AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕನ ಹಿಂದೆ ಹೋದ ಯುವತಿ? ಮಗಳಿಗಾಗಿ ಪೊಲೀಸ್ ಠಾಣೆ ಎದುರು ತಂದೆ ರಂಪಾಟ..

ಮನೆ ಬಿಟ್ಟು ಹೋಗಿರುವ ಮಗಳಿಗಾಗಿ ತಂದೆ ಕಣ್ಣಿರು ಹಾಕುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದು ಧಾರವಾಡ ಮಹಿಳಾ ಪೋಲಿಸ್ ಠಾಣೆಯ ಎದುರು ಕುಳಿತು ಗೋಳಾಡುತ್ತಿದ್ದಾರೆ.

ಯುವಕನ ಹಿಂದೆ ಹೋದ ಯುವತಿ? ಮಗಳಿಗಾಗಿ ಪೊಲೀಸ್ ಠಾಣೆ ಎದುರು ತಂದೆ ರಂಪಾಟ..
ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಬಸಪ್ಪ ಜಂಗಳಿ
ಆಯೇಷಾ ಬಾನು
| Edited By: |

Updated on: Dec 10, 2020 | 12:55 PM

Share

ಧಾರವಾಡ: ಮನೆ ಬಿಟ್ಟು ಹೋಗಿರುವ ಮಗಳಿಗಾಗಿ ತಂದೆ ಕಣ್ಣಿರು ಹಾಕುತ್ತಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದು ಧಾರವಾಡ ಮಹಿಳಾ ಪೋಲಿಸ್ ಠಾಣೆಯ ಎದುರು ಕುಳಿತು ಗೋಳಾಡುತ್ತಿದ್ದಾರೆ. ಬಸಮ್ಮ ಜಂಗಳಿ (20) ಮನೆ ಬಿಟ್ಟು ಹೋಗಿರುವ ಮಗಳು. ಬಸಪ್ಪ ಜಂಗಳಿ -ತಂದೆ.

20 ವರ್ಷದ ಬಸಮ್ಮ ಜಂಗಳಿ ಎಂಬ ಯುವತಿ ಜುಲೈ 23ರಂದು ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ತಂದೆ ಬಸಪ್ಪ ಜಂಗಳಿ ದೂರು ನೀಡಿದ್ದರು. ಆದರೆ ಪೊಲೀಸರು ತನ್ನ ಮಗಳನ್ನು ಹುಡುಕುವಲ್ಲಿ ಯಾವುದೇ ರೀತಿ ಸಹಕಾರ ನೀಡುತ್ತಿಲ್ಲ.

ಯುವಕನ ಹಿಂದೆ ಹೋದ ಯುವತಿ? ಈವರೆಗೂ ಮಗಳು ಪತ್ತೆಯಾಗಿಲ್ಲ ಎಂದು ಬಸಪ್ಪ ಆರೋಪಿಸಿದ್ದಾರೆ. ಹಾಗೂ ನೊಂದ ತಂದೆ ನಿನ್ನೆ ಮಧ್ಯಾಹ್ನದಿಂದ ಠಾಣೆಯ ಮುಂದೆ ಕುಳಿತು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಬೇಸತ್ತು ಠಾಣೆ ಬಳಿ ಇರುವ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಅಲ್ಲ ಇದ್ದ ಕೆಲವರು ಅವರ ಸಹಾಯಕ್ಕೆ ದೌಡಾಯಿಸಿ ಅವರನ್ನ ತಡೆದಿದ್ದಾರೆ.

ಮಗಳನ್ನು ಮಡ್ಡಿಗಿರಿಯಾಲದ ಗಂಗಪ್ಪ ಚುರಮರಿ ಅನ್ನೋ ಯುವಕ ಅಪಹರಣ ಮಾಡಿದ್ದಾನೆ ಎಂದು ಬಸಪ್ಪ ಆರೋಪಿಸಿದ್ದಾರೆ. ಆದಷ್ಟು ಬೇಗ ನನ್ನ ಮಗಳನ್ನು ಹುಡುಕಿಕೊಡಿ ಎಂದು ಅಂಗಲಾಚಿದ್ದಾರೆ.

ಮೂವರ ಬದುಕನ್ನೇ ನುಂಗಿದ ಆರ್ಥಿಕ ಸಮಸ್ಯೆ.. ಮದುವೆ ಮಾಡಲಾಗದೆ ತಾಯಿ, ಮಕ್ಕಳು ಆತ್ಮಹತ್ಯೆ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್