AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್​ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್​: ಇದು ಚೀನಾದ ಕ್ವಾಂಟಂ ಕಂಪ್ಯೂಟರ್​

ತಂತ್ರಜ್ಞಾನ ಕ್ಷೇತ್ರದಲ್ಲಿ  ಮೇಲುಗೈ ಸಾಧಿಸಲು ಅಮೆರಿಕ ಮತ್ತು ಚೀನಾ ಸ್ಪರ್ಧಿಸುತ್ತಿವೆ. ಈ ನಿಟ್ಟಿನಲ್ಲಿ, ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರ್ ಒಂದನ್ನು​ ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್​ಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಚೀನಾ ಮಾಹಿತಿ ನೀಡಿದೆ.

ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್​ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್​: ಇದು ಚೀನಾದ ಕ್ವಾಂಟಂ ಕಂಪ್ಯೂಟರ್​
ಫೋಟಾನಿಕ್ ಕ್ವಾಂಟಂ ಕಂಪ್ಯೂಟರ್
shruti hegde
| Edited By: |

Updated on: Dec 07, 2020 | 12:51 PM

Share

ತಂತ್ರಜ್ಞಾನ ಕ್ಷೇತ್ರದಲ್ಲಿ  ಮೇಲುಗೈ ಸಾಧಿಸಲು ಅಮೆರಿಕ ಮತ್ತು ಚೀನಾ ಸ್ಪರ್ಧಿಸುತ್ತಿವೆ. ಈ ನಿಟ್ಟಿನಲ್ಲಿ, ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರ್ ಒಂದನ್ನು​ ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್​ಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಚೀನಾ ಮಾಹಿತಿ ನೀಡಿದೆ.

ಏನಿದು ಕ್ವಾಂಟಂ ಕಂಪ್ಯೂಟರ್? ಅಂದ ಹಾಗೆ, ಚೀನಾದ ಈ ಕ್ವಾಂಟಂ ಕಂಪ್ಯೂಟರ್ ವಿಶ್ವದ ಅತಿ ವೇಗದ ಸೂಪರ್​ ಕಂಪ್ಯೂಟರ್​ಗಿಂತ ಸುಮಾರು 100 ಟ್ರಿಲಿಯನ್ (100 ಲಕ್ಷ ಕೋಟಿ) ಪಟ್ಟು ಅಧಿಕ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ . ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಆಗಿರುವ  ಜಪಾನ್​ನ ಫುಗಾಕುಗಿಂತ 100 ಟ್ರಿಲಿಯನ್ ಪಟ್ಟು ವೇಗದಲ್ಲಿದೆ.

ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರನ್ನು ನಾವೇ ನಿರ್ಮಿಸಿದ್ದೇವೆಂದು ಬೀಗುತ್ತಿದ್ದಾರೆ. ಈ ಮೂಲಕ ಚೀನಾ, ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಸ್ಪರ್ಧಿಸುತ್ತಿದೆ.

ಕ್ವಾಂಟಂ ಪ್ರಚಾರದಲ್ಲಿದೆಯೆ? ಕ್ವಾಂಟಂ ಕಂಪ್ಯೂಟರ್ ತಂತ್ರಜ್ಞಾನ ಇತ್ತೀಚೆಗೆ ಸುದ್ದಿಯಲ್ಲಿದೆ. ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಯ ಭಾಗವಾಗಿ ಬೇಕಾಗುವ ಗಣಿತ ಮತ್ತು ಇತರ ಕಾರ್ಯಗಳಿಗೆ ಕ್ವಾಂಟಂ ಕಂಪ್ಯೂಟರ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸದ್ಯ, ಅಮೆರಿಕದ ಡಿಜಿಟಲ್​ ದಿಗ್ಗಜ ಗೂಗಲ್​ನ ಸೈಕಮೋರ್ ಡಿವೈಸ್ ಮಾತ್ರ ಇಲ್ಲಿಯವರೆಗೆ ಕ್ವಾಂಟಾಂ ತಂತ್ರಜ್ಞಾನವ​ನ್ನು ಹೊಂದಿದೆ.

ಅಂದ ಹಾಗೆ, ಈ ಸೈಕಮೋರ್ ಡಿವೈಸ್​ ಸೂಪರ್ ಕಂಡಕ್ಟಿಂಗ್ (ಅತಿವಾಹಕ) ವಸ್ತುಗಳಿಂದ ತಯಾರಿಸಲಾಗಿದೆ. ಆದರೆ, ಇತ್ತ ಚೀನಾ, ಫೋಟಾನ್ ಆಧಾರಿತ ಕ್ವಾಂಟಂ ಕಂಪ್ಯೂಟರ್​ಗಳನ್ನು ಅಳವಡಿಸಿಕೊಂಡಿದೆ. ಬೋಸಾನ್ ಸ್ಯಾಂಪಲಿಂಗ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ