ನೀರಿನ ಒಲೆ ಹಚ್ಚುವ ವೇಳೆ ಬೆಂಕಿ: ಪೇದೆ, ಪತ್ನಿ, ಪುತ್ರನಿಗೆ ಗಾಯ

ಮೈಸೂರು: ತುಸು ಹೆಚ್ಚು ಜಾಗರೂಕತೆಯಿಂದ ಇರಬೇಕಾದ ಪೊಲೀಸ​ರ ಮನೆಯಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಮನೆಯಲ್ಲಿ ಈ ಆಕಸ್ಮಿಕ ನಡೆದಿದೆ. ಘಟನೆಯಲ್ಲಿ ಕುಟುಂಬದ ಮೂವರಿಗೆ ಸುಟ್ಟಗಾಯಗಳಾಗಿವೆ. ಕೆ.ಆರ್. ನಗರದ ಈಶ್ವರನಗರ ಬಡಾವಣೆಯಲ್ಲಿ ಇಂದು ಬೆಳಗ್ಗೆ ನೀರಿನ ಒಲೆ ಹಚ್ಚುವ ವೇಳೆ ಹೀಗಾಗಿದೆ. ಪೇದೆ ರೇಣುಕಾ ಸ್ವಾಮಿ (೪೬), ಪತ್ನಿ ಪುಷ್ಪಲತಾ (೩೫) ಮತ್ತು ಪುತ್ರ ತೇಜಸ್ (೧೪) ಗೆ ಗಾಯಗಳಾಗಿವೆ. ಮೊದಲು ರೇಣುಕಾ ಸ್ವಾಮಿಗೆ ಬೆಂಕಿ […]

ನೀರಿನ ಒಲೆ ಹಚ್ಚುವ ವೇಳೆ ಬೆಂಕಿ: ಪೇದೆ, ಪತ್ನಿ, ಪುತ್ರನಿಗೆ ಗಾಯ
ಸಾಧು ಶ್ರೀನಾಥ್​

Updated on: Feb 13, 2020 | 12:01 PM

ಮೈಸೂರು: ತುಸು ಹೆಚ್ಚು ಜಾಗರೂಕತೆಯಿಂದ ಇರಬೇಕಾದ ಪೊಲೀಸ​ರ ಮನೆಯಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಮನೆಯಲ್ಲಿ ಈ ಆಕಸ್ಮಿಕ ನಡೆದಿದೆ.

ಘಟನೆಯಲ್ಲಿ ಕುಟುಂಬದ ಮೂವರಿಗೆ ಸುಟ್ಟಗಾಯಗಳಾಗಿವೆ. ಕೆ.ಆರ್. ನಗರದ ಈಶ್ವರನಗರ ಬಡಾವಣೆಯಲ್ಲಿ ಇಂದು ಬೆಳಗ್ಗೆ ನೀರಿನ ಒಲೆ ಹಚ್ಚುವ ವೇಳೆ ಹೀಗಾಗಿದೆ.

ಪೇದೆ ರೇಣುಕಾ ಸ್ವಾಮಿ (೪೬), ಪತ್ನಿ ಪುಷ್ಪಲತಾ (೩೫) ಮತ್ತು ಪುತ್ರ ತೇಜಸ್ (೧೪) ಗೆ ಗಾಯಗಳಾಗಿವೆ. ಮೊದಲು ರೇಣುಕಾ ಸ್ವಾಮಿಗೆ ಬೆಂಕಿ ತಗುಲಿದೆ. ಅದನ್ನ ಆರಿಸಲು ಹೋದ ಪತ್ನಿ ಮತ್ತು ಮಗನಿಗೂ ಗಾಯಗಳಾಗಿವೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ‌ ವಿಭಾಗದಲ್ಲಿ ಗಾಯಾಳುಗಳಿಗೆ ಮೊದಲು ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 11:57 am, Thu, 13 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us