ಅಡಕೆ ವ್ಯಾಪಾರಿ ಅಡ್ಡಗಟ್ಟಿ ನಗದು, ಚಿನ್ನದ ಸರ ದರೋಡೆ.. ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳಿಂದ ಕೃತ್ಯ

ಅಡಕೆ ವ್ಯಾಪಾರಿ ಮಣಿಕಂಠನ್ ತುಮಕೂರಿನಲ್ಲಿ ಅಡಕೆ ಮಾರಾಟ ಮಾಡಿ ಬರುತ್ತಿದ್ದಾಗ ಈ ಕೃತ್ಯ ನಡೆದಿದೆ. ಈ ಹಿಂದೆಯೇ ಮಣಿಕಂಠನ್ ನನ್ನು ಫಾಲೋ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳು ಕಾರು, ಬೈಕ್​ನಲ್ಲಿ ಬಂದು ಹಳೆ ನಿಜಗಲ್ ಗ್ರಾಮದ ಬಳಿ ಮಣಿಕಂಠನ್ ಕಾರು ಅಡ್ಡಗಟ್ಟಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಅಡಕೆ ವ್ಯಾಪಾರಿ ಅಡ್ಡಗಟ್ಟಿ ನಗದು, ಚಿನ್ನದ ಸರ ದರೋಡೆ.. ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳಿಂದ ಕೃತ್ಯ
ದಾಬಸ್​ಪೇಟೆ ಪೊಲೀಸ್ ಠಾಣೆ
ಆಯೇಷಾ ಬಾನು

Updated on: Jan 30, 2021 | 7:01 AM

ನೆಲಮಂಗಲ: ಅಡಕೆ ವ್ಯಾಪಾರಿ ಅಡ್ಡಗಟ್ಟಿ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ಹಳೆ ನಿಜಗಲ್ ಗ್ರಾಮದ ಬಳಿ ನಡೆದಿದೆ.

ತಮಿಳುನಾಡು ಮೂಲದ ಮಣಿಕಂಠನ್(51) ದರೋಡೆಗೆ ಒಳಗಾದವರು. ಅಡಕೆ ವ್ಯಾಪಾರಿ ಮಣಿಕಂಠನ್ ತುಮಕೂರಿನಲ್ಲಿ ಅಡಕೆ ಮಾರಾಟ ಮಾಡಿ ಬರುತ್ತಿದ್ದಾಗ ಈ ಕೃತ್ಯ ನಡೆದಿದೆ. ಈ ಹಿಂದೆಯೇ ಮಣಿಕಂಠನ್ ನನ್ನು ಫಾಲೋ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳು ಕಾರು, ಬೈಕ್​ನಲ್ಲಿ ಬಂದು ಹಳೆ ನಿಜಗಲ್ ಗ್ರಾಮದ ಬಳಿ ಮಣಿಕಂಠನ್ ಕಾರು ಅಡ್ಡಗಟ್ಟಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಣ ಕಳೆದುಕೊಂಡು ಮಣಿಕಂಠನ್ ಕಂಗಾಲಾಗಿದ್ದಾರೆ.

OLXನಲ್ಲಿ ವಸ್ತು ಖರೀದಿಸುವ ನೆಪದಲ್ಲಿ ದರೋಡೆ ಮಾಡ್ತಿದ್ದ ಮೂವರ ಸೆರೆ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us