AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿನ ಬಂಡಿ ತಳ್ಳೋಕೆ ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ!

ಮಡಿಕೇರಿ: ಕೊರೊನಾ ಅನ್ನೋ ಹೆಮ್ಮಾರಿ ಬಡವರ ತುತ್ತೂಟವನ್ನೂ ಕಸಿದುಕೊಂಡಿದೆ. ಹೊಟ್ಟೆಪಾಡಿಗೆ ಬದುಕು ಕಟ್ಟಿಕೊಂಡಿದ್ದೋರ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಖುಷಿ ಖುಷಿಯಲ್ಲಿದ್ದ ಸಣ್ಣಪುಟ್ಟ ಕುಟುಂಬಗಳಲ್ಲಿ ಕಾರ್ಮೋಡ ಆವರಿಸಿದೆ. ಕೊರೊನಾ ಏಟಿಗೆ ಅದೆಷ್ಟೋ ಜನರ ವೃತ್ತಿಯೇ ಬದಲಾಗಿದೆ. ಸ್ಟೇರಿಂಗ್ ಹಿಡಿದಿದ್ದ ಕೈಗಳು ಇದೀಗ ತರಕಾರಿ ಮಾರ್ತಿವೆ. ಹೋಟೆಲ್​​ನಲ್ಲಿ ತುತ್ತು ಅನ್ನ ನೀಡಿದ್ದ ಮನಸ್ಸು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದೆ. ಬದುಕಿನ ಬಂಡಿ ತಳ್ಳೋಕೆ ಕಂಡು ಕೊಂಡಿದ್ದೇ ಈ ಹೊಸ ದಾರಿ. ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ! ಮಡಿಕೇರಿ ಜಿಲ್ಲೆ […]

ಬದುಕಿನ ಬಂಡಿ ತಳ್ಳೋಕೆ ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 03, 2020 | 6:28 AM

Share

ಮಡಿಕೇರಿ: ಕೊರೊನಾ ಅನ್ನೋ ಹೆಮ್ಮಾರಿ ಬಡವರ ತುತ್ತೂಟವನ್ನೂ ಕಸಿದುಕೊಂಡಿದೆ. ಹೊಟ್ಟೆಪಾಡಿಗೆ ಬದುಕು ಕಟ್ಟಿಕೊಂಡಿದ್ದೋರ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಖುಷಿ ಖುಷಿಯಲ್ಲಿದ್ದ ಸಣ್ಣಪುಟ್ಟ ಕುಟುಂಬಗಳಲ್ಲಿ ಕಾರ್ಮೋಡ ಆವರಿಸಿದೆ.

ಕೊರೊನಾ ಏಟಿಗೆ ಅದೆಷ್ಟೋ ಜನರ ವೃತ್ತಿಯೇ ಬದಲಾಗಿದೆ. ಸ್ಟೇರಿಂಗ್ ಹಿಡಿದಿದ್ದ ಕೈಗಳು ಇದೀಗ ತರಕಾರಿ ಮಾರ್ತಿವೆ. ಹೋಟೆಲ್​​ನಲ್ಲಿ ತುತ್ತು ಅನ್ನ ನೀಡಿದ್ದ ಮನಸ್ಸು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದೆ. ಬದುಕಿನ ಬಂಡಿ ತಳ್ಳೋಕೆ ಕಂಡು ಕೊಂಡಿದ್ದೇ ಈ ಹೊಸ ದಾರಿ.

ಜನರ ವೃತ್ತಿಯನ್ನೇ ಬದಲಿಸಿದ ಕ್ರೂರಿ ಕೊರೊನಾ! ಮಡಿಕೇರಿ ಜಿಲ್ಲೆ ಸುತ್ತಮುತ್ತಲಿನ ಹಳ್ಳಿಯ ನಿವಾಸಿಗಳು ತರಕಾರಿ ಮಾರಾಟದಲ್ಲಿ ಬ್ಯಸಿಯಾಗಿದ್ದಾರೆ. ಆದರೆ ತರಕಾರಿ ಮಾರುತ್ತಿರುವವಱರು ತಮ್ಮ ವೃತ್ತಿಯಲ್ಲಿ ತರಕಾರಿ ವ್ಯಾಪಾರಸ್ತರಲ್ಲ. ಪ್ರವಾಸಿ ಟ್ಯಾಕ್ಸಿಗಳನ್ನ ಓಡಿಸ್ಕೊಂಡು ಖಾಸಗಿ ಬಸ್ ಡ್ರೈವರ್ಸ್, ಬಸ್​ ಏಜೆಂಟರ್​​​​​ಗಳು, ನಿರ್ವಾಹಕರು, ಸಣ್ಣ ಸಣ್ಣ ಹೋಟೆಲ್, ಸೌಂಡ್​ ಸಿಸ್ಟಮ್​ ವೃತ್ತಿ ನಡೆಸ್ಕೊಂಡು ಇದ್ದೋರು.

ಆದ್ರೆ, ಕೊರೊನಾ ಲಾಕ್​​ಡೌನ್​ ಇವರ ಬದುಕಿಗೆ ಕೊಳ್ಳೀ ಇಟ್ಟಿದೆ. ಕೆಲಸ ಕಾರ್ಯವಿಲ್ದೇ ಇವರು ಕಂಗೆಟ್ಟಿದ್ರು. ಹೀಗಾಗಿ ಕುಟುಂಬವನ್ನ ಸಾಕೋಕೆ, ಮನೆ ಬಾಡಿಗೆ ಕಟ್ಟೋಕೆ, ಒಪ್ಪೊತ್ತಿನ ಊಟಕ್ಕೆ ತಕರಾರಿ ವ್ಯಾಪಾರ ಮಾಡೋ ಪರಿಸ್ಥಿತಿ ಎದುರಾಗಿದೆ.

ಇಲ್ಲಿ ತರಕಾರಿ ವ್ಯಾಪಾರ ಮಾಡ್ತಿರೋರದ್ದು ಒಂದೊಂದೆ ನೋವಿನ ಕಥೆ. ಖಾಸಗಿ ಬಸ್ ಏಜೆಂಟ್​ ಆಗಿದ್ದ ಸತೀಶ್ ಎಂಬುವವರು ಇದೀಗ ಮರಗೆಣಸು ಮಾರಾಟದಲ್ಲಿ ತೊಡಗಿದ್ದಾರೆ. ಯುವಕ ವಿನೋದ್ ಅಂದು ಸಣ್ಣ ಕ್ಯಾಂಟೀನ್ ನಡೆಸ್ತಿದ್ರಂತೆ. ಆದ್ರೀಗ ಕೊರೊನಾ ಲಾಕ್​​​ಡೌನ್​​ನಿಂದಾಗಿ ತರಕಾರಿ ಮಾರ್ತಿದ್ದಾರೆ. ಕಟ್ಟಿಕೊಂಡ ಕನಸು, ಬದುಕಿನ ಲೆಕ್ಕಾಚಾರವೆಲ್ಲಾ ಬುಡುಮೇಲಾಗಿದೆ. ಈ ಬಗ್ಗೆ ಇವರನ್ನ ಕೇಳಿದ್ರೆ, ಏನ್ ಮಾಡೋದು ಸಾರ್​, ಹೊಟ್ಟೆಪಾಡು. ಹೀಗಾಗಿ ತರಕಾರಿ ವ್ಯಾಪಾರ ಮಾಡ್ತಿದ್ದೇವೆ. ಜೀವನ ನಡೀಬೇಕಲ್ಲ ಅಂತ ತಮ್ಮ ಸಂಕಷ್ಟದ ಪರಿಸ್ಥಿತಿ ತೋಡಿಕೊಂಡಿದ್ದಾರೆ.

ಒಟ್ನಲ್ಲಿ, ಕೊರೊನಾ ಅನ್ನೋ ವೈರಿ ಜನರ ಬದುಕಿನ ಶೈಲಿಯನ್ನೇ ಬದಲಾಯಿಸಿದೆ. ಪ್ರಕೃತಿಯಲ್ಲಿ ಹಲವು ಬದಲಾವಣೆ ತಂದು ಕೆಲವರಿಗೆ ಬದುಕಿನ ಪಾಠ ಕಲಿಸಿದೆ. ಲಾಕ್​​ಡೌನ್​ನಿಂದಾಗಿ ಅದೆಷ್ಟೋ ಬಡ ಜೀವಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಕಷ್ಟ ಪಡ್ತಿದ್ದಾರೆ. ಜನರ ವೃತಿ ಜೀವನಕ್ಕೆ ದೊಡ್ಡ ಕುತ್ತು ತಂದಿರೋ ಕೊರೊನಾ ಮತ್ತೊಂದು ಕೆಲಸದತ್ತ ದೂಡ್ತಿರೋದು ನಿಜಕ್ಕೂ ದುರಂತ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ