ಕೊರೊನಾದಿಂದ ಜಾತಿ ಮತಗಳ ಸಮಾಧಿ: ಮುಸ್ಲಿಮರೆ ಆ ವೃದ್ಧನ ಅಂತ್ಯಕ್ರಿಯೆ ಮಾಡಿದರು

ತುಮಕೂರು: ಮೃತ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿರುವ ಘಟನೆ ತುಮಕೂರಿನ ಕೆ.ಹೆಚ್.ಬಿ ಕಾಲೋನಿಯಲ್ಲಿ ನಡೆದಿದೆ. ಕೊರೊನಾ ವೈರೆಸ್ ಬೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ ಕೆ.ಹೆಚ್.ಬಿ ಕಾಲೋನಿ ನಿವಾಸಿ ಹೆಚ್.ಎಸ್ ನಾರಾಯಣರಾವ್ (60) ಸಹಜ ಸಾವನಪ್ಪಿದ್ದರು. ಮೃತರ ಕುಟುಂಬಸ್ಥರು ಲಾಕ್​ಡೌನ್ ಇರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದ ಕಾರಣ ತಾವೇ ಅಂತ್ಯ ಸಂಸ್ಕಾರ ನೆರವೇರಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಕೊರೊನಾ ವಾರಿಯರ್ಸ್​ಗಳಾದ ಮಹಮ್ಮದ್ ಖಲಿದ್, ಇಮ್ರಾನ್, ಶೇರು, ಶಾರುಖ್, ತೋಫಿಕ್ ಖತೀಬ್ […]

ಕೊರೊನಾದಿಂದ ಜಾತಿ ಮತಗಳ ಸಮಾಧಿ: ಮುಸ್ಲಿಮರೆ ಆ ವೃದ್ಧನ ಅಂತ್ಯಕ್ರಿಯೆ ಮಾಡಿದರು
ಸಾಧು ಶ್ರೀನಾಥ್​

Updated on: May 13, 2020 | 1:39 PM

ತುಮಕೂರು: ಮೃತ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿರುವ ಘಟನೆ ತುಮಕೂರಿನ ಕೆ.ಹೆಚ್.ಬಿ ಕಾಲೋನಿಯಲ್ಲಿ ನಡೆದಿದೆ. ಕೊರೊನಾ ವೈರೆಸ್ ಬೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ ಕೆ.ಹೆಚ್.ಬಿ ಕಾಲೋನಿ ನಿವಾಸಿ ಹೆಚ್.ಎಸ್ ನಾರಾಯಣರಾವ್ (60) ಸಹಜ ಸಾವನಪ್ಪಿದ್ದರು.

ಮೃತರ ಕುಟುಂಬಸ್ಥರು ಲಾಕ್​ಡೌನ್ ಇರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದ ಕಾರಣ ತಾವೇ ಅಂತ್ಯ ಸಂಸ್ಕಾರ ನೆರವೇರಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಕೊರೊನಾ ವಾರಿಯರ್ಸ್​ಗಳಾದ ಮಹಮ್ಮದ್ ಖಲಿದ್, ಇಮ್ರಾನ್, ಶೇರು, ಶಾರುಖ್, ತೋಫಿಕ್ ಖತೀಬ್ ಹಾಗೂ ಮನ್ಸೂರು ಸೇರಿ ಗಾರ್ಡನ್ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಈ ವೇಳೆ ಮೃತ ವೃದ್ಧನ ಪತ್ನಿ ಮಾತ್ರ ಭಾಗಿಯಾಗಿದ್ದರು.

Published On - 12:30 pm, Wed, 13 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us