ಜಲಾವೃತಗೊಂಡ ಸೇತುವೆ ದಾಟಲು ಹೋಗಿ 260 ಚೀಲ ಸಕ್ಕರೆ ನೀರುಪಾಲು!

ಬೆಳಗಾವಿ: ಲಾರಿ ಪಲ್ಟಿಯಾಗಿ 260 ಚೀಲ ಸಕ್ಕರೆ ನೀರುಪಾಲಾಗಿರುವ ಘಟನೆ ಗೋಕಾಕ್ ತಾಲೂಕಿನ ರಡ್ಡೇರಟ್ಟಿ ಬಳಿಯ ಚಿಕ್ಕ ಸೇತುವೆ ಮೇಲೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ರಡ್ಡೇರಟ್ಟಿ-ಯಾದವಾಡ ಸಂಪರ್ಕ ಕಲ್ಪಿಸುವ ಚಿಕ್ಕ ಸೇತುವೆ ಜಲಾವೃತವಾಗಿತ್ತು. ಈ ರೀತಿ ಜಲಾವೃತಗೊಂಡು ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಸುಮಾರು 260 ಸಕ್ಕರೆ ಚೀಲ […]

ಜಲಾವೃತಗೊಂಡ ಸೇತುವೆ ದಾಟಲು ಹೋಗಿ 260 ಚೀಲ ಸಕ್ಕರೆ ನೀರುಪಾಲು!
ಆಯೇಷಾ ಬಾನು

Updated on: Sep 27, 2020 | 9:52 AM

ಬೆಳಗಾವಿ: ಲಾರಿ ಪಲ್ಟಿಯಾಗಿ 260 ಚೀಲ ಸಕ್ಕರೆ ನೀರುಪಾಲಾಗಿರುವ ಘಟನೆ ಗೋಕಾಕ್ ತಾಲೂಕಿನ ರಡ್ಡೇರಟ್ಟಿ ಬಳಿಯ ಚಿಕ್ಕ ಸೇತುವೆ ಮೇಲೆ ನಡೆದಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ರಡ್ಡೇರಟ್ಟಿ-ಯಾದವಾಡ ಸಂಪರ್ಕ ಕಲ್ಪಿಸುವ ಚಿಕ್ಕ ಸೇತುವೆ ಜಲಾವೃತವಾಗಿತ್ತು. ಈ ರೀತಿ ಜಲಾವೃತಗೊಂಡು ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

ಲಾರಿಯಲ್ಲಿದ್ದ ಸುಮಾರು 260 ಸಕ್ಕರೆ ಚೀಲ ನೀರಿಗೆ ಬಿದ್ದು ನೀರುಪಾಲಾಗಿದೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಮೂಲದ ವ್ಯಕ್ತಿಗೆ ಸೇರಿದ ಲಾರಿ ಇದಾಗಿದ್ದು, ರಡ್ಡೇರಟ್ಟಿ ಮಾರ್ಗವಾಗಿ ಯಾದವಾಡ ಗ್ರಾಮದತ್ತ ಲಾರಿ ಹೊರಟಿತ್ತು.

Published On - 9:50 am, Sun, 27 September 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us