AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸೋಮಣ್ಣಗೆ SPG ಕಿರಿಕಿರಿ, ರಾಮನಗರ SPಗೆ ಆವಾಜ್

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ವಹಿಸಿ, ಉತ್ಸಾಹದಿಂದ ಏರ್ಪಾಡುಗಳನ್ನುಮಾಡುತ್ತಿದ್ದ ಸಚಿವ ವಿಸೋಮಣ್ಣಗೆ ಇಂದಂತೂ ಪ್ರಧಾನಿ ಭದ್ರತೆ ಜವಾಬ್ದಾರಿಯನ್ನುಹೊತ್ತಿರುವ SPG ತಂಡದಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸ್ಥಳೀಯ ಪೊಲೀಸರು ತಮಗೆ ಉಂಟುಮಾಡುತ್ತಿರುವ ಕಿರಿಕಿರಿ ಬಗ್ಗೆ ಸೋಮಣ್ಣ ಕಿಡಿಕಿಡಿಕಾರಿದ್ದಾರೆ. ಇದರಿಂದ ಬೇಸತ್ತು ಇದರ ಸಹವಾಸವೇ ಬೇಡ ಎಂದು ಮಠದಿಂದ ಸೋಮಣ್ಣ ವಾಪಸಾಗಿರುವ ಘಟನೆ ನಡೆದಿದೆ. ಸೋಮಣ್ಣ ಅವರ ಕಾರನ್ನು ಮಠದೊಳಕ್ಕೆ ಬಿಟ್ಟಿದ್ದಕ್ಕೆ ರಕ್ಷಣಾ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಎಸ್​ಪಿ ಅನುಪ್ ಎ […]

ಸಚಿವ ಸೋಮಣ್ಣಗೆ  SPG ಕಿರಿಕಿರಿ, ರಾಮನಗರ SPಗೆ ಆವಾಜ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 02, 2020 | 12:06 PM

Share

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ವಹಿಸಿ, ಉತ್ಸಾಹದಿಂದ ಏರ್ಪಾಡುಗಳನ್ನುಮಾಡುತ್ತಿದ್ದ ಸಚಿವ ವಿಸೋಮಣ್ಣಗೆ ಇಂದಂತೂ ಪ್ರಧಾನಿ ಭದ್ರತೆ ಜವಾಬ್ದಾರಿಯನ್ನುಹೊತ್ತಿರುವ SPG ತಂಡದಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸ್ಥಳೀಯ ಪೊಲೀಸರು ತಮಗೆ ಉಂಟುಮಾಡುತ್ತಿರುವ ಕಿರಿಕಿರಿ ಬಗ್ಗೆ ಸೋಮಣ್ಣ ಕಿಡಿಕಿಡಿಕಾರಿದ್ದಾರೆ. ಇದರಿಂದ ಬೇಸತ್ತು ಇದರ ಸಹವಾಸವೇ ಬೇಡ ಎಂದು ಮಠದಿಂದ ಸೋಮಣ್ಣ ವಾಪಸಾಗಿರುವ ಘಟನೆ ನಡೆದಿದೆ.

ಸೋಮಣ್ಣ ಅವರ ಕಾರನ್ನು ಮಠದೊಳಕ್ಕೆ ಬಿಟ್ಟಿದ್ದಕ್ಕೆ ರಕ್ಷಣಾ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಎಸ್​ಪಿ ಅನುಪ್ ಎ ಶೆಟ್ಟಿ ಗರಂ ಆಗಿದ್ದಾರೆ. ಯಾರನ್ನೂ ಒಳಕ್ಕೆ ಬಿಡಬಾರದು ಎಂದು ತಮ್ಮ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದರಿಂದ ಬೇಸತ್ತ ಸಚಿವ ಸೋಮಣ್ಣ SPG ಅವರಿಗೆ ಕನ್ವಿನ್ಸ್​ ಮಾಡ್ತೀನಿ. ಆದರೆ ನಮ್ಮವರದೇ ಜಾಸ್ತಿಯಾಗಿದೆ. ಯಾವನು ಬೈದವನು. ಅವನ ಮಖಕ್ಕೆ ಸರಿಯಾಗಿ ಉಗಿದಿದೀನಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.‌

ಬೆಂಗಳೂರಿನತ್ತ ಹೊರಟ ಪ್ರಧಾನಿ ಮೋದಿ ಈ ಮಧ್ಯೆ ಪ್ರಧಾನಿ ಮೋದಿ ಇದೀಗತಾನೆ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪಲಿದ್ದಾರೆ.

Published On - 11:14 am, Thu, 2 January 20

Follow Us
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ