AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ. ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ […]

ಇದು ‘ನಮ್ಮ ಏರಿಯಾ’ಗೆ ಬರುತ್ತಾ? ಮಳೆ ಸಂಕಷ್ಟದಲ್ಲೂ ‘ಸಾಮ್ರಾಟ್​’ರಿಗೆ ವ್ಯಾಪ್ತಿ ಗೊಂದಲ!
KUSHAL V
| Edited By: |

Updated on: Oct 24, 2020 | 12:12 PM

Share

ಬೆಂಗಳೂರು: ರಾತ್ರಿ ಸುರಿದ ಮಳೆಗೆ ಹೊಸಕೆರೆ ಹಳ್ಳಿ ಮತ್ತು ದತ್ತಾತ್ರೇಯ ಲೇಔಟ್​ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಎಂ ಭೇಟಿ ಮಾಡಲಿರುವ ಸಚಿವ ಅಶೋಕ್ ಸಿಎಂಗೆ ಮಳೆ ಹಾನಿ ಪ್ರದೇಶಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ನೀಡಿ, ಪರಿಹಾರ ಕ್ರಮದ ಬಗ್ಗೆ ಅಶೋಕ್ ಚರ್ಚೆ ನಡೆಸಲಿದ್ದಾರೆ.

ಇಂಟರೆಸ್ಟಿಂಗ್​ ಸುದ್ದಿಯೆಂದರೆ ಸಚಿವರು ಭೇಟಿ ಕೊಟ್ಟ ವೇಳ ಕೊಂಚ ಕನ್ಫ್ಯೂಸ್​ ಆಗಿಹೋದರು. ಇದು ನಮ್ಮ ಏರಿಯಾಗೆ ಬರುತ್ತಾ ಅಥವಾ RR ನಗರಕ್ಕೆ ಸೇರುತ್ತಾ ಅಂತಾ ಸ್ಥಳೀಯ ಮಾಜಿ ಕಾರ್ಪೋರೇಟರ್ ಪತಿ ರಾಜೇಶ್ವರಿ ಚೋಳರಾಜ ಬಳಿ ಅಶೋಕ್​ ಪ್ರಶ್ನೆ ಮಾಡಿದರಂತೆ.

ಅದಕ್ಕೆ ಮಾಜಿ ಕಾರ್ಪೋರೇಟರ್ ಪತಿ ಇದು ನಮ್ಮ ಏರಿಯಾನೆ ಸಾರ್ ಅಂತಾ ಸಚಿವರಿಗೆ ಕನ್ಫರ್ಮ್​ ಮಾಹಿತಿ ಕೊಟ್ಟರಂತೆ. ಜೊತೆಗೆ, ಬೆಳಗ್ಗೆಯಿಂದ ಊಟ ಕೊಟ್ಟಿದ್ದೀವಿ, ನೀರು ಕೊಟ್ಟಿದ್ದೀ ಅಂತಾ ಮಾಹಿತಿ ಸಹ ಹೇಳಿದರಂತೆ.

ಅದೇ ವೇಳೆ, ಸಾರ್ ನಮ್ಮ ಮನೆ ನೋಡಿ ಅಂತಾ ಕೆಲ ಹಿರಿಯರು ಸಚಿವ ಆರ್ ಅಶೋಕ್​ಗೆ ಕೇಳಿಕೊಂಡರು. ಆಗ, ಕಾಂಪೌಂಡ್ ಹೊರ ಭಾಗದಿಂದಲೇ ಸಚಿವರು ನೋಡಿ ಹೊರಟು ಹೋದರು. ಈ ನಡುವೆ, ಅಕ್ಕಪಕ್ಕದ ಮನೆಯವರು ಸಾರ್ ಸಾರ್ ಅಂತಾ ಕೂಗಾಡಿದ್ರು ಸಚಿವರು ಜಾಣ ಕಿವುಡುತನ ತೋರಿ ಅಲ್ಲಿಂದ ಕಾಲ್ಕಿತ್ತರು.

ಯಾವುದೇ ಮನೆಯ ಒಳಗೆ ಹೋಗದೆ ಕೇವಲ ರೋಡ್ ಮಾತ್ರ ವೀಕ್ಷಣೆ ಮಾಡ್ತಿದ್ದಾರಂತೆ ಸಚಿವ ಅಶೋಕ್. ಸಾರ್ ನೋಡಿ ನಮ್ಮ ಮನೆಗೆ ನೀರು ನುಗ್ಗಿದೆ ಅಂತಾ ಸ್ಥಳೀಯರು ದೂರಿದಾಗ.. ಸಚಿವರು ಸಿಎಂ ಮನೆಗೆ ಹೋಗಿ ಮತ್ತೆ ಬರ್ತೀನಿ ಅಂತಾ ಹೇಳಿ ಕಾರ್ ಹತ್ತಿ ಹೊರಟೇ ಬಿಟ್ಟರಂತೆ!

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್