ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಒಬ್ಬ ವೈದ್ಯನಿಗೆ ಕೊರೊನಾ ಅಟ್ಯಾಕ್!

ಕಲಬುರಗಿ: ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕೊರೊನಾ ಬಾಂಬ್ ಸ್ಫೋಟಗೊಳ್ತಿದೆ. ಊಹೆಗೂ ನಿಲುಕದಂತೆ ಈ ಕ್ರಿಮಿ ಸಿಕ್ಕ ಸಿಕ್ಕವರ ದೇಹ ಹೊಕ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ವೈದ್ಯರನ್ನು ಬಿಟ್ಟೂ ಬಿಡದೆ ಈ ಹೆಮ್ಮಾರಿ ಕಾಡ್ತಿದೆ. ಚಿಕಿತ್ಸೆಗೆ ಬಂದವರಿಂದಲೇ ವೈದ್ಯರಿಗೂ ಕೊರೊನಾ ವೈರಸ್ ಅಟ್ಯಾಕ್ ಆಗಿದೆ. ಇದಕ್ಕೆ ಕಾರಣ ವೈದ್ಯರಿಗೆ ಸೋಂಕಿತರು ಸೂಕ್ತ ಮಾಹಿತಿ ನೀಡದೇ ಇರುವುದು. ಇಂದು ಜಿಲ್ಲೆಯಲ್ಲಿ ಮತ್ತೊಬ್ಬ ವೈದ್ಯನಿಗೆ ಸೋಂಕು ತಗುಲಿದ್ದು, ಮೆಡಿಕಲ್ ರೆಪ್ ಮೂಲಕ 45 ವರ್ಷದ ವೈದ್ಯ(ಪಿ-926) ಸೋಂಕು ದೃಢಪಟ್ಟಿದೆ. ನಂತರ ಮೇ‌ […]

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಒಬ್ಬ ವೈದ್ಯನಿಗೆ ಕೊರೊನಾ ಅಟ್ಯಾಕ್!
ಸಾಧು ಶ್ರೀನಾಥ್​

Updated on: May 13, 2020 | 2:42 PM

ಕಲಬುರಗಿ: ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕೊರೊನಾ ಬಾಂಬ್ ಸ್ಫೋಟಗೊಳ್ತಿದೆ. ಊಹೆಗೂ ನಿಲುಕದಂತೆ ಈ ಕ್ರಿಮಿ ಸಿಕ್ಕ ಸಿಕ್ಕವರ ದೇಹ ಹೊಕ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ವೈದ್ಯರನ್ನು ಬಿಟ್ಟೂ ಬಿಡದೆ ಈ ಹೆಮ್ಮಾರಿ ಕಾಡ್ತಿದೆ. ಚಿಕಿತ್ಸೆಗೆ ಬಂದವರಿಂದಲೇ ವೈದ್ಯರಿಗೂ ಕೊರೊನಾ ವೈರಸ್ ಅಟ್ಯಾಕ್ ಆಗಿದೆ. ಇದಕ್ಕೆ ಕಾರಣ ವೈದ್ಯರಿಗೆ ಸೋಂಕಿತರು ಸೂಕ್ತ ಮಾಹಿತಿ ನೀಡದೇ ಇರುವುದು.

ಇಂದು ಜಿಲ್ಲೆಯಲ್ಲಿ ಮತ್ತೊಬ್ಬ ವೈದ್ಯನಿಗೆ ಸೋಂಕು ತಗುಲಿದ್ದು, ಮೆಡಿಕಲ್ ರೆಪ್ ಮೂಲಕ 45 ವರ್ಷದ ವೈದ್ಯ(ಪಿ-926) ಸೋಂಕು ದೃಢಪಟ್ಟಿದೆ. ನಂತರ ಮೇ‌ 10ರಂದು ಮೆಡಿಕಲ್ ರೆಪ್ (ಪಿ-848)ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈತ ವೈದ್ಯನ ಬಳಿ ಚಿಕಿತ್ಸೆಗೆ ಬಂದಿದ್ದ. ಈ ಹಿಂದೆಯು ಕೂಡ ಜಿಲ್ಲೆಯ ಇಬ್ಬರು ವೈದ್ಯರಿಗೆ ಸೋಂಕು ತಗುಲಿತ್ತು.

78 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯ (ಪಿ-07) ಹಾಗೂ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವಿಗೆ ಚಿಕಿತ್ಸೆ ನೀಡಿದ್ದ ಟ್ರೈನಿ ವೈದ್ಯೆ (ಪಿ-302)ಗೆ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ ಈ ಇಬ್ಬರೂ ವೈದ್ಯರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Published On - 2:18 pm, Wed, 13 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us