ರೇವಣ್ಣಗೆ ಕೊರೊನಾ ಇಲ್ವಂತೆ.. ನಿಂಬೆ ಹಣ್ಣಿನ ಜಾದು ವರ್ಕೌಟ್‌ ಆಯ್ತಾ?

ಹಾಸನ: ಹಾಸನ ಜಿಲ್ಲೆಯ ಅಧಿಪತಿ ರೇವಣ್ಣ ಅವರ ನಿಂಬೆ ಹಣ್ಣಿನ ಮಂತ್ರ ತಂತ್ರಗಳು ಕೊರೊನಾ ವಿರುದ್ಧ ವರ್ಕ್‌ಔಟ್‌ ಆಗಿವೆಯಾ? ಹೀಗಂತ ಅವರ ಅಭಿಮಾನಿಗಳು ಅಂದುಕೊಂಡಿದ್ರೆ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ರೇವಣ್ಣ ಅವರಿಗೆ ಕೊರೊನಾ ಸೋಂಕು ಇದುವರೆಗೂ ಹತ್ತಿರಾನೂ ಸುಳಿದಿಲ್ಲವಂತೆ. ಹಾಗಂತ ರೇವಣ್ಣ ಅವರೇ ಹೇಳಿದ್ದಾರೆ. ತಾವೂ ಕೂಡಾ ಕೊರೊನಾ ಟೆಸ್ಟ್‌ ಮಾಡಿಸಿಕೊಂಡಿದ್ದು, ವರದಿ ನೆಗಟಿವ್‌ ಬಂದಿದೆ ಎಂದು ರೇವಣ್ಣ ತಿಳಿಸಿದ್ದಾರೆ. ಜೊತೆಗೆ ತಮ್ಮ ಕಚೇರಿಯ ಸಿಬ್ಬಂದಿಯ ವರದಿಯೂ ನೆಗಟಿವ್‌ ಆಗಿದೆ. ಆದ್ರೂ ಸ್ವಲ್ಪ ರೆಸ್ಟ್‌ ಪಡೀಲಿ ಅಂತಾ […]

ರೇವಣ್ಣಗೆ ಕೊರೊನಾ ಇಲ್ವಂತೆ.. ನಿಂಬೆ ಹಣ್ಣಿನ ಜಾದು ವರ್ಕೌಟ್‌ ಆಯ್ತಾ?
Guru

Updated on: Jul 01, 2020 | 5:04 PM

ಹಾಸನ: ಹಾಸನ ಜಿಲ್ಲೆಯ ಅಧಿಪತಿ ರೇವಣ್ಣ ಅವರ ನಿಂಬೆ ಹಣ್ಣಿನ ಮಂತ್ರ ತಂತ್ರಗಳು ಕೊರೊನಾ ವಿರುದ್ಧ ವರ್ಕ್‌ಔಟ್‌ ಆಗಿವೆಯಾ? ಹೀಗಂತ ಅವರ ಅಭಿಮಾನಿಗಳು ಅಂದುಕೊಂಡಿದ್ರೆ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ರೇವಣ್ಣ ಅವರಿಗೆ ಕೊರೊನಾ ಸೋಂಕು ಇದುವರೆಗೂ ಹತ್ತಿರಾನೂ ಸುಳಿದಿಲ್ಲವಂತೆ.

ಹಾಗಂತ ರೇವಣ್ಣ ಅವರೇ ಹೇಳಿದ್ದಾರೆ. ತಾವೂ ಕೂಡಾ ಕೊರೊನಾ ಟೆಸ್ಟ್‌ ಮಾಡಿಸಿಕೊಂಡಿದ್ದು, ವರದಿ ನೆಗಟಿವ್‌ ಬಂದಿದೆ ಎಂದು ರೇವಣ್ಣ ತಿಳಿಸಿದ್ದಾರೆ. ಜೊತೆಗೆ ತಮ್ಮ ಕಚೇರಿಯ ಸಿಬ್ಬಂದಿಯ ವರದಿಯೂ ನೆಗಟಿವ್‌ ಆಗಿದೆ. ಆದ್ರೂ ಸ್ವಲ್ಪ ರೆಸ್ಟ್‌ ಪಡೀಲಿ ಅಂತಾ ರಜೆ ಮೇಲೆ ಕಳಿಸಿದ್ದೇನೆ ಎಂದು ರೇವಣ್ಣ ತಿಳಿಸಿದ್ದಾರೆ.

ಹೌದು, ದೇವೆಗೌಡರ ಪುತ್ರ ಹೆಚ್‌ ಡಿ ರೇವಣ್ಣ ಅಂದ್ರೆ ಎರಡು ವಿಷ್ಯಗಳು ತಟ್ಟನೆ ನೆನಪಾಗುತ್ತವೆ. ಒಂದು ಅವರು ಹಾಸನವನ್ನ ರಿಪಬ್ಲಿಕ್‌ ಆಫ್‌ ರೇವಣ್ಣಾಸ್‌ ಹಾಸನ ಮಾಡಿಕೊಂಡಿರೋದು, ಮತ್ತೊಂದು ಯಾವಾಗಲೂ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡಿರೋದು. ಹೀಗಾಗಿ ರೇವಣ್ಣ ಅವರಿಗೆ ಕೊರೊನಾ ನೆಗಟಿವ್‌ ಬರೋಕ್ಕೆೇನಾದ್ರೂ ಲಿಂಬೆ ಹಣ್ಣಿನ ಜಾದು ಕಾರಣವಿರಬಹುದು ಅಂತಾ ಯಾರಾದ್ರೂ ಅಂದುಕೊಂಡ್ರು ಅಂದುಕೊಳ್ಳಬಹುದು.

ಸ್ವಕ್ಷೇತ್ರ ಹೊಳೆ ನರಸೀಪುರದಲ್ಲಿ ಲಾಕ್‌ಡೌನ್‌
ಜೊತೆಗೆ ರೇವಣ್ಣ ಈಗ ತಮ್ಮ ಸ್ವಕ್ಷೇತ್ರ ಹೊಳೆ ನರಸೀಪುರದಲ್ಲಿ ಲಾಕ್‌ಡೌನ್‌ಗೆ ಮುಂದಾಗಿದ್ದಾರೆ. ಕೋರೊನಾ ಹಾವಳಿ ದಿನೇ ದಿನೇ ಹೆಚ್ಚಾಗ್ತಿರೋದ್ರಿಂದ ಈ ಕ್ರಮಕ್ಕೆ ಸ್ವತಃ ಜನರೇ ಮುಂದಾಗಿದ್ದಾರೆ ಅಂತಿದ್ದಾರೆ.

ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1ಗಂಟೆವರೆಗೆ ನಡೆಸಲು ಹೊಳೆನರಸೀಪುರದ ಜನರು ತಿರ್ಮಾನಿಸಿದ್ದಾರೆ. ಆನಂತರ ಮಾರುಕಟ್ಟೆ ಕ್ಲೋಸ್‌ ಆಗಿರಲಿದೆ ಎಂದು ರೇವಣ್ಣ ತಿಳಿಸಿದ್ದಾರೆ. ಈ ಸಂಬಂಧ ಡಿಸಿ ಅವರಿಗೂ ಸೂಕ್ತ ಕ್ರಮ ಕೈಗೊಳ್ಳೋಕೆ ರೇವಣ್ಣ ತಿಳಿಸಿದ್ದಾರಂತೆ.

Published On - 5:03 pm, Wed, 1 July 20

Guru
Follow Us