AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಮೈದಾನದಲ್ಲಿ CSK ವಿರುದ್ಧ RR ಆಟಗಾರರು ಮಿಂಚು ಹರಿಸಿದ್ದು ಹೀಗೆ..

ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಐಪಿಎಲ್ 2020 ಮೊದಲ ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದೆ. ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತನ್ನ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದೆ. ರಾಜಸ್ಥಾನವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು 16 ರನ್​ಗಳಿಂದ ಸೋಲಿಸಿತು. [yop_poll id=”1″] ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುವಾ ಮೂಲಕ ತಮ್ಮ ಕ್ರಿಕೆಟ್​ ಬದುಕನ್ನು ಆರಂಭಿಸಿದ್ದಾರೆ. ಮೊದಲ ಬಾರಿಗೆ ಎಂಎಸ್ ಧೋನಿಯ ಎದುರಾದ ಜೈಸ್ವಾಲ್ ಧೋನಿ ಬಗ್ಗೆ ಗೌರವ ವ್ಯಕ್ತಪಡಿಸಿ ಎರಡು […]

IPL 2020: ಮೈದಾನದಲ್ಲಿ CSK ವಿರುದ್ಧ RR ಆಟಗಾರರು ಮಿಂಚು ಹರಿಸಿದ್ದು ಹೀಗೆ..
ಸಾಧು ಶ್ರೀನಾಥ್​
|

Updated on:Sep 23, 2020 | 1:43 PM

Share

ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಐಪಿಎಲ್ 2020 ಮೊದಲ ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದೆ. ಭರ್ಜರಿ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತನ್ನ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದೆ. ರಾಜಸ್ಥಾನವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು 16 ರನ್​ಗಳಿಂದ ಸೋಲಿಸಿತು.

[yop_poll id=”1″]

ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುವಾ ಮೂಲಕ ತಮ್ಮ ಕ್ರಿಕೆಟ್​ ಬದುಕನ್ನು ಆರಂಭಿಸಿದ್ದಾರೆ. ಮೊದಲ ಬಾರಿಗೆ ಎಂಎಸ್ ಧೋನಿಯ ಎದುರಾದ ಜೈಸ್ವಾಲ್ ಧೋನಿ ಬಗ್ಗೆ ಗೌರವ ವ್ಯಕ್ತಪಡಿಸಿ ಎರಡು ಕೈಗಳಿಂದ ನಮಸ್ಕರಿಸಿದರು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆದರೆ ಯಶಸ್ವಿ ಜೈಸ್ವಾಲ್ ಅವರ ಐಪಿಎಲ್ ವೃತ್ತಿಜೀವನವು ಉತ್ತಮಯಾಗಿ ಪ್ರಾರಂಭವಾಗಲಿಲ್ಲ. ಕೇವಲ 6 ರನ್ ಗಳಿಸಿದ ಜೈಸ್ವಾಲ್ ಔಟ್ ಆಗಿ ಪೆವಿಲಿಯನ್​ ಸೇರಿದರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಸಂಜು ಸ್ಯಾಮ್ಸನ್ ಹೆಸರೆ ಆರ್ಭಟಿಸಿತು. ಸ್ಯಾಮ್ಸನ್ ಉತ್ತಮ ಇನಿಂಗ್ಸ್ ಆಡುವ ಮೂಲಕ ರಾಜಸ್ಥಾನದ ದೊಡ್ಡ ಸ್ಕೋರಿಗೆ ಅಡಿಪಾಯ ಹಾಕಿದರು. ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧ ಶತಕವನ್ನು ಬಾರಿಸಿದಲ್ಲದೆ ಕೇವಲ 32 ಎಸೆತಗಳಲ್ಲಿ 74 ರನ್ ಗಳಿಸಿದರು. ಇದರಲ್ಲಿ 9 ಭವ್ಯವಾದ ಸಿಕ್ಸರ್‌ಗಳು ಸೇರಿದ್ದವು.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಕೂಡ ಅದ್ಭುತ ಅರ್ಧ ಶತಕ ಬಾರಿಸಿದರು. ಅಲ್ಲದೆ ಸ್ಯಾಮ್ಸನ್ ಔಟ್ ಆದ ನಂತರವೂ ತಂಡವನ್ನು ಮುನ್ನಡೆಸಿ ಸ್ಮಿತ್ 67 ರನ್ ಗಳಿಸಿದರು.

ಜಡೇಜಾ ತೀವ್ರ ಪ್ರಯತ್ನ ಮಾಡಿದರೂ ಸಹ ಇಂದಿನ ಪಂದ್ಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಸ್ಯಾಮ್ಸನ್ ಜಡೇಜಾ ಓವರ್​ಗಳಲ್ಲಿ ಅಬ್ಬರಿಸಿ ಬೊಬ್ಬಿರಿದರು.

ಆರ್ಚರ್ ಬ್ಯಾಟ್​ ಮಾಡಿದ ಕೊನೆಯ ಓವರ್​ ಅತ್ಯುತ್ತಮವಾಗಿತ್ತು. ಆರ್ಚರ್ ಕೊನೆಯ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಅವರಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿದಲ್ಲದೆ ಕೇವಲ 8 ಎಸೆತಗಳಲ್ಲಿ 27 ರನ್ ಗಳಿಸಿದರು.

ರಾಹುಲ್ ತಿವಾಟಿಯಾ ಅವರ ಬೌಲಿಂಗ್ ಪಂದ್ಯದ ದಿಕ್ಕನೇ ಬದಲಾಯಿಸಿತು. ನಿಧಾನಗತಿಯ ಸ್ಪಿನ್‌ನಿಂದ ತಿವಾಟಿಯಾ ಪಂದ್ಯದಲ್ಲಿ 3 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ ಚೆನ್ನೈನ ಮಧ್ಯಮ ಕ್ರಮಾಂಕವನ್ನು ಪೆವಿಲಿಯನ್​ಗೆ ಅಟ್ಟುವುದರಲ್ಲಿ ಯಶಸ್ವಿಯಾದರು.

ಉತ್ತಮ ಬ್ಯಾಟಿಂಗ್ ಮಾಡಿದ ನಂತರ, ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸತತ 2 ಎಸೆತಗಳಲ್ಲಿ ಉತ್ತಮ ಸ್ಟಂಪಿಂಗ್ ಮಾಡಿದರು.

ಇದರ ಜೊತೆಗೆ ಸ್ಯಾಮ್ಸನ್ ಅವರು ಗಾಳಿಯಲ್ಲಿ ಹಾರಿ ಕೇದಾರ್ ಜಾಧವ್ ಅವರ ಅತ್ಯುತ್ತಮ ಕ್ಯಾಚ್ ಅನ್ನು ಒಂದು ಕೈಯಿಂದ ಹಿಡಿದರು.

ಕೊನೆಯ ಓವರ್‌ನಲ್ಲಿ ಎಂ.ಎಸ್.ಧೋನಿ ಸತತ 3 ಸಿಕ್ಸರ್‌ಗಳನ್ನು ಬಾರಿಸಿದರು, ಆದರೆ ಆ ಹೊತ್ತಿಗೆ ಪಂದ್ಯವು ಕೈಮೀರಿ ಹೋಗಿತ್ತು.

(Photo courtesy: BCCI/IPL Twitter)

Published On - 10:59 am, Wed, 23 September 20

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ