AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ. ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ […]

ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!
KUSHAL V
| Edited By: |

Updated on: Oct 24, 2020 | 12:12 PM

Share

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ.

ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ ಏರಿಯಾಗೆ ಬರುತ್ತಾ ಅಥವಾ RR ನಗರಕ್ಕೆ ಸೇರುತ್ತಾ ಅಂತಾ ಸ್ಥಳೀಯ ಮಾಜಿ ಕಾರ್ಪೋರೇಟರ್ ಪತಿ ರಾಜೇಶ್ವರಿ ಚೋಳರಾಜ ಬಳಿ ಅಶೋಕ್​ ಪ್ರಶ್ನೆ ಮಾಡಿದರಂತೆ.

ಅದಕ್ಕೆ ಮಾಜಿ ಕಾರ್ಪೋರೇಟರ್ ಪತಿ ಇದು ನಮ್ಮ ಏರಿಯಾನೆ ಸಾರ್ ಅಂತಾ ಸಚಿವರಿಗೆ ಕನ್ಫರ್ಮ್​ ಮಾಹಿತಿ ಕೊಟ್ಟರಂತೆ. ಜೊತೆಗೆ, ಬೆಳಗ್ಗೆಯಿಂದ ಊಟ ಕೊಟ್ಟಿದ್ದೀವಿ, ನೀರು ಕೊಟ್ಟಿದ್ದೀ ಅಂತಾ ಮಾಹಿತಿ ಸಹ ಹೇಳಿದರಂತೆ.

ಅದೇ ವೇಳೆ, ಸಾರ್ ನಮ್ಮ ಮನೆ ನೋಡಿ ಅಂತಾ ಕೆಲ ಹಿರಿಯರು ಸಚಿವ ಆರ್ ಅಶೋಕ್​ಗೆ ಕೇಳಿಕೊಂಡರು. ಆಗ, ಕಾಂಪೌಂಡ್ ಹೊರ ಭಾಗದಿಂದಲೇ ಸಚಿವರು ನೋಡಿ ಹೊರಟು ಹೋದರು. ಈ ನಡುವೆ, ಅಕ್ಕಪಕ್ಕದ ಮನೆಯವರು ಸಾರ್ ಸಾರ್ ಅಂತಾ ಕೂಗಾಡಿದ್ರು ಸಚಿವರು ಜಾಣ ಕಿವುಡುತನ ತೋರಿ ಅಲ್ಲಿಂದ ಕಾಲ್ಕಿತ್ತರು.

ಯಾವುದೇ ಮನೆಯ ಒಳಗೆ ಹೋಗದೆ ಕೇವಲ ರೋಡ್ ಮಾತ್ರ ವೀಕ್ಷಣೆ ಮಾಡ್ತಿದ್ದಾರಂತೆ ಸಚಿವ ಅಶೋಕ್. ಸಾರ್ ನೋಡಿ ನಮ್ಮ ಮನೆಗೆ ನೀರು ನುಗ್ಗಿದೆ ಅಂತಾ ಸ್ಥಳೀಯರು ದೂರಿದಾಗ.. ಸಚಿವರು ಸಿಎಂ ಮನೆಗೆ ಹೋಗಿ ಮತ್ತೆ ಬರ್ತೀನಿ ಅಂತಾ ಹೇಳಿ ಕಾರ್ ಹತ್ತಿ ಹೊರಟೇ ಬಿಟ್ಟರಂತೆ!

ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!