AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Vaccine ವ್ಯಾಕ್ಸಿನ್ ಪಡೆಯಲು ವಾರಿಯರ್ಸ್​ಗಳಿಂದಲೇ ಹಿಂದೇಟು.. ಕೊರೊನಾಗಿಂತ ವ್ಯಾಕ್ಸಿನ್​ನಿಂದಲೇ ಹೆಚ್ಚುತ್ತಿದೆಯಾ ಭಯ?

Corona Warriors Step Back to Take Corona Vaccine | ದಾವಣಗೆರೆಗೆ 22,200 ಕೊವಿಶೀಲ್ಡ್ ಹಾಗೂ 720 ಕೊವ್ಯಾಕ್ಸಿನ್ ಲಸಿಕೆ ತರಿಸಲಾಗಿತ್ತು. ಲಸಿಕೆ ನೀಡಲು 21,369 ಜನ ಕೊರೊನಾ ವಾರಿಯರ್​ಗಳನ್ನ ಗುರುರ್ತಿಸಲಾಗಿತ್ತು. ಇವರಲ್ಲಿ 9533 ಜನ ಮಾತ್ರ ಲಸಿಕೆ ಪಡೆದಿದ್ದು, ಉಳಿದ 11,836 ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದೇ ಇಲ್ಲಾ.

Corona Vaccine ವ್ಯಾಕ್ಸಿನ್ ಪಡೆಯಲು ವಾರಿಯರ್ಸ್​ಗಳಿಂದಲೇ ಹಿಂದೇಟು.. ಕೊರೊನಾಗಿಂತ ವ್ಯಾಕ್ಸಿನ್​ನಿಂದಲೇ ಹೆಚ್ಚುತ್ತಿದೆಯಾ ಭಯ?
ಕೊರೊನಾ ಲಸಿಕೆ
Follow us
ಆಯೇಷಾ ಬಾನು
|

Updated on:Feb 11, 2021 | 7:56 AM

ದಾವಣಗೆರೆ: ಮಹಾಮಾರಿ ಕೊರೊನಾಗೆ ಈಗಾಗಲೇ ಔಷಧಿ ಕಂಡು ಹಿಡಿದಿದ್ದಾರೆ. ಆದ್ರೆ, ಔಷಧಿ ಕಂಡು ಹಿಡಿದಿದ್ರೂ, ವ್ಯಾಕ್ಸಿನ್ ಪಡೆಯಲು ಜನ ಮುಂದಾಗ್ತಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 22,336 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಮಹಾಮಾರಿಗೆ 263 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಕಾಲ ಬದಲಾಗಿದೆ. ಕೊರೊನಾ ವೈರಸ್ ಹಾವಳಿ ತಗ್ಗಿದೆ. ಜೊತೆಗೆ ಔಷಧಿ ಕೂಡ ಸಿಕ್ಕಿದೆ. ಹೀಗಿದ್ರೂ, ಜನ ಔಷಧಿ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಕೊವಿಡ್ ವಾರಿಯರ್​ಗಳೇ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿರೋದು ಅಚ್ಚರಿಯ ವಿಚಾರ. ಇದೇ ಕಾರಣಕ್ಕೆ ಪೂರ್ವ ವಲಯ ಐಜಿಪಿ ರವಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್​ಪಿ ಹನುಮಂತರಾಯ ಜನರಲ್ಲಿ ಜಾಗೃತಿ ಮೂಡಿಸಲು ತಾವೇ ಲಸಿಕೆ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ರು.

ದಾವಣಗೆರೆಗೆ 22,200 ಕೊವಿಶೀಲ್ಡ್ ಹಾಗೂ 720 ಕೊವ್ಯಾಕ್ಸಿನ್ ಲಸಿಕೆ ತರಿಸಲಾಗಿತ್ತು. ಲಸಿಕೆ ನೀಡಲು 21,369 ಜನ ಕೊರೊನಾ ವಾರಿಯರ್​ಗಳನ್ನ ಗುರುರ್ತಿಸಲಾಗಿತ್ತು. ಇವರಲ್ಲಿ 9533 ಜನ ಮಾತ್ರ ಲಸಿಕೆ ಪಡೆದಿದ್ದು, ಉಳಿದ 11,836 ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದೇ ಇಲ್ಲಾ. ಕೇಳಿದ್ರೆ ನಮಗೆ ಕೊರೊನಾ ಬಂದಿಲ್ಲ. ನಮಗ್ಯಾಕೆ ಲಸಿಕೆ ಅಂತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ಪೊಲೀಸ್ ಸಿಬ್ಬಂದಿಗೆ ಲಸಿಕೆ ಹಾಕಿಸಲು ಮುಂದಾಗಿದ್ದಾರೆ

ಕೆಲ ತಿಂಗಳ ಹಿಂದೆ ಸಾವಿನ ಭಯದಿಂದ ಜನ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಭಯ ದೂರ ಮಾಡಲು ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಔಷಧಿ ಕಂಡು ಹಿಡಿದ್ರು. ಈಗ ಔಷಧಿ ಪಡೆಯಲು ಕೊರೊನಾ ವಾರಿಯರ್​ಗಳು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಲಸಿಕೆ ಬಗ್ಗೆ ಹೇಗೆ ನಂಬಿಕೆ ಇಡ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ದಾವಣಗೆರೆ: ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದ ಕೊರೊನಾ ವಾರಿಯರ್

Published On - 7:34 am, Thu, 11 February 21

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ