AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ಕೇಸ್​: ಮುತ್ತಪ್ಪ ರೈ ಪುತ್ರ ರಿಕ್ಕಿನನ್ನು ಕಸ್ಟಡಿಗೆ ತೆಗೆದುಕೊಂಡು ತುಮಕೂರಿನತ್ತ ಹೊರಟ CCB

ಬೆಂಗಳೂರು: ಡ್ರಗ್ಸ್‌ ಜಾಲದ ನಂಟು ಆರೋಪ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ರಿಕ್ಕಿ ರೈನನ್ನು ತುಮಕೂರು ರಸ್ತೆಯಲ್ಲಿ ಕರೆದುಕೊಂಡು ಹೊಗುತ್ತಿದ್ದಾರೆ. ನೆಲಮಂಗಲ ಟೋಲ್ ನಂತರ ಪೊಲೀಸರ ವಾಹನ ರಾಷ್ಟ್ರೀಯ ಹೆದ್ದಾರಿಯ ಹೈ ವೆನಲ್ಲಿ ತುಮಕೂರು ಕಡೆಗೆ ತೆರಳುತ್ತಿದೆ. ವಾಹನದಲ್ಲಿ ರಿಕ್ಕಿ ರೈನನ್ನು ಕರೆದೊಯ್ಯತ್ತಿರುವ ಸಿಸಿಬಿ ಅಧಿಕಾರಿಗಳು. ಇಷ್ಟಕ್ಕೂ.. ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ CCB ಮುರುಕೊಂಡು ಬಿದ್ದಿರೋದು ಯಾಕೆ ಗೊತ್ತಾ? ಮುತ್ತಪ್ಪ ರೈ ಪುತ್ರ ರಿಕ್ಕಿ […]

ಡ್ರಗ್ಸ್​ ಕೇಸ್​: ಮುತ್ತಪ್ಪ ರೈ ಪುತ್ರ ರಿಕ್ಕಿನನ್ನು ಕಸ್ಟಡಿಗೆ ತೆಗೆದುಕೊಂಡು ತುಮಕೂರಿನತ್ತ ಹೊರಟ CCB
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Oct 06, 2020 | 11:18 AM

Share

ಬೆಂಗಳೂರು: ಡ್ರಗ್ಸ್‌ ಜಾಲದ ನಂಟು ಆರೋಪ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ರಿಕ್ಕಿ ರೈನನ್ನು ತುಮಕೂರು ರಸ್ತೆಯಲ್ಲಿ ಕರೆದುಕೊಂಡು ಹೊಗುತ್ತಿದ್ದಾರೆ. ನೆಲಮಂಗಲ ಟೋಲ್ ನಂತರ ಪೊಲೀಸರ ವಾಹನ ರಾಷ್ಟ್ರೀಯ ಹೆದ್ದಾರಿಯ ಹೈ ವೆನಲ್ಲಿ ತುಮಕೂರು ಕಡೆಗೆ ತೆರಳುತ್ತಿದೆ. ವಾಹನದಲ್ಲಿ ರಿಕ್ಕಿ ರೈನನ್ನು ಕರೆದೊಯ್ಯತ್ತಿರುವ ಸಿಸಿಬಿ ಅಧಿಕಾರಿಗಳು.

ಇಷ್ಟಕ್ಕೂ.. ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ CCB ಮುರುಕೊಂಡು ಬಿದ್ದಿರೋದು ಯಾಕೆ ಗೊತ್ತಾ? ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಮಾತನಾಡಿದ್ದು, ಮುತ್ತಪ್ಪರೈ ಪುತ್ರ ರಿಕ್ಕಿ ರೈಗೆ ಡ್ರಗ್ಸ್‌ ಜಾಲದ ನಂಟು ಆರೋಪ ಕಾಟನ್‌ಪೇಟೆ ಪ್ರಕರಣದ ಸಂಬಂಧ ಸಿಸಿಬಿ ದಾಳಿ ನಡೆದಿದೆ. ಕೇಸ್‌ನಲ್ಲಿ ನಾಪತ್ತೆಯಾಗಿದ್ದ ಆರೋಪಿಗಳಿಗೆ ರಿಕ್ಕಿ ರೈ ಸಹಾಯ ನೀಡಿದ್ದಾನೆ. ರಿಕ್ಕಿ ರೈ ಸಹಾಯ ಮಾಡ್ತಿದ್ದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ರಿಕ್ಕಿ ರೈ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸ್ತಿದ್ದೇವೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಪರಾರಿಯಾಗಿರೋ ಆದಿತ್ಯ ಆಳ್ವ ಜೊತೆ ರಿಕ್ಕಿ ರೈಗೆ ಸ್ನೇಹವಿತ್ತು. ಅಲ್ಲದೆ ಅರೆಸ್ಟ್ ಆಗಿರೋ ಸಾಕಷ್ಟು ಮಂದಿ ಜೊತೆ ರಿಕ್ಕಿಗೆ ಸಂಪರ್ಕವಿದೆ. ಹೀಗಾಗಿ ರಿಕ್ಕಿ ನಿವಾಸಕ್ಕೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಇಂದು ಬೆಳಗ್ಗೆ, ರಿಕ್ಕಿ ರೈನ ಫ್ಲ್ಯಾಟ್ ಫ್ಲೋರ್ ಕ್ಲೋಸ್ ಮಾಡಿಕೊಂಡು ಸಂಪೂರ್ಣ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಬಿಡದಿಯಲ್ಲಿ ಮುತ್ತಪ್ಪ ರೈ ನಿವಾಸದ ಮೇಲೆ CCB ದಾಳಿ

Published On - 10:30 am, Tue, 6 October 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ