AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುದಾನ ಬೇಕು ಅಂದ್ರೆ CM ಗೆ ಬೆಣ್ಣೆ ಹೊಡೀಬೇಕಾ? ಸಚಿವ ನಾರಾಯಣಗೌಡ ಹೇಳಿದ್ದೇನು?

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಮ್ಮ ಬೆಂಬಲಿಗರ ಬಳಿ ಮಾತನಾಡುತ್ತಾ, ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಬಗ್ಗೆ ಗಂಭೀರ ವಿಚಾರ ಹೇಳಿದ್ದಾರೆ. ಅನುದಾನ ಬೇಕು ಅಂದ್ರೆ ಸಿಎಂಗೆ ಬೆಣ್ಣೆ ಹೊಡೀಬೇಕಂತೆ! 600 ಕೋಟಿ ರೂ ಅಂದ್ರೆ ಸಿಎಂ ಫೈಲ್ ಬಿಸಾಕ್ತಾರಂತೆ. ಹಾಗಂತ ಸಚಿವ ನಾರಾಯಣಗೌಡ ಕ್ಯಾಮೆರಾ ಮುಂದೆ ಹೇಳಿರುವ ವಿಡಿಯೋ ಹೇಳಿಕೆ ವೈರಲ್ ಆಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಾಲೂಕು ಬಿಜೆಪಿ ಮುಖಂಡನ ಅಭಿನಂದನೆ ವೇಳೆ ಹೀಗೆ ಹೇಳಿದ್ದಾರೆ. ತಾಲೂಕು ಬಿಜೆಪಿ […]

ಅನುದಾನ ಬೇಕು ಅಂದ್ರೆ CM ಗೆ ಬೆಣ್ಣೆ ಹೊಡೀಬೇಕಾ? ಸಚಿವ ನಾರಾಯಣಗೌಡ ಹೇಳಿದ್ದೇನು?
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Jun 15, 2020 | 4:14 PM

Share

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಮ್ಮ ಬೆಂಬಲಿಗರ ಬಳಿ ಮಾತನಾಡುತ್ತಾ, ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಬಗ್ಗೆ ಗಂಭೀರ ವಿಚಾರ ಹೇಳಿದ್ದಾರೆ. ಅನುದಾನ ಬೇಕು ಅಂದ್ರೆ ಸಿಎಂಗೆ ಬೆಣ್ಣೆ ಹೊಡೀಬೇಕಂತೆ! 600 ಕೋಟಿ ರೂ ಅಂದ್ರೆ ಸಿಎಂ ಫೈಲ್ ಬಿಸಾಕ್ತಾರಂತೆ. ಹಾಗಂತ ಸಚಿವ ನಾರಾಯಣಗೌಡ ಕ್ಯಾಮೆರಾ ಮುಂದೆ ಹೇಳಿರುವ ವಿಡಿಯೋ ಹೇಳಿಕೆ ವೈರಲ್ ಆಗಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಾಲೂಕು ಬಿಜೆಪಿ ಮುಖಂಡನ ಅಭಿನಂದನೆ ವೇಳೆ ಹೀಗೆ ಹೇಳಿದ್ದಾರೆ. ತಾಲೂಕು ಬಿಜೆಪಿ ನೂತನ ಅಧ್ಯಕ್ಷ ಸಾರಂಗಿ ನಾಗರಾಜು ರೇಷ್ಮೆ ಬೆಳೆಗಾರರ ಸಂಕಷ್ಟದ ಸಮಸ್ಯೆ ಕುರಿತ ಪ್ರಶ್ನೆಗೆ ಕೆಸಿಎನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಸಚಿವ KCN ಹೇಳಿದ್ದೇನು? ತೋಟಗಾರಿಕೆ, ಪೌರಾಡಳಿತ ಇಲಾಖೆಯಲ್ಲಿ ಸಮಸ್ಯೆ ಇಲ್ಲ. ಬಟ್ಟೆ ನೇಯ್ಗೆ ಇನ್ನೂ ಸ್ಟಾರ್ಟ್ ಆಗಿಲ್ಲ. 600 ರೂ. ಇದ್ದ ರೇಷ್ಮೆ ಬೆಲೆ 200, 250ಕ್ಕೆ ಬಂದಿದೆ. ಪಾಪ ಅವರಿಗೆ ಬದುಕೋಕೆ ಆಗ್ತಿಲ್ಲ. ಮುಖ್ಯಮಂತ್ರಿಗಳತ್ರ ಅದನ್ನ ಸಾಲ್ವ್ ಮಾಡಿಸಬೇಕು. ಮೂರ್ನಾಲ್ಕು ದಿನದಲ್ಲಿ ಸೆಟಲ್ ಮಾಡಿಸಬೇಕು. ಸಿಎಂ ಹತ್ತಿರ ಫಂಡ್ ತಕೊಂಡ್ ರೈತರಿಗೆ ಸ್ವಲ್ಪ ದುಡ್ಡು ಕೊಡಬೇಕು. ಪ್ರತಿ ಕೆಜಿಗೆ 100 ಅಥವಾ 50 ರೂ. ಆದರೂ ಎಕ್ಸ್ಟ್ರಾ ಕೊಡಬೇಕು.

600 ಕೋಟಿ ಬೇಕು. 600 ಕೋಟಿ ಅಂದ ತಕ್ಷಣ ಎಸೆದು ಬಿಡ್ತಾರೆ ಮುಖ್ಯಮಂತ್ರಿ ಗಳು. ಏನೋ ಏನೋ ಬೆಣ್ಣೆ ಹೊಡೆದು ಇದು ಮಾಡ್ಬೇಕು. ಪಾರ್ಟ್ ಪಾರ್ಟ್ ಕೊಡಿ ಅಂತಾ ಕೇಳಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಸಿಎನ್ ಸಮಾಧಾನ ಮಾಡಿಕಳಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.

Published On - 11:18 am, Mon, 15 June 20