ಜಿಲ್ಲಾಡಳಿತದ ಗೊಂದಲದ ನಡೆ, ರಾಯರ ಭಕ್ತರಲ್ಲಿ ಕೊರೊನಾತಂಕ

ರಾಯಚೂರು: ಜಿಲ್ಲಾಡಳಿತದ ನಡೆ ರಾಯರ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಯಾಕಂದ್ರೆ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ನಡೆಸಲಿವೆ. ಆದ್ರೆ ಇಲ್ಲಿ ತೊಂದರೆ ಅಂದ್ರೆ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ 138 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೆ ಜಿಲ್ಲಾಡಳಿತ ಮಂತ್ರಾಲಯಕ್ಕೆ ಹೋಗಿಬಂದವರಿಗೆ 14 ದಿನ ಹೋಂ ಕ್ವಾರಂಟೈನ್ ನಿಗದಿ ಪಡಿಸಿದೆ. ಹೀಗಾಗಿ ಕ್ವಾರಂಟೈನ್​ಗೆ ಹೆದರಿ ಮಂತ್ರಾಲಯಕ್ಕೆ ತೆರಳಲು ರಾಯರ ಭಕ್ತರು ಹಿಂದೇಟು ಹಾಕುತ್ತಿದ್ದಾರೆ. ಆಂಧ್ರ ಸರ್ಕಾರ ರಾಯರ […]

ಜಿಲ್ಲಾಡಳಿತದ ಗೊಂದಲದ ನಡೆ, ರಾಯರ ಭಕ್ತರಲ್ಲಿ ಕೊರೊನಾತಂಕ
ಆಯೇಷಾ ಬಾನು

Updated on: Jun 19, 2020 | 9:34 AM

ರಾಯಚೂರು: ಜಿಲ್ಲಾಡಳಿತದ ನಡೆ ರಾಯರ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಯಾಕಂದ್ರೆ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳುವುದಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ನಡೆಸಲಿವೆ.

ಆದ್ರೆ ಇಲ್ಲಿ ತೊಂದರೆ ಅಂದ್ರೆ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ 138 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೆ ಜಿಲ್ಲಾಡಳಿತ ಮಂತ್ರಾಲಯಕ್ಕೆ ಹೋಗಿಬಂದವರಿಗೆ 14 ದಿನ ಹೋಂ ಕ್ವಾರಂಟೈನ್ ನಿಗದಿ ಪಡಿಸಿದೆ. ಹೀಗಾಗಿ ಕ್ವಾರಂಟೈನ್​ಗೆ ಹೆದರಿ ಮಂತ್ರಾಲಯಕ್ಕೆ ತೆರಳಲು ರಾಯರ ಭಕ್ತರು ಹಿಂದೇಟು ಹಾಕುತ್ತಿದ್ದಾರೆ.

ಆಂಧ್ರ ಸರ್ಕಾರ ರಾಯರ ಮಠ ಓಪನ್ ಮಾಡಲು ಇನ್ನು ಅನುಮತಿ ನೀಡಿಲ್ಲ. ಮಂತ್ರಾಲಯ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲೇ 138 ಕೊರೊನಾ ಕೇಸ್​ಗಳಿವೆ. ಇಷ್ಟೆಲ್ಲಾ ಗೊತ್ತಿದ್ರೂ ಕರ್ನಾಟಕ ಸರ್ಕಾರ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ಹೀಗಾಗಿ ರಾಯರ ಭಕ್ತರಲ್ಲಿ ಜಿಲ್ಲಾಡಳಿತದ ನಡೆ ಗೊಂದಲ ಮೂಡಿಸಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us