ಭೀಮೆ ರೌದ್ರತೆಗೆ ಕೊಚ್ಚಿ ಹೋದವು ಬಂಗಾರದ ಬೆಳೆಗಳು, ಜಮೀನಲ್ಲಿ ನಿಂತಿದೆ 10 ಅಡಿ ನೀರು

ಯಾದಗಿರಿ: ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭೀಮಾ ನದಿ ದಡದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೈತರು ಬೆವರು ಸುರಿಸಿ ಬೆಳೆಸಿದ್ದ ಬೆಳೆಗಳು ಮುಳುಗಿವೆ. ಜಮೀನುಗಳಿಗೆ ಭೀಮಾ ನದಿ ನೀರು ನುಗ್ಗಿದೆ. ನದಿಯಿಂದ 2 ಕಿ.ಮೀ ದೂರದ ವರೆಗೂ ನೀರು ಆವರಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ 2 ಎಕ್ಕರೆ ಜಮೀನು ಜಲಾವೃತಗೊಂಡಿದ್ದು ಹತ್ತಿ ಹಾಗೂ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಜಮೀನಿನಲ್ಲಿ 10 ಅಡಿ ಎತ್ತರದಷ್ಟು […]

ಭೀಮೆ ರೌದ್ರತೆಗೆ ಕೊಚ್ಚಿ ಹೋದವು ಬಂಗಾರದ ಬೆಳೆಗಳು, ಜಮೀನಲ್ಲಿ ನಿಂತಿದೆ 10 ಅಡಿ ನೀರು
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 20, 2020 | 10:05 AM

ಯಾದಗಿರಿ: ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭೀಮಾ ನದಿ ದಡದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೈತರು ಬೆವರು ಸುರಿಸಿ ಬೆಳೆಸಿದ್ದ ಬೆಳೆಗಳು ಮುಳುಗಿವೆ. ಜಮೀನುಗಳಿಗೆ ಭೀಮಾ ನದಿ ನೀರು ನುಗ್ಗಿದೆ. ನದಿಯಿಂದ 2 ಕಿ.ಮೀ ದೂರದ ವರೆಗೂ ನೀರು ಆವರಿಸಿಕೊಂಡಿದೆ.

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ 2 ಎಕ್ಕರೆ ಜಮೀನು ಜಲಾವೃತಗೊಂಡಿದ್ದು ಹತ್ತಿ ಹಾಗೂ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಜಮೀನಿನಲ್ಲಿ 10 ಅಡಿ ಎತ್ತರದಷ್ಟು ನೀರು ಆವರಿಸಿಕೊಂಡಿದೆ. ನಾಯ್ಕಲ್ ಗ್ರಾಮದ ಜಮೀನುಗಳು ಕೆರೆಯಂತಾಗಿವೆ. ನಾಲ್ಕು ತಿಂಗಳಿಂದ ಬಂಗಾರದಂತೆ ಬೆಳೆದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us