AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series 2ನೇ ದಿನದಾಟ: ಗಿಲ್​ ಅರ್ಧ ಶತಕ.. ಭಾರತಕ್ಕೆ ಆರಂಭಿಕ ಆಘಾತ

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮ ಹಾಗೂ ಶುಭ್​ಮನ್​ ಗಿಲ್​ 50 ರನ್​ಗಳ ಜೊತೆಯಾಟ ಆಡುವುದರ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 26 ರನ್​ ಗಳಿಸಿ ಅಬ್ಬರಿಸುತ್ತಿದ್ದ ರೋಹಿತ್​ ಶರ್ಮ ಹ್ಯಾಝಲ್​ವುಡ್​ ಬಲೆಗೆ ಬಿದ್ದರು.

India vs Australia Test Series 2ನೇ ದಿನದಾಟ: ಗಿಲ್​ ಅರ್ಧ ಶತಕ.. ಭಾರತಕ್ಕೆ ಆರಂಭಿಕ ಆಘಾತ
ಶುಭ್​ಮನ್​ ಗಿಲ್
ಪೃಥ್ವಿಶಂಕರ
| Edited By: |

Updated on: Jan 08, 2021 | 2:39 PM

Share

ಸಿಡ್ನಿ: ಇಂಡೋ- ಆಸಿಸ್​ ನಡುವಿನ 3ನೇ ಟೆಸ್ಟ್​ನ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲನೇ ದಿನದಾಟದಲ್ಲಿ 2 ವಿಕೆಟ್​ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸಿಸ್​ ಪಡೆ, 3ನೇ ದಿನದಾಟದಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 338 ರನ್ ಗಳಿಸಿತ್ತು​. ಇದಕ್ಕೆ ಪ್ರತ್ತ್ಯುತ್ತರವಾಗಿ ಬ್ಯಾಟಿಂಗ್​ ಆರಂಭಿಸಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿದೆ.

ಸ್ಟೀವ್​ ಸ್ಮಿತ್​ ಅಮೋಘ ಶತಕ.. 2ನೇ ದಿನದಾಟದಲ್ಲಿ ಉತ್ತಮ ಆರಂಭ ಪಡೆದ ಆಸ್ಟ್ರೇಲಿಯಾ ಸ್ಟೀವ್​ ಸ್ಮಿತ್​ ಅವರ ಅಮೋಘ 131 ರನ್​ ಹಾಗೂ ಲಾಬುಶೆನ್ ಅವರ 91 ರನ್​ಗಳ ನೆರವಿನಿಂದ ಬೃಹತ್​ ಮೊತ್ತ ಕಲೆಹಾಕುವತ್ತ ಸಾಗಿತ್ತು. ಆದರೆ ಟೀಂ ಇಂಡಿಯಾದ ಬೌಲರ್​ಗಳು ಇದಕ್ಕೆ ಬ್ರೇಕ್​ ಹಾಕಿದರು.

91 ರನ್ ಗಳಿಸಿ ಆಡುತ್ತಿದ್ದ ಲಾಬುಶೆನ್​ಗೆ ರವೀಂದ್ರ ಜಡೇಜಾ ಪೆವಿಲಿಯನ್​ ದಾರಿ ತೋರಿಸಿದರು. ಹಾಗೆಯೇ ಶತಕ ಬಾರಿಸಿ ಆರ್ಭಟಿಸುತ್ತಿದ್ದ ಸ್ಟೀವ್​ ಸ್ಮಿತ್​, ಜಡೇಜಾ ಮಾಡಿದ ಅದ್ಭುತ ಫೀಲ್ಡಿಂಗ್​ಗೆ ಬಲಿಯಾದರು. ಅಂತಿಮವಾಗಿ ಮಿಚೆಲ್​ ಸ್ಟಾರ್ಕ್​ ಕೊಂಚ ಅಬ್ಬರಿಸಿದ್ದನ್ನು ಬಿಟ್ಟರೆ, ಉಳಿದ ಆಸಿಸ್​ ಆಟಗಾರರು ಮೈದಾನದಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ.

4 ವಿಕೆಟ್​ ಕಬಳಿಸಿದ ರವೀಂದ್ರ ಜಡೇಜಾ.. ಭಾರತದ ಪರ 4 ವಿಕೆಟ್​ ಕಬಳಿಸಿದ ರವೀಂದ್ರ ಜಡೇಜಾ ಆಸಿಸ್​ನ ಬ್ಯಾಟಿಂಗ್​ ಬೆನ್ನೇಲುಬನ್ನು ಮುರಿಯುವಲ್ಲಿ ಯಶಸ್ವಿಯಾದರು. ಹಾಗೆಯೇ ನವ್​ದೀಪ್​ ಸೈನಿ ಹಾಗೂ ಬುಮ್ರಾ ತಲಾ 2 ವಿಕೆಟ್​ ತೆಗೆಯುವುದರ ಮೂಲಕ ತಂಡಕ್ಕೆ ನೆರವಾದರು. ವೇಗಿ ಸಿರಾಜ್​ ಕೂಡ 1 ವಿಕೆಟ್​ ಪಡೆದರು.

ಆಸಿಸ್​ನ 368 ರನ್​ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮ ಹಾಗೂ ಶುಭ್​ಮನ್​ ಗಿಲ್​ 50 ರನ್​ಗಳ ಜೊತೆಯಾಟ ಆಡುವುದರ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 26 ರನ್​ ಗಳಿಸಿ ಅಬ್ಬರಿಸುತ್ತಿದ್ದ ರೋಹಿತ್​ ಶರ್ಮ ಹ್ಯಾಝಲ್​ವುಡ್​ ಬಲೆಗೆ ಬಿದ್ದರು.

ಅರ್ಧ ಶತಕ ಬಾರಿಸಿದ ಶುಭ್​ಮನ್​ ಗಿಲ್..​ ನಂತರ ಬಂದ ಪೂಜಾರಾಗೆ ಉತ್ತಮ ಸಾಥ್​ ನೀಡಿದ ಗಿಲ್​ ಅರ್ಧ ಶತಕ ಪೂರೈಸಿದರು. 50 ರನ್​ ಬಳಿಕ ಎಚ್ಚರಿಕೆಯ ಆಟವಾಡಬೇಕಿದ್ದ ಗಿಲ್​ ಅರ್ಧ ಶತಕದ ಸಂಭ್ರಮದಲ್ಲೇ ಪ್ಯಾಟ್​ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಈ ಎರಡು ವಿಕೆಟ್​ಗಳ ನಂತರ ತಾಳ್ಮೆಯ ಆಟಕ್ಕೆ ಮುಂದಾಗಿರುವ ನಾಯಕ ಅಜಿಂಕ್ಯಾ ರಹಾನೆ ಹಾಗೂ ಪೂಜಾರ ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಇಂದಿನ ದಿನದಾಟದ ಅತ್ಯಂಕ್ಕೆ ಟೀಂ ಇಂಡಿಯಾ 2 ವಿಕೆಟ್​ ಕಳೆದುಕೊಂಡು 96 ರನ್​ ಗಳಿಸಿದೆ.

India vs Australia Test Series ಸ್ಮಿತ್ ಸೆಂಚುರಿ.. ಜಡೇಜಾಗೆ 4 ವಿಕೆಟ್​: ಆಸ್ಟ್ರೇಲಿಯಾ ಆಲೌಟ್​

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ