ಒಂದೇ‌ ಮಳೆಗೆ ಕೊಚ್ಚಿಹೋದ ವೇದಾವತಿ ಅಣೆಕಟ್ಟೆ.. ಭುಗಿಲೆದ್ದ ಸ್ಥಳೀಯರ ಆಕ್ರೋಶ

ಚಿತ್ರದುರ್ಗ: ನದಿಗೆ ಅಡ್ಡಲಾಗಿ‌ ನಿರ್ಮಿಸಲಾಗಿದ್ದ ತಡೆ ಅಣೆಕಟ್ಟು (ಚೆಕ್​ಡ್ಯಾಂ) ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ದೇವರಕೊಟ್ಟ ಬಳಿ ನಡೆದಿದೆ. ತಡೆ ಅಣೆಕಟ್ಟನ್ನು ವೇದಾವತಿ‌ ನದಿಗೆ ಅಡ್ಡಲಾಗಿ‌ ನಿರ್ಮಿಸಲಾಗಿತ್ತು. ಆದರೆ, ಇದು ಒಂದೇ‌ ಮಳೆಗೆ ಹಾಳಾಗಿ ಹೋಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ‌ ಕಾಮಗಾರಿಯಿಂದಲೇ ಅಣೆಕಟ್ಟು ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಂದೇ‌ ಮಳೆಗೆ ಕೊಚ್ಚಿಹೋದ ವೇದಾವತಿ ಅಣೆಕಟ್ಟೆ.. ಭುಗಿಲೆದ್ದ ಸ್ಥಳೀಯರ ಆಕ್ರೋಶ
Edited By:

Updated on: Sep 10, 2020 | 10:53 AM

ಚಿತ್ರದುರ್ಗ: ನದಿಗೆ ಅಡ್ಡಲಾಗಿ‌ ನಿರ್ಮಿಸಲಾಗಿದ್ದ ತಡೆ ಅಣೆಕಟ್ಟು (ಚೆಕ್​ಡ್ಯಾಂ) ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ದೇವರಕೊಟ್ಟ ಬಳಿ ನಡೆದಿದೆ.

ತಡೆ ಅಣೆಕಟ್ಟನ್ನು ವೇದಾವತಿ‌ ನದಿಗೆ ಅಡ್ಡಲಾಗಿ‌ ನಿರ್ಮಿಸಲಾಗಿತ್ತು. ಆದರೆ, ಇದು ಒಂದೇ‌ ಮಳೆಗೆ ಹಾಳಾಗಿ ಹೋಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ‌ ಕಾಮಗಾರಿಯಿಂದಲೇ ಅಣೆಕಟ್ಟು ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.