ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!
ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ. ಈಗ ತೆರೆದ ಮ್ಯಾನ್ ಹೋಲ್ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ […]

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ.
ಈಗ ತೆರೆದ ಮ್ಯಾನ್ ಹೋಲ್ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ ಫೋಟೋ ವಿಡಿಯೋ ಮಾಡುವುದರಲ್ಲಿ ಬ್ಯೂಸಿಯಾಗಿದ್ರು.
ಮೂಕ ಪ್ರಾಣಿಯ ರೋದನೆ ಕಂಡರೂ ಹಸುವನ್ನು ಹೊರತೆಗೆಯದೆ ಮಾನವೀಯತೆ ಮರೆತಿದ್ದಾರೆ. ಮೂರು ಗಂಟೆಗಳ ಕಾಲ ಮ್ಯಾನ್ ಹೋಲ್ನಲ್ಲಿ ಬಿದ್ದು ಹಸು ಒದ್ದಾಡಿದೆ. ಮೂರು ಗಂಟೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?
ಈ ಮಾದರಿ ನೆರವಾಗೋ ಜನರಿರುತ್ತಾರೆ ಓದಿ… :ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ
Published On - 2:20 pm, Fri, 21 August 20