AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Big Impact: ಪಾವತಿಸಬೇಕಿದ್ದ ಬಾಕಿ ಮೊತ್ತ ಕಡಿತಗೊಳಿಸಿದ ಸ್ಪರ್ಶ್ ಆಸ್ಪತ್ರೆ; ಕೊರೊನಾ ಸೋಂಕಿತೆಯ ಕುಟುಂಬದಿಂದ ಟಿವಿ9ಗೆ ಧನ್ಯವಾದ

ಕೊರೊನಾ ಹಿನ್ನೆಲೆ 30 ವರ್ಷದ ಮಹಿಳೆ ಭಾಗ್ಯಮ್ಮ ಎಂಬವರು ಮೇ 30ರಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 13 ಲಕ್ಷ ರೂಪಾಯಿ ಬಿಲ್ ಆಗಿತ್ತು. 13 ಲಕ್ಷದಲ್ಲಿ 7.5 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಪಾವತಿಸಿದ್ದರು.

TV9 Big Impact: ಪಾವತಿಸಬೇಕಿದ್ದ ಬಾಕಿ ಮೊತ್ತ ಕಡಿತಗೊಳಿಸಿದ ಸ್ಪರ್ಶ್ ಆಸ್ಪತ್ರೆ; ಕೊರೊನಾ ಸೋಂಕಿತೆಯ ಕುಟುಂಬದಿಂದ ಟಿವಿ9ಗೆ ಧನ್ಯವಾದ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 26, 2021 | 5:53 PM

Share

ಬೆಂಗಳೂರು: ಕೊರೊನಾ ಸೋಂಕಿತೆಯನ್ನು ಬಿಡುಗಡೆ ಮಾಡಲು ಬಾಕಿ ಮೊತ್ತ ನೀಡುವಂತೆ ಪಟ್ಟು ಹಿಡಿದಿದ್ದ ಖಾಸಗಿ ಆಸ್ಪತ್ರೆಯು ಟಿವಿ9 ವರದಿಯಿಂದ ಎಚ್ಚೆತ್ತುಕೊಂಡಿದೆ. ಬಾಕಿ ಉಳಿದಿರುವ 5.5 ಲಕ್ಷ ರೂಪಾಯಿ ಆಸ್ಪತ್ರೆಯ ಬಿಲ್​ನಲ್ಲಿ 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಸ್ಪರ್ಶ್ ಆಸ್ಪತ್ರೆ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಟಿವಿ9 ವರದಿಯಿಂದ ಯಶವಂತಪುರದ ಸ್ಪರ್ಶ್‌ ಆಸ್ಪತ್ರೆ ಆಡಳಿತ ಎಚ್ಚೆತ್ತುಕೊಂಡಿದ್ದು, ಇದೀಗ ಸೋಂಕಿತೆಗೆ ಸಹಕಾರ ನೀಡಿದೆ.

ಕೊರೊನಾ ಹಿನ್ನೆಲೆ 30 ವರ್ಷದ ಮಹಿಳೆ ಭಾಗ್ಯಮ್ಮ ಎಂಬವರು ಮೇ 30ರಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 13 ಲಕ್ಷ ರೂಪಾಯಿ ಬಿಲ್ ಆಗಿತ್ತು. 13 ಲಕ್ಷದಲ್ಲಿ 7.5 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಪಾವತಿಸಿದ್ದರು.

ಆ ಬಳಿಕ ಸೋಂಕಿತೆ ಗುಣಮುಖರಾದ ಹಿನ್ನೆಲೆಯಲ್ಲಿ, ಉಳಿದ ಮೊತ್ತವನ್ನೂ ಕಟ್ಟುವಂತೆ ಆಸ್ಪತ್ರೆಯಿಂದ ಒತ್ತಡ ಹೇರಲಾಗಿತ್ತು. ಬಾಕಿ ಬಿಲ್ 5.5 ಲಕ್ಷ ರೂಪಾಯಿ ಕಟ್ಟುವುದಕ್ಕೆ ಹಣವಿಲ್ಲದೆ ಕುಟುಂಬಸ್ಥರು ಪರದಾಟ ನಡೆಸಿದ್ದರು. ಕುಟುಂಬಸ್ಥರು ರೋಗಿಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಹೋಗುವುದಾಗಿ ಹೇಳಿದ್ದರು.

ಬಾಕಿ ಶುಲ್ಕ ಕಟ್ಟಿದರೆ ರೋಗಿಯನ್ನ ಡಿಸ್ಚಾರ್ಜ್ ಮಾಡುತ್ತೇವೆ. ಇಲ್ಲದಿದ್ರೆ ಡಿಸ್ಚಾರ್ಜ್ ಮಾಡಲ್ಲ ಎಂದ ಸ್ಪರ್ಶ್ ಆಸ್ಪತ್ರೆ ಸಿಬ್ಬಂದಿ ಬಳಿ ಕುಟುಂಬಸ್ಥರು, ನಮ್ಮ ಬಳಿ ಹಣ ಇಲ್ಲ, ಹೀಗಾಗಿ ಬಾಕಿ ಹಣ ಪಾವತಿಸಲು ಆಗುವುದಿಲ್ಲ. ರೋಗಿಯನ್ನು ನೀವೇ ಇಟ್ಟುಕೊಳ್ಳಿ ಎಂದಿದ್ದರು. ಆಸ್ಪತ್ರೆಯಲ್ಲೇ ರೋಗಿಯನ್ನು ಬಿಟ್ಟುಹೋಗಿದ್ದರು.

ಹೀಗೆ ಕೊರೊನಾ ಸೋಂಕಿತೆಯ ಕುಟುಂಬಸ್ಥರು ಪರದಾಟ ನಡೆಸಿದ್ದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿ ಬಳಿಕ 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಆಸ್ಪತ್ರೆಯ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಭಾಗ್ಯಮ್ಮನ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.

ಆಸ್ಪತ್ರೆ ಬಿಲ್‌ 5.5 ಲಕ್ಷ ರೂಪಾಯಿಯ ಬದಲು 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಆಸ್ಪತ್ರೆ ಇದೀಗ ಒಪ್ಪಿಗೆ ಸೂಚಿಸಿದೆ. ಈ ಕಾರಣದಿಂದ, ಟಿವಿ9 ಸಂಸ್ಥೆಗೆ ಭಾಗ್ಯಮ್ಮನ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಹೆಚ್ಚು ಹೆಚ್ಚು ಜನಕ್ಕೆ ನೀಡಿದಷ್ಟೂ ಕೊರೊನಾ ಮೂರನೆ ಅಲೆಯಿಂದ ಬಚಾವಾಗಬಹುದು ಅನ್ನುತ್ತಿದೆ ಅಧ್ಯಯನ ವರದಿ

Opinion: ಜೈವಿಕ ಯುದ್ಧದ ತಯಾರಿಗೆ ಬಂತಾ ಕೊರೊನಾ ವೈರಸ್​?

Follow Us
Web contact
Web contact

TV9 Kannada

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?