S.M.ಕೃಷ್ಣ ಅವರ ಹಾದಿ ತುಳಿಯಲು ಸಜ್ಜಾದ ಡಿಕೆಶಿ: ರಾಜ್ಯದಲ್ಲಿ ಕಾಂಗ್ರೆಸ್​ನ ಅಧಿಕಾರಕ್ಕೆ ತರಲು ರೆಡಿಯಾಯ್ತು ಮಾಸ್ಟರ್​ ಪ್ಲ್ಯಾನ್!

1999ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುರುಡುಮಲೆಯಿಂದ ಪಾಂಚಜನ್ಯ ಯಾತ್ರೆ ಆರಂಭಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಇದೀಗ, ಎಸ್​.ಎಂ.ಕೃಷ್ಣ ಅವರ ಹಾದಿ ತುಳಿಯಲು ಸಜ್ಜಾಗಿರುವ ಡಿಕೆಶಿ ಅದೇ ರೀತಿ ಕಾಂಗ್ರೆಸ್​ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾರೆ.

S.M.ಕೃಷ್ಣ ಅವರ ಹಾದಿ ತುಳಿಯಲು ಸಜ್ಜಾದ ಡಿಕೆಶಿ: ರಾಜ್ಯದಲ್ಲಿ ಕಾಂಗ್ರೆಸ್​ನ ಅಧಿಕಾರಕ್ಕೆ ತರಲು ರೆಡಿಯಾಯ್ತು ಮಾಸ್ಟರ್​ ಪ್ಲ್ಯಾನ್!
S.M.ಕೃಷ್ಣ ಜೊತೆ ಡಿ.ಕೆ.ಶಿವಕುಮಾರ್​

Updated on: Feb 28, 2021 | 10:09 PM

ಕೋಲಾರ: ಮಾ.3ರಿಂದ ರಾಜ್ಯದಲ್ಲಿ ಕಾಂಗ್ರೆಸ್​ ಪಾದಯಾತ್ರೆ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ನಾಳೆ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಇತರ ಕಾಂಗ್ರೆಸ್​ ನಾಯಕರು ಭೇಟಿಕೊಡಲಿದ್ದಾರೆ. ಮಾ.3ರಂದು ದೇವನಹಳ್ಳಿಯಿಂದ ಕಾಂಗ್ರೆಸ್​ ಪಾದಯಾತ್ರೆ ಪ್ರಾರಂಭವಾಗಲಿದೆ. ಪಾದಯಾತ್ರೆಗೂ ಮುನ್ನ ಡಿ.ಕೆ.ಶಿವಕುಮಾರ್​ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿರುವ ಸುಪ್ರಸಿದ್ಧ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕುರುಡುಮಲೆಯ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಗೆ ಚಾಲನೆ ಸಿಗಲಿದೆ.

ಅಂದ ಹಾಗೆ, 1999ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುರುಡುಮಲೆಯಿಂದ ಪಾಂಚಜನ್ಯ ಯಾತ್ರೆ ಆರಂಭಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಇದೀಗ, ಎಸ್​.ಎಂ.ಕೃಷ್ಣ ಅವರ ಹಾದಿ ತುಳಿಯಲು ಸಜ್ಜಾಗಿರುವ ಡಿಕೆಶಿ ಅದೇ ರೀತಿ ಕಾಂಗ್ರೆಸ್​ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾರೆ.

ಕುರುಡುಮಲೆಯಲ್ಲಿ ಪೂಜೆ ಬಳಿಕ ಪಕ್ಷದ ಮುಖಂಡರು ದರ್ಗಾದಲ್ಲಿ ಪ್ರಾರ್ಥನೆ ಮಾಡಲಿದ್ದಾರೆ. ಈ ವೇಳೆ, ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ರಾಮಲಿಂಗಾರೆಡ್ಡಿ ಸೇರಿದಂತೆ ಜಿಲ್ಲೆಯ ಶಾಸಕರು ಸಾಥ್ ನೀಡಲಿದ್ದಾರೆ.

‘ಮುಂದಿನ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆಲ್ಲುವ ವಿಶ್ವಾಸ’
ಮುಂದಿನ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಉದ್ದ ಅಗಲಕ್ಕೂ ಪ್ರವಾಸ ಮಾಡಿ ಪಕ್ಷ ಸಂಘಟಿಸುವೆ. ಈ ವರ್ಷದ ಬಜೆಟ್‌ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವೆ ಎಂದು ಹೇಳಿದರು. ಸಿಎಂಗೆ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿದರು.

ಇದನ್ನೂ ಓದಿ: Roberrt Pre Release Event | ಗಂಡು ಮೆಟ್ಟಿದ ನಾಡಲ್ಲಿ ‘ರಾಬರ್ಟ್​’ ಆರ್ಭಟ: ‘ಯಜಮಾನ’ನ ಕಂಡು ಮಂದಿ ಫುಲ್​ ಫಿದಾ!

ಫ್ಯಾನ್ಸ್‌ ಕರೆದ್ರೆ ನಮ್ಮಣ್ಣ ROBERRT ಹೀರೋ DARSHAN ಓಡೋಡಿ ಬರ್ತಾರೆ: RAJU GOUDA

Published On - 10:08 pm, Sun, 28 February 21

Follow Us