಳೆಯಲ್ಲಿ ಸವಾರರು ಫೈನ್ ಕಟ್ಟಬಹುದು. ಇಲ್ಲದಿದ್ದರೆ ವಾಹನ ಸೀಜ್ ಆಗುತ್ತೆ.

‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್