ರೈತ ಪ್ರತಿಭಟನೆಯ ‘ಕಿಚ್ಚು’: ಧರಣಿ ವೇಳೆ ಸ್ವಲ್ಪದರಲ್ಲೇ ತಪ್ಪಿದ ಅಗ್ನಿ ಅನಾಹುತ
ಬೆಂಗಳೂರು: ನಿನ್ನೆ ನಡೆದ ರೈತರ ಪ್ರತಿಭಟನೆಯ ವೇಳೆ ಅಗ್ನಿ ಅವಘಡವೊಂದು ಸಂಭವಿಸಿದೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ ಮೌರ್ಯ ಸರ್ಕಲ್ ಬಳಿ ನೆರೆದಿದ್ದ ರೈತರು ಪ್ರತಿಭಟನೆಗೆ ಮುಂದಾದರು. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ರೈತರು ಸರ್ಕಾರದ ಪ್ರತಿಕೃತಿಯ ಶವಯಾತ್ರೆಗೆ ಮುಂದಾದ್ರು. ಕೊನೆಗೆ, ಪ್ರತಿಕೃತಿಗೆ ಚಟ್ಟ ಮಾಡಿ ಬೆಂಕಿ ಹಚ್ಚಲು ಮುಂದಾದರು. ಈ ನಡುವೆ ಮಫ್ತಿಯಲ್ಲಿದ್ದ ಕೆಲವು ಪೊಲೀಸರು ಪ್ರತಿಕೃತಿಯನ್ನು ಕಸಿಯಲು ಮುಂದಾದರು. ಆಗ, ಸ್ಥಳದಲ್ಲೇ […]

ಬೆಂಗಳೂರು: ನಿನ್ನೆ ನಡೆದ ರೈತರ ಪ್ರತಿಭಟನೆಯ ವೇಳೆ ಅಗ್ನಿ ಅವಘಡವೊಂದು ಸಂಭವಿಸಿದೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿನ್ನೆ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ ಮೌರ್ಯ ಸರ್ಕಲ್ ಬಳಿ ನೆರೆದಿದ್ದ ರೈತರು ಪ್ರತಿಭಟನೆಗೆ ಮುಂದಾದರು. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು.
ಈ ವೇಳೆ ರೈತರು ಸರ್ಕಾರದ ಪ್ರತಿಕೃತಿಯ ಶವಯಾತ್ರೆಗೆ ಮುಂದಾದ್ರು. ಕೊನೆಗೆ, ಪ್ರತಿಕೃತಿಗೆ ಚಟ್ಟ ಮಾಡಿ ಬೆಂಕಿ ಹಚ್ಚಲು ಮುಂದಾದರು. ಈ ನಡುವೆ ಮಫ್ತಿಯಲ್ಲಿದ್ದ ಕೆಲವು ಪೊಲೀಸರು ಪ್ರತಿಕೃತಿಯನ್ನು ಕಸಿಯಲು ಮುಂದಾದರು. ಆಗ, ಸ್ಥಳದಲ್ಲೇ ಇದ್ದ ರೈತನೊಬ್ಬ ಗಡಿಬಿಡಿಯಲ್ಲಿ ಚಟ್ಟಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ.
ಚಟ್ಟಕ್ಕೆ ಬೆಂಕಿ ಹಚ್ಚುತ್ತಿದ್ದಂತೆ ಅದು ಇದಕ್ಕಿದಂತೆ ಧಗಧಗನೆ ಹೊತ್ತಿ ಉರಿದು ಅಲ್ಲೇ ಇದ್ದ ರೈತ ಹಾಗೂ ಇನ್ಸ್ಪೆಕ್ಟರ್ ಒಬ್ಬರ ಕೈಗೆ ಬೆಂಕಿ ತಗುಲಿತು. ಅದೃಷ್ಟವಶಾತ್, ಸ್ಥಳದಲ್ಲಿದವರು ಬಹುಬೇಗ ಅಲ್ಲಿಂದ ದೂರ ಸರಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಕೂಡಲೇ ಸ್ಥಳದಲ್ಲಿದ್ದ ಇತರೆ ರೈತರು ಹಾಗೂ ಪೊಲೀಸರು ಅಲ್ಲಿಗೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಅಗ್ನಿ ಅವಘಡದಲ್ಲಿ ರೈತ ಮತ್ತು ಇನ್ಸ್ಪೆಕ್ಟರ್ಗೆ ಸಣ್ಣಪುಟ್ಟ ಗಾಯಗಳಾದವು.




