
ಹಾವೇರಿ: ಗಾಂಜಾ ಬೆಳೆ ಬೆಳೆಯುವುದು ಕಾನೂನು ಪ್ರಕಾರ ಅಪರಾಧ. ಆದರೆ ಅದ್ಹೇಗೋ ಏನೋ ತನ್ನ ಜಮೀನಿನ ಬದುವಿನಲ್ಲಿ ಒಂದು ಗಾಂಜಾ ಗಿಡ ಬೆಳೆದು ರೈತನೋರ್ವ ಪೊಲೀಸರ ಕೈಗೆ ತಗ್ಲಾಕ್ಕೊಂಡ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಹಾನಗಲ್ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ತಹಶೀಲ್ದಾರ ಎರ್ರಿಸ್ವಾಮಿ ಪಿ.ಎಸ್ ನೇತೃತ್ವದಲ್ಲಿ ದಾಳಿ ಮಾಡಿದರು. ದಾಳಿ ಸಮಯದಲ್ಲಿ ರೈತ ಬಸವರಾಜನ ಜಮೀನಿನ ಬದುವಿನಲ್ಲಿ ಗಾಂಜಾ ಗಿಡ ಬೆಳೆಸಿದ್ದು ದೊರೆತಿದೆ. 422 ಗ್ರಾಂ ತೂಕದ ಗಾಂಜಾ ಗಿಡವನ್ನು ಪೊಲೀಸರು ಜಪ್ತಿ ಮಾಡಿ, ಆರೋಪಿ ಬಸವರಾಜನನ್ನು ಬಂಧಿಸಿದ್ದಾರೆ.
ರೈತ ಬಸವರಾಜ ಗಾಂಜಾ ಗಿಡವನ್ನು ಯಾವ ಉದ್ದೇಶಕ್ಕೆ ಬೆಳೆಸಿದ ಮತ್ತು ಎಲ್ಲಿಗೆ ಮಾರಾಟ ಮಾಡಲು ಉದ್ದೇಶಿಸಿದ್ದ ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
-ಪ್ರಭುಗೌಡ ಎನ್. ಪಾಟೀಲ